Spardhavani

  • NOTIFICATION
  • CENTRAL GOV’T JOBS
  • STATE GOV’T JOBS
  • ADMIT CARDS
  • PRIVATE JOBS
  • CURRENT AFFAIRS
  • GENERAL KNOWLEDGE
  • Current Affairs Mock Test
  • GK Mock Test
  • Kannada Mock Test
  • History Mock Test
  • Indian Constitution Mock Test
  • Science Mock Test
  • Geography Mock Test
  • Computer Knowledge Mock Test
  • INDIAN CONSTITUTION
  • MENTAL ABILITY
  • ENGLISH GRAMMER
  • COMPUTER KNOWLDEGE
  • QUESTION PAPERS

prabandha in kannada

ಜಾಗತೀಕರಣ ಪ್ರಬಂಧ | jagatikarana prabandha in kannada.

ಜಾಗತೀಕರಣ ಪ್ರಬಂಧ | Jagatikarana Prabandha In Kannada

jagatikarana prabandha in kannada, Jagatikarana Prabandha in Kannada, ಜಾಗತೀಕರಣ ಪ್ರಬಂಧ, ಜಾಗತೀಕರಣ ಪ್ರಬಂಧ Globalization Essay in Kannada Jagatikarana Prabandha in Kannada jagatikarana essay in kannada essay on jagatikarana in kannada, ಜಾಗತೀಕರಣ ಪ್ರಬಂಧ ಕನ್ನಡ Pdf, ಜಾಗತೀಕರಣದ ಬಗ್ಗೆ ಪ್ರಬಂಧ, ಪ್ರಬಂಧ – ಜಾಗತೀಕರಣ, ಜಾಗತೀಕರಣ ಪ್ರಬಂಧ pdf, Essay on Globalization in Kannada

Jagatikarana Prabandha In Kannada

ಜಾಗತೀಕರಣ’ ಎಂಬುದು ವ್ಯಾಪಕವಾದ ಅರ್ಥವುಳ್ಳದ್ದು ಮತ್ತು ವಿಶ್ವವ್ಯಾಪಿಯಾದುದು. ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಂಸ್ಕೃತಿಗಳು ಜಗದ ಜಾಲದ ವಿನಿಮಯಕ್ಕೆ ಒಳಪಡುವುದನ್ನು ‘ಜಾಗತೀಕರಣ’ ಎಂದು ಕರೆಯಲಾಗುತ್ತದೆ. ವ್ಯಾಪಾರ, ವಿದೇಶಿ ನೇರ ಬಂಡವಾಳ, ಬಂಡವಾಳದ ಹರಿವು ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆಯಲ್ಲಿ ಅಂತಾರಾಷ್ಟ್ರೀಯ ಕತೆಯು ಸಮನ್ವಯಗೊಳ್ಳುತ್ತದೆ. ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುವುದು. ಜನಪ್ರಿಯ ಅಥವಾ ಭಾಷೆ, ಕಲ್ಪನೆಗಳ ಹರಡುವಿಕೆಯನ್ನು ಸೂಚಿಸಲು ಜಾಗತೀಕರಣ ಪದವನ್ನು ಬಳಸುತ್ತಿದ್ದೇವೆ. ಉದಾಹರಣೆಗೆ, ಮೆಕ್‌ಡೊನಾಲ್ಡ್, ಕೆಎಫ್‌ಸಿಗಳು ಹೊರದೇಶದಿಂದ ನಮ್ಮ ದೇಶಕ್ಕೆ ಕಾಲಿಟ್ಟಿರುವ ಆಹಾರ ಸಂಸ್ಕೃತಿ ಗಳು. ಈಗ ಇವು ಸ್ಥಳೀಯವಾಗಿ ಜನಪ್ರಿಯಗೊಂಡು ನಮ್ಮ ಆಹಾರ ಪದ್ಧತಿಯಲ್ಲಿ ಬೆರೆತುಹೋಗುತ್ತಿವೆ. ವಿದೇಶಿ ಆಹಾರ ಸಂಸ್ಕೃತಿಯು ಈ ನೆಲದಲ್ಲಿ ಕಾಲೂರಿ ಇಲ್ಲಿನ ತಿಂಡಿತಿನಿಸುಗಳು ಹಿನ್ನೆಲೆಗೆ ಸರಿಯುತ್ತಿವೆ. ಇದೇ ರೀತಿಯಲ್ಲಿ ಪ್ರಾದೇಶಿಕ ಭಾಷೆಗಳು ಇಂಗ್ಲಿಪಿನ ಎದುರು ಪೈಪೋಟಿ ನಡೆಸಲಾರದೆ ಮರೆಯಾಗುತ್ತಿವೆ. ವೇಷಭೂಪಣ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅಂತಾರಾಷ್ಟ್ರೀಯ ಟ್ರೆಂಡ್‌ಗಳು ನಿಯಂತ್ರಿಸುತ್ತಿವೆ.

ಜಾಗತೀಕರಣ ಪ್ರಬಂಧ

ಜಾಗತೀಕರಣ ಪ್ರಬಂಧ | Jagatikarana Prabandha In Kannada

ನಮ್ಮ ದೇಶದ ಕಚ್ಚಾ ವಸ್ತುಗಳನ್ನು ತೆಗೆದುಕೊಂಡ ಅಂತಾರಾಷ್ಟ್ರೀಯ ಕಂಪೆನಿಗಳು ಅವುಗಳನ್ನು ಸಿದ್ಧವಸ್ತುಗಳನ್ನಾಗಿ ಮಾರ್ಪಡಿಸಿ, ನಮಗೇ ಮಾರಿ ಹಣ ಸಂಪಾದನೆ ಮಾಡಿಕೊಳ್ಳುತ್ತವೆ. ಜನ ಇಂದು ಕೃಪಿ ಕೆಲಸದಿಂದ ವಿಮುಖರಾಗಿ ಹೊಲಗದ್ದೆ ಗಳನ್ನು ಮಾರಿಕೊಳ್ಳುತ್ತಿದ್ದಾರೆ. ಹೀಗೆ ನಾನಾ ಬಗೆಯ ಆರ್ಥಿಕ-ಸಾಂಸ್ಕೃತಿಕ ಪಲ್ಲಟಗಳನ್ನು ಜಾಗತೀಕರಣದ ಕಾರಣದಿಂದಾಗಿ ನಾವು ಎದುರಿಸುತ್ತಿದೇವೆ. ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತೀಕರಣದ ಸಿಲುಕಿರುವುದು, ಸಿಲುಕಲೇ ಬೇಕಾಗಿರುವುದು ಅನಿವಾರ್ಯತೆಯಾಗಿದೆ. .

ಜಾಗತೀಕರಣ ಪ್ರಬಂಧ | Jagatikarana Prabandha In Kannada

ಇತರೆ ಪ್ರಬಂಧಗಳನ್ನು ಓದಿ

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ

ಒಂದು ರಾಷ್ಟ್ರ-ಒಂದು ಭಾಷೆ ಪ್ರಬಂಧ

ಧಾರ್ಮಿಕ ಹಬ್ಬಗಳು ಪ್ರಬಂಧ

ನನ್ನ ಶಾಲೆ ಕನ್ನಡ ಪ್ರಬಂಧ

ತಾಯಿಯ ಕುರಿತು ಪ್ರಬಂಧ

' src=

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

  • Privacy Policy
  • Terms and Conditions

M. Laxmikanth 7th Edition Indian Polity Download Free Pdf 100%

LearnwithAmith

ಭಾರತದಲ್ಲಿ ನಗರೀಕರಣ ಸಮಸ್ಯೆ ಮತ್ತು ಸವಾಲುಗಳು | Urbanization problem and challenges in India 2024 | Essay for IAS, KAS

Photo of Amith

Table of Contents

ಭಾರತದಲ್ಲಿ ನಗರೀಕರಣ (Urbanization in India):

ನಗರ ಮತ್ತು ನಗರೀಕರಣದ ಅರ್ಥ ಮತ್ತು ವ್ಯಾಖ್ಯೆ:.

ಸಾಮಾನ್ಯವಾಗಿ ಐದು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ ಕೃಷಿಯೋತ್ತರ ಚಟುವಟಿಕೆಗಳನ್ನು ಅವಲಂಬಿಸಿರುವ ಮಾಧ್ಯಮಿಕ ಸಂಬಂಧವುಳ್ಳ ವೈವಿಧ್ಯಮಯ ಜೀವನ ವಿಧಾನವುಳ್ಳ ಜನವಸತಿ ಪ್ರದೇಶವನ್ನು ನಗರ ಎನ್ನುತ್ತೇವೆ.

ವ್ಯಾಖ್ಯೆಗಳು: ನಗರೀಕರಣ

ಲೂಯಿಸ್‌ ವರ್ತ ಪ್ರಕಾರ ನಗರವನ್ನು ಈ ಕೆಳಕಂಡಂತೆ ವ್ಯಾಖ್ಯಾನಿಸಿದ್ದಾರೆ. “ನಗರವೆಂಬುದು ದೊಡ್ಡ ಗಾತ್ರದ, ಹೆಚ್ಚು ಜನ ಸಾಂದ್ರತೆಯುಳ್ಳ ಹಾಗೂ ಸಾಮಾಜಿಕವಾಗಿ ವೈವಿಧ್ಯತೆಯನ್ನು ಹೊಂದಿದ ಜನರ ಶಾಶ್ವತ ನೆಲೆಯಾಗಿದೆ”.

ಜಾರ್ಜ್ ಎತಿಯೋಡರ್‌ಸನ್ (Gergeatheodorson)ರ ಪ್ರಕಾರ “ನಗರವು ಹೆಚ್ಚು ಜನಸಾಂದ್ರತೆಯನ್ನು ಹೊಂದಿರುವ, ಕೃಷಿಯೇತರ ವೃತ್ತಿಗಳ ಮೇಲೆ ಹೆಚ್ಚು ಆವಲಂಬಿತವಾದ ವಿಶೇಷ ಪರಿಣತಿ ಹೊಂದಿರುವ, ಅವೈಯಕ್ತಿಕ ಮತ್ತು ಮಾಧ್ಯಮಿಕ ಸಂಬಂಧವನ್ನು ಹೊಂದಿರುವ ಹಾಗೂ ಔಪಚಾರಿಕ ಸಾಮಾಜಿಕ ನಿಯಂತ್ರಣಗಳ ಮೇಲೆ ಅವಲಂಬಿತವಾಗಿರುವ ಸಮುದಾಯವಾಗಿದೆ.”

ಸಾಮಾನ್ಯವಾಗಿ ನಗರೀಕರಣವನ್ನು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆಯಿಂದಾಗಿ ನಗರದಲ್ಲಿ ಜನಸಂಖ್ಯೆಯು ಹೆಚ್ಚಳವಾಗಿ ನಗರವಾಸಿಗಳಾಗುವುದನ್ನು ನಗರೀಕರಣ ಎಂದು ಕರೆಯುತ್ತೇವೆ.

ಥಾನ್ಸನ್ ವಾರೆನ್ ಸಮಾಜ ವಿಜ್ಞಾನದ ವಿಶ್ವಕೋಶದಲ್ಲಿ ಈ ರೀತಿ ವ್ಯಾಖ್ಯಾನಿಸಿದ್ದಾರೆ. “ನಗರೀಕರಣವೆಂದರೆ ಕೃಷಿಯಿಂದ ಕೃಷಿಯೇತರ ಚಟುವಟಿಕೆಗಳಾದ ವ್ಯಾಪಾರ, ಉತ್ಪಾದನೆ, ನೌಕರಿ ಇತ್ಯಾದಿ ವೃತ್ತಿಗಳ ಮೇಲೆ ಅವಲಂಬಿಸಿರುವುದೇ ಆಗಿವೆ.”

ಭಾರತದ ನಗರಗಳ ಐತಿಹಾಸಿಕ ಹಿನ್ನೆಲೆ (Historical Background of Urbanization in India): ನಗರೀಕರಣ ಭಾರತೀಯರು ಸುಮಾರು 5,000 ವರ್ಷಗಳ ಹಿಂದೆಯೇ ನಗರಗಳನ್ನು ನಿರ್ಮಿಸಿದ್ದರು. ಸಿಂಧೂ ನಾಗರೀಕತೆಯ ಕಾಲದಲ್ಲಿ ಹರಪ್ಪ ಮತ್ತು ಮೆಹಂಜೋದಾರ್ ಪ್ರಮುಖ ನಗರಗಳಾಗಿದ್ದವು. ನಗರಗಳ ಬಡಾವಣೆ, ವಿಶಾಲವಾದ ರಸ್ತೆಗಳ, ಒಳಚರಂಡಿ ವ್ಯವಸ್ಥೆ ಎಲ್ಲವೂ ಉತ್ತಮ ನಗರ ಆಡಳಿತವನ್ನು ಸಂಕೇತಿಸುತ್ತಿದ್ದವು. ಮಗದ ಮತ್ತು ವೇದಗಳ ಕಾಲದಲ್ಲಿ ಆಯೋದ್ಯಾ, ಕಾಶಿ, ಪಾಟಲಿಪುತ್ರ, ಇಂದಪಸ್ಥ ನಗರಗಳು ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಗಳಿಸಿದ್ದವು.

ನಗರೀಕರಣ

ಮಧ್ಯ ಕಾಲದಲ್ಲಿ ಆಗ್ರ, ದೆಹಲಿ, ಫತೇಪುರ್‌ ಸಿಕ್ರಿ, ಲಕ್ಷ್ಮೀ, ಹೈದರಾಬಾದ್, ವಿಜಯಪುರ, ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರು, ಅಹಮದ್‌ನಗರ ಇತ್ಯಾದಿಗಳು ಬೆಳವಣಿಗೆಯಾದುವು.

ಬ್ರಿಟೀಷರ ಕಾಲದಲ್ಲಿ ಬಂದರು ನಗರಗಳಾದ ಕೋಲ್ಕತ್ತಾ, ಮುಂಬೈ, ಚೆನ್ನೈ ನಗರಗಳು, ಸ್ವಾತಂತ್ರ್ಯದ ನಂತರ ಚಂಡೀಗಡ್, ಭುವನೇಶ್ವರ್, ಗಾಂಧೀನಗರ, ದುರ್ಗಪುರ, ನೈವೇಲಿ ಮೊದಲಾದ ನಗರಗಳು ಬೆಳೆದವು. ಅದೇ ರೀತಿ ಕೈಗಾರಿಕಾ ನಗರಗಳಾದ ಬಿಲಾಯಿ, ರೋರ್‌ ಖೇಲ್, ದುರ್ಗಾಪುರ್, ಚಿತ್ತರಂಜನ್, ಭದ್ರಾವತಿ, ರೂಪನಾರಾಯಣಪುರ, ವಿಶಾಖಪಟ್ಟಣ ಮೊದಲಾದ ನಗರಗಳು ಬೆಳವಣಿಗೆಯಾಗಿದ್ದು ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಯಿಂದಾಗಿ ನಗರಗಳು ಮಹಾನಗರಗಳಾಗಿ ಪರಿವರ್ತನೆ ಹೊಂದುತ್ತಿವೆ.

ಭಾರತದಲ್ಲಿ 1,00,000ಕ್ಕಿಂತ ಕಡಿಮೆ, ಜನಸಂಖ್ಯೆ ಹೊಂದಿರುವ ಪ್ರದೇಶಗಳನ್ನು ಪಟ್ಟಣಗಳೆಂದು 1,00,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳನ್ನು ಮಹಾನಗರಗಳೆಂದು ಕರೆಯಲಾಗುತ್ತದೆ. ಈಗ ಭಾರತದಲ್ಲಿ ಬಾಂಬೆ, ಕೋಲ್ಕತ್ತಾ, ಚೆನ್ನೈ, ದೆಹಲಿ, ಬೆಂಗಳೂರು, ಹೈದರಾಬಾದ್, ಋಣೆ, ಅಹಮಾದಬಾದ್, ಲಖೋ, ಮೊದಲಾದವು ಈ ಪಟ್ಟಿಗೆ ಸೇರಿತ್ತವೆ. 2011 ಜನಗಣತಿಯ ಪ್ರಕಾರ ಭಾರತದಲ್ಲಿ ಶೇ.31.8 ಸಂಖ್ಯೆ ಜನರು ನಗರವಾಸಿಗಳಾಗಿದ್ದಾರೆ.

ಕರ್ನಾಟಕದ ನಗರೀಕರಣ (Urbanization in Karnataka):

ಕರ್ನಾಟಕವು ಭಾರತದ ನಗರೀಕರಣದಲ್ಲಿ ಏಳನೇ ಸ್ಥಾನದಲ್ಲಿದೆ. 2011ರ ಜನಗಣತಿಯ ಪ್ರಕಾರ 6.1 ಕೋಟೆಯ ಜನರಲ್ಲಿ 2.35 ಕೋಟಿಯ ಜನ (38.6%) ನಗರವಾಸಿಗಳಾಗಿದ್ದಾರೆ. ನಗರೀಕರಣ ಪ್ರಕ್ರಿಯೆಯಲ್ಲಿ ಕರ್ನಾಟಕವು 2001- 11ರ ಅವಧಿಯಲ್ಲಿ ಶೇ.4.68ರಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಜಿಲ್ಲಾ ಮಟ್ಟದಲ್ಲಿ ಬೆಂಗಳೂರು ಜಿಲ್ಲೆಯು ಶೇ.91 ಪ್ರಮಾಣ ನಗರೀಕರಣವಾಗಿದ್ದು ರಾಜ್ಯದಲ್ಲಿ ಅತಿ ಹೆಚ್ಚು ನಗರೀಕರಣಗೊಂಡ ಜಿಲ್ಲೆಯಾಗಿದೆ. ನಂತರ ಸಾಲಿನಲ್ಲಿ ಧಾರವಾಡ ಶೇ.57, ದಕ್ಷಿಣ ಕನ್ನಡ ಶೇ.48, ಮೈಸೂರು ಶೇ.41, ಬಳ್ಳಾರಿ ಶೇ.38ರ ಅನುಕ್ರಮದಲ್ಲಿ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಹೆಚ್ಚು ನಗರೀಕರಣಗೊಂಡ ಜಿಲ್ಲೆಗಳಾಗಿವೆ.

ಕಡಮೆ ನಗರೀಕರಣಗೊಂಡ ಜಿಲ್ಲೆಗಳಲ್ಲಿ ಕೊಡಗು ಶೇ.15 ನಗರೀಕರಣಗೊಂಡ ರಾಜ್ಯದಲ್ಲಿ ಅತ್ಯಂತ ಕಡಿಮೆ ನಗರೀಕರಣಗೊಂಡ ಜಿಲ್ಲೆಯಾಗಿದ್ದರೆ ನಂತರದ ಸ್ಥಾನದಲ್ಲಿ ಕೊಪ್ಪಳ ಶೇ.17, ಮಂಡ್ಯ ಶೇ.17, ಚಾಮರಾಜನಗರ ಶೇ.17 ಮತ್ತು ಯಾದಗಿರಿ ಜಿಲ್ಲೆಯು ಶೇ.19 ನಗರೀಕರಣಗೊಂಡಿವೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 32.91 ಲಕ್ಷ ಜನ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಕೊಳಚೆ ನಿವಾಸಿಗಳ ಸಂಖ್ಯೆ 2001ರಿಂದ 2011ರಲ್ಲಿ 18.89 ಲಕ್ಷ ಹೆಚ್ಚಳವಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ ಶೇ.21.5 ಕೊಳಚೆ ಪ್ರದೇಶದ ನಿವಾಸಿಗಳಾಗಿದ್ದಾರೆ.

ಭಾರತದ ನಗರ ಸಮಸ್ಯೆಗಳು (Problems of Indian Cities): ನಗರೀಕರಣ

ಭಾರತದ ನಗರ ಸಮಸ್ಯೆಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

1) ನಗರದ ಬಡತನ (Urban Poverty):

ನಗರದ ಬಡತನವು ಕೈಗಾರೀಕರಣ ಮತ್ತು ನಗರೀಕರಣದ ಕೊಡುಗೆ. ಬಡತನ ಮತ್ತು ಜನದಟ್ಟಣೆ ನಗರದ ಸಾಮಾನ್ಯ ಲಕ್ಷಣವಾಗಿದೆ.

ನಗರದ ಅರ್ಧದಷ್ಟು ಜನ ಬಡತನದಲ್ಲಿದ್ದು ಕಡಿಮೆ ಜೀವನಮಟ್ಟದಲ್ಲಿ ವಾಸಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಡಿಮೆ ಭತ್ಯ, ಶ್ರೀಮಂತ ಪರ ಆರ್ಥಿಕ ನೀತಿಗಳು, ನಿಶ್ಚಿತ ಆದಾಯವಿಲ್ಲದಿರುವುದು ಮತ್ತು ಹಣದುಬ್ಬರ ಇತ್ಯಾದಿ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (United Nations Development Programme) ನೆರವಿನಿಂದ ಭಾರತದಲ್ಲಿ ಮೊದಲ ಬಾರಿಗೆ ನಗರ ಪ್ರದೇಶದ ಬಡತನದ ಸ್ವರೂಪದ ಬಗ್ಗೆ ವರದಿಯನ್ನು ಪ್ರಕಟಿಸಲಾಯಿತು. “ಭಾರತದ ನಗರಗಳ ಗಡಿಯಾರದ ಅರ್ಥಕೋಶ 2009 (Indian Urban Poverty Report 2009) ಅದು ನಗರ ಗರೀಬರು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಬದ್ಧವಾದ ಬದಲಾವಣೆಗಳ ಆವಶ್ಯಕತೆಯನ್ನು ಹೇಳಿದೆ.”

ಈ ವರದಿಯು ನಗರದ ಬಡತನಕ್ಕೆ ಹಲವು ಕಾರಣಗಳನ್ನು ಗುರುತಿಸಿದೆ. ಮುಖ್ಯವಾಗಿ ವಲಸೆ, ಮೂಲಭೂತ ಸೌಕಯ್ಯಗಳ ಕೊರತೆ ಮತ್ತು ನಗರದ ಕೊಳಗೇರಿಗಳು ನಗರದ ಭೂಮಿಯ ಬೆಲೆಯಲ್ಲಿ ಆಗುತ್ತಿರುವ ಏರಿಕೆ, ನಗರದ ರಿಯಲ್ ಎಸ್ಟೇಟ್, ವ್ಯವಹಾರದಲ್ಲಿ ಹಣ ತೊಡಗಿಸಿರುವುದು, ನಗರದ ಆಡಳಿತದಲ್ಲಿ ಮತ್ತು ನಗರದ ಬಡಜನತೆ ಭಾಗವಹಿಸುವಿಕೆ ತೀರಾ ಕಡಿಮೆಯಾಗುತ್ತಿರುವುದು.

ನಗರದ ಬಡತನ ಸಮಸ್ಯೆಯ ನಿವಾರಣೆಗೆ ಭಾರತದ ನಗರದ ಬಡತನ ವರದಿ 2009 ಸಲಹೆಗಳನ್ನು ನೀಡಿದೆ. ಮೂಲಭೂತ ಸೌಕಯ್ಯಗಳನ್ನು ಎಲ್ಲಾ ವರ್ಗದವರಿಗೂ ಸಮಾನವಾಗಿ ಒದಗಿಸುವುದು, ಸಣ್ಣ ಮತ್ತು ಮಧ್ಯಮ ಗಾತ್ರದ ಪಟ್ಟಣಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದು. ಕೊಳಗೇರಿಗಳಿಗೆ ವಿದ್ಯುತ್‌ ಸಂಪರ್ಕ, ಶೌಚಾಲಯಗಳ ನಿರ್ಮಾಣ, ಸಮರ್ಪಕ ಒಳಚರಂಡಿ ವ್ಯವಸ್ಥೆ ಒದಗಿಸುವಂತೆ ಸಲಹೆ ನೀಡಿದೆ.

ಈ ವರದಿಯು ನಗರದ ವಲಸೆ, ಭೂಮಿಯ ಬೆಲೆ, ಬಡವರ-ಶ್ರೀಮಂತರ ಅಂತರವನ್ನು ಕಡಿಮೆ ಮಾಡುವುದರ ಬಗ್ಗೆ, ನಗರದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ, ಅಸಂಘಟಿತ ಕಾರ್ಮಿಕರ ಬಗ್ಗೆ ಕಾಳಜಿ ವ್ಯಕ್ತಪಡಿಸಿತು ಮತ್ತು ಅವರ ಜೀವನ ಸುಧಾರಣೆಯ ಬಗ್ಗೆ ಹೆಚ್ಚಿನ ಒತ್ತು ನೀಡಿತು.

2) ಕೊಳಚೆ ಪ್ರದೇಶ (Slums):

ನಗರದ ಕೊಳಚೆ ಪ್ರದೇಶದ ಸಮಸ್ಯೆಯು ನಗರದ ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಭಾರತ ಸರ್ಕಾರವು ನಗಾರಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೊಳಚೆ ಪ್ರದೇಶವನ್ನು ಈ ಕೆಳಕಂಡಂತೆ ಅರ್ಥೈಸಿದೆ. “ಶಿಥಿಲ ಕಟ್ಟಡಗಳು, ಜನದಟ್ಟಣೆ, ಅಸಮರ್ಪಕ ಕಟ್ಟಡಗಳು, ಕಿರಿದಾದ ಓಣಿಗಳು, ಅಸಮರ್ಪಕ ಗಾಳಿ, ಬೆಳಕು, ಶೌಚಾಲಯ ಮತ್ತು ಸ್ನಾನಗೃಹಗಳ ಅಭಾವ, ಸಮುದಾಯ ಸೌಕರ್ಯಗಳ ಕೊರತೆ ಅಥವಾ ಇವುಗಳ ಯಾವುದೇ ಒಂದು ಲಕ್ಷಣದ ಪ್ರದೇಶವೇ ಕೊಳಚೆ ಪ್ರದೇಶ.”

ಕೊಳಚೆ ಪ್ರದೇಶಗಳನ್ನು ಕೆಳ ವರ್ಗದ ನೆರೆಹೊರೆ, ಕಡಿಮೆ ಆದಾಯದ ಪದೇಶಗಳು, ಹಿಂದುಳಿದ ಪ್ರದೇಶ, ಅನಧಿಕೃತ ಪ್ರದೇಶ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತೇವೆ. ನಗರದ ಬಡ ಮತ್ತು ವಲಸೆ ಜನ, ಕೂಲಿ ಕೆಲಸಗಳಿಗಾಗಿ ಬಂದವರೂ, ಬಡ ಕೈಗಾರಿಕಾ ಕಾರ್ಮಿಕರು, ದಿನಗೂಲಿ ನೌಕರರು, ಸಣ್ಣ ಅಂಗಡಿ ಮಾಲೀಕರು, ಚಿಂದಿ ಆಯುವವರು, ತರಕಾರಿ ಮಾರುವವರು ಇಂಥಹ ಹಲವು ವರ್ಗದ ಜನರಿಗೆ ಅದು ವಾಸ ಸ್ಥಳವಾಗಿದೆ.

ಕೊಳಚೆ ಪ್ರದೇಶಗಳ ಉಗಮಕ್ಕೆ ಕಾರಣಗಳು (Emergence of Slums):

ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆಯು, ನವದೆಹಲಿ (The National Institute of Urban Affairs New Delhi) ಕೊಳಗೇರಿಗಳ ಉಗಮಕ್ಕೆ ಮೂರು ಅಂಶಗಳು ಕಾರಣವಾಗಿವೆ ಎಂದು ಅಭಿಪ್ರಾಯಪಟಟಿದೆ.

1) ನಗರದ ಜೀವನ ಶೈಲಿ ಮತ್ತು ನಗರದಲ್ಲಿ ಉದ್ಯೋಗಗಳ ಲಭ್ಯತೆ,

2) ವಸತಿಯನ್ನು ಬೇಡಿಕೆಗೆ ಅನುಸಾರವಾಗಿ ಪೂರೈಸಲಾಗದ ಸ್ಥಿತಿ.

3) ನಗರದ ಪ್ರಸ್ತುತ ಭೂ ನಿಯಮಗಳು ಬಡ ಜನರು ವಸತಿ ಭೂಮಿಯನ್ನು ಖರೀದಿಸಲಾಗದ ಸ್ಥಿತಿ.

ಈ ಸಂಸ್ಥೆಯು ಗಮನಿಸಿರುವ ಮತ್ತೊಂದು ಅಂಶವೆಂದರೆ ನಗರದ ಬಡ ಜನರು ಬೇರೆ ಅವಕಾಶವಿಲ್ಲದೆ ಎಲ್ಲಿ ಖಾಲಿ ಜಾಗ ಕಂಡು ಬರುವುದೋ ಅಲ್ಲಿ ತಮ್ಮ ವಾಸಸ್ಥಾನವನ್ನು ಮಾಡಿಕೊಳ್ಳುವರು. ಹೀಗೆ ಕೆಲವೊಮ್ಮೆ ಕೊಳಚೆ ಪ್ರದೇಶಗಳು ನಗರದ ಹಳೆಯ ಪರದೇಶಗಳಾಗಿರಬಹುದು ಅಥವಾ ಹಳ್ಳಿ ನಗರದ ಭಾಗವಾಗಿ ಹೊಸ ಕೊಳಚೆ ಪ್ರದೇಶವಾಗಿ ಮಾರ್ಪಾಡಾಗಬಹುದು.

ಕೊಳಚೆ ಪ್ರದೇಶದ ಸಾಮಾನ್ಯ ಲಕ್ಷಣಗಳು (Characteristics of Slums): ನಗರೀಕರಣ

ಕೊಳಚೆ ಪ್ರದೇಶಗಳ ಭೌತಿಕ ಮತ್ತು ಸಾಮಾನ್ಯ ಲಕ್ಷಣಗಳು ಈ ಕೆಳಕಂಡಂತಿವೆ. ಅವುಗಳೆಂದರೆ,

(1) ಶಿಥಿಲ ಮತ್ತು ವಾಸಕ್ಕೆ ಯೋಗ್ಯವಲ್ಲದ ಕಟ್ಟಡಗಳು (Dilapidiated & Poor Housing): ನಗರೀಕರಣ

ಕೊಳಚೆ ಪ್ರದೇಶಗಳ ಮನೆಗಳು ಶಿಥಿಲಾವಸ್ಥೆಯಿಂದ ಕೂಡಿದ್ದು ತಗಡು, ತೆಂಗಿನಗರಿ, ಪ್ಲಾಸ್ಟಿಕ್ ಕವರ್‌ಗಳ ಮೇಲ್ಬಾವಣಿ ಹೊಂದಿದ್ದು ಸಾಮಾನ್ಯವಾಗಿ ಅನಧಿಕೃತ ಪ್ರದೇಶಗಳಲ್ಲಿ ನಿರ್ಮಾಣವಾಗಿರುತ್ತವೆ.

(2) ಅತಿಯಾದ ಜನಸಾಂದ್ರತೆ ಮತ್ತು ಮನೆಗಳು (High density of Population & Housing): ನಗರೀಕರಣ

ಇದು ಅತಿ ಜನದಟ್ಟಣೆಗೆ ಮತ್ತು ಉಸಿರು ಕಟ್ಟುವ ವಾತಾವರಣವನ್ನು ಸೃಷ್ಟಿಸುತ್ತದೆ. ಒಂದು ಕೊಠಡಿಯ ಮನೆಯನ್ನು ತಮ್ಮ ಎಲ್ಲಾ ಅವಶ್ಯಕತೆಗಳ ಪೂರೈಕೆಗೆ ಬಳಸುತ್ತಾರೆ. ಉದಾ: ಮುಂಬೈ ಮತ್ತು ಇತರೆ ಮಹಾನಗರಗಳಲ್ಲಿ 100ರಿಂದ 150 ಚದರ ಅಡಿ ಮನೆಗಳಲ್ಲಿ ಹತ್ತಕ್ಕೂ ಹೆಚ್ಚಿನ ಜನ ವಾಸಿಸುತ್ತಾರೆ.

(3) ಮೂಲಭೂತ ಸೌಕಯ್ಯಗಳ ಕೊರತೆ (Lack of Public Utilities and Facilities): ನಗರೀಕರಣ

ಅಸಮರ್ಪಕ ಒಳಚರಂಡಿ ವಯವಸ್ಥೆ, ಕುಡಿಯುವ ನೀರಿನ ಕೊರತೆ, ವಿದ್ಯುತ್ ಕೊರತೆ, ಆರೋಗ್ಯ ಕೇಂದ್ರಗಳು, ಶೌಚಾಲಯಗಳು, ಮಕ್ಕಳ ಆಟದ ಮೈದಾನಗಳು ಅತಿ ವಿರಳವಾಗಿ ಕಂಡು ಬರುತ್ತವೆ.

(4) ಸಾಮಾಜಿಕ ಪ್ರತ್ಯೇಕತೆ (Apathy and Social Isolation): ನಗರೀಕರಣ

ಕೊಳಚೆ ಪ್ರದೇಶಗಳು ನಗರ ಸಮೀಪದ ಭಾಗವೇ ಆಗಿದ್ದರೂ ನಗರದ ಜನಸಂಖ್ಯೆಯಿಂದ ಅವು ಪ್ರತ್ಯೇಕವಾಗಿದೆ. ಈ ಕಾರಣಗಳಿಂದಾಗಿ ಕೊಳಚೆ ಪ್ರದೇಶದ ನಿವಾಸಿಗಳು ತಮ್ಮ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳುವುದು ಅಸಾಧ್ಯವಾಗಿದೆ.

3) ನಗರ ವಸತಿ ಸಮಸ್ಯೆ (Problems of Urban Housing & Slums): ನಗರೀಕರಣ

ನಗರದ ಹೆಚ್ಚಿನ ಜನ ಒಂದು ಕೊಠಡಿಯ ಮನೆಯಲ್ಲಿ ಅಥವಾ ಹರಕಲು ಗುಡಿಸಲು ಅಥವಾ ಬೀದಿಬದಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಮತ್ತೊಂದು ದುರಂತವೆಂದರೆ, ಅಗತ್ಯ ನಾಗರೀಕ ಸೇವೆಗಳಾದ ನೀರಿನ ಪೂರೈಕೆ, ಈ ಜನರ ಚರಂಡಿ, ವಿದ್ಯುತ್, ರಸ್ತೆ ಮತ್ತು ಶೌಚಾಲಯಗಳು ಇರುವುದಿಲ್ಲ. ಗ್ರಾಮಗಳಿಂದ ವಲಸೆ ಬರುವ ಅಧಿಕ ಜನ ಕಡಿಮೆ ನೈಮಣ್ಯತೆ ಇರುತ್ತದೆ. ಅವರು ವ್ಯಾಪಾರ. ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ದುಡಿಯುವರು. ನೈಋಣ್ಯತೆ ಇಲ್ಲದ ವೃತ್ತಿಗಳನ್ನು ಮಾಡುತ್ತಾರೆ.

ಅವರು ವಾಸಿಸುವ ಒಂದು ಕೊಠಡಿಯಲ್ಲಿ ಅವರ ಎಲ್ಲಾ ಅಗತ್ಯಗಳು ಪೂರೈಕೆಯಾಗಬೇಕು. ಅಡಿಗೆ, ವಾಸ, ಮಲಗುವುದು ಇತ್ಯಾದಿ ಸಹಜವಾಗಿ ಆ ಪ್ರದೇಶವನ್ನು ಶುಭ್ರವಾಗಿಡಲು ಕಷ್ಟ. ಅದರಲ್ಲಿ ಮಳೆಗಾಲದಲ್ಲಿ ಇಲ್ಲಿ ವಾಸಿಸುವುದು ಕಷ್ಟವಾಗುವುದು. ಮೇಲೆ ತಿಳಿಸಿದ ಎಲ್ಲಾ ಪರಿಸ್ಥಿತಿಗಳೂ ಮುಂಬೈನ ಚಾವಲ್ಸ್ ಕಾನ್‌ಪುರದ ಅಹಾತಾಸ್, ಕೋಲ್ಕತ್ತಾದ ಬಸ್ಲಿಗಳಲ್ಲಿ, ಚೆನ್ನೈನ ಚೇರಿಗಳಲ್ಲಿ ಅಲ್ಲದೆ ಗಣಿಗಾರಿಕೆ ಮತ್ತು ಪ್ಲಾಂಟೇಶನ್‌ಗಳಲ್ಲಿ ಈ ಸ್ಥಿತಿ ಸಾಮಾನ್ಯವಾಗಿವೆ.

ಇಲ್ಲಿನ ಮನೆಗಳು ಸಾಮಾನ್ಯವಾಗಿ ಮಣ್ಣು ಅಥವಾ ಇಟ್ಟಿಗೆಯ ಗೋಡೆಗಳಾಗಿದ್ದು, ತಗಡಿನ ಹೊದಿಕೆ ಅಥವಾ ಬಿದಿರಿನ ಹೊದಿಕೆಯನ್ನು ಹೊಂದಿರುತ್ತವೆ. ರಸ್ತೆಗಳು ಕಿರಿದಾಗಿದ್ದು, ಮನೆಗಳು ಒಂದರ ಪಕ್ಕ ಮತ್ತೊಂದು ನಿರ್ಮಾಣವಾಗಿರುವುದು ಇವು ಯಾವುದೇ ಮೂಲ ಸೌಕಯ್ಯಗಳನ್ನು ಹೊಂದಿರುವುದಿಲ್ಲ.

4) ಶುಚಿತ್ವ ಮತ್ತು ಮಾಲಿನ್ಯ (Sanitation and Pollution): ನಗರೀಕರಣ

ಶುಚಿತ್ವ ಮತ್ತು ಸಮಸ್ಯೆಯು ಭ್ರಷ್ಟ ನಗರ ಆಡಳಿತ ಮತ್ತು ಅಸಮರ್ಥ ಅಧಿಕಾರಿಗಳ ಕೊಡುಗೆ. ಯೂನಿಸೆಫ್ (UNICEF) ವರದಿಯ ಪ್ರಕಾರ ಭಾರತದಲ್ಲಿ ಲಕ್ಷಾಂತರ ನಗರದ ಮಕ್ಕಳು ಸಾವನ್ನಪ್ಪುತ್ತಿದ್ದು ಕಾಲರ, ಸಿಡುಬು, ಮಲೇರಿಯಾ, ಗಂಟಲುಮ್ಮಾಗಿ ಹೊಗೆಗಳು ಇದಕ್ಕೆ ಕಾರಣವಾಗಿದೆ.

5) ಸಂಚಾರ ದಟ್ಟನೆಯ ಸಮಸ್ಯೆ: ನಗರೀಕರಣ

ಭಾರತದ ನಗರಗಳಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿದ್ದು ನಗರದ ಹೆಚ್ಚಿನ ಜನ ತಮ್ಮ ದೈನಂದಿನ ಓಡಾಟಕ್ಕೆ ಬಸ್ಸುಗಳು ಮತ್ತು ಇತರೆ ವಾಹನಗಳನ್ನು ಬಳಸುತ್ತಾರೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರು ನಗರಗಳಲ್ಲಿ ಬಸ್ಸುಗಳ ಸಂಖ್ಯೆ ಪ್ರಮಾಣಕ್ಕನುಗುಣವಾಗಿಲ್ಲ. ಪ್ರಯಾಣಿಕರು ಒಂದರಿಂದ ಎರಡು ಗಂಟೆಗಳ ಕಾಲ ಬಸ್ಸುಗಳಿಗಾಗಿ ಕಾಯುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಡಿಮೆ ಆದಾಯದಿಂದಾಗಿ ಪ್ರಯಾಣಿಕರು ಅಗ್ಗದ ಮನೆಯನ್ನು ಬಾಡಿಗೆ ಪಡೆದು ಬಹುದೂರದಲ್ಲಿ ವಾಸವಾಗಿರುವುದು. ನಗರ ವಾಹನ ದಟ್ಟಣೆಯಿಂದಾಗಿ ಹೆಚ್ಚಿನ ಜನ ದ್ವಿಚಕ್ರ ವಾಹನ ಬಳಸುವುದು ಸಾಮಾನ್ಯವಾಗಿದೆ.

6) ನೀರಿನ ಪೂರೈಕೆ ಮತ್ತು ಚರಂಡಿ ವ್ಯವಸ್ಥೆ: ನಗರೀಕರಣ

ಭಾರತದ ಯಾವುದೇ ನಗರಗಳು ದಿನದ 24 ಗಂಟೆಯು ಕುಡಿಯುವ ನೀರಿನ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಮುಖ ನಗರಗಳಾದ ಚೆನ್ನೈ, ಬೆಂಗಳೂರು, ಹೈದರಾಬಾದ್, ರಾಜ್‌ಕೋಟ್, ಆಜೀ‌, ಉದಯಪುರ, ಜೈಪುರ ಇನ್ನೂ ಮೊದಲಾದ ನಗರಗಳಲ್ಲಿ ದಿನವೊಂದಕ್ಕೆ ಕೇವಲ ಒಂದು ಗಂಟೆ ಮಾತ್ರ ನೀರನ್ನು ಪೂರೈಸಲಾಗುತ್ತಿದೆ. ಬೇಸಿಗೆ ಕಾಲದಲ್ಲಿ ಇದು ಮತ್ತಷ್ಟು ತೊಂದರೆಯಾಗುತ್ತಿದೆ. ನೀರಿನ ಪೂರೈಕೆಯು ದುಬಾರಿಯಾಗಿದ್ದು 200-300 ಕಿ.ಮೀ. ದೂರದಿಂದ ನೀರನ್ನು ಪೂರೈಸಬೇಕಾಗಿದೆ.

ಕುಡಿಯುವ ನೀರಿನ ಜೊತೆ ಒಳಚರಂಡಿ ವ್ಯವಸ್ಥೆಯು ತುಂಬಾ ಹದಗೆಟ್ಟಿದೆ. ಭಾರತದಲ್ಲಿ ಯಾವ ನಗರದಲ್ಲೂ ಯೋಜನಾಬದ್ದವಾದ ಚರಂಡಿ ವ್ಯವಸ್ಥೆಯು ಕಂಡುಬರುತ್ತಿಲ್ಲ. ನಗರದ ಸುತ್ತ ಕೊಳಚೆ ನೀರಿನಿಂದ ಬೃಹತ್ ಗಾತ್ರದ ಕೆರೆಗಳನ್ನು ಎಲ್ಲೆಡೆ ನೋಡಬಹುದು.

ನಗರದ ಚರಂಡಿ ನೀರು ಮತ್ತು ಕೈಗಾರಿಕೆಗಳು ಹೊರ ಸೂಸುವ ನೀರನ್ನು ಶುದ್ದೀಕರಿಸದೆ ಹತ್ತಿರದ ನದಿಗಳಿಗೆ ಬಿಡಲಾಗುತ್ತಿದೆ. ನಗರದ ಕೈಗಾರಿಕೆಗಳು ಪರಿಸರವನ್ನು ಅಶುದ್ಧಗೊಳಿಸುತ್ತವೆ. ವಿಷಪೂರಿತ ಹೊಗೆಗಳಾದ ಇಂಗಾಲದ ಡೈಆಕ್ಸೆಡ್, ಸಲ್ಫರ್ ಡೈ ಆಕ್ಸೆಡ್, ಕಾರ್ಬನ್ ಮಿಶ್ರಣಗಳು, ಗಂಧಕದ ಮಿಶ್ರಣಗಳು, ಹಲವು ರೀತಿಯ ಕಾಯಿಲೆಗಳನ್ನು ಉಂಟುಮಾಡುತ್ತಿವೆ.

7) ಕೈಗಾರಿಕಾ ಅಪಘಾತಗಳು ಮತ್ತು ರೋಗಗಳು (Industrial Accident and Sickness): ನಗರೀಕರಣ

ಕೈಗಾರಿಕಾ ಅಪಘಾತಗಳು ಕೈಗಾರೀಕರಣದ ಮತ್ತೊಂದು ಅಪಾಯ. ಉದಾಹರಣೆಗೆ ಭೂಪಾಲ್ ಅನಿಲ ದುರಂತವು ಕೈಗಾರಿಕಾ ದುರಂತಗಳ ಮೈಲಿಗಲ್ಲು. 1984 ಡಿಸೆಂಬರ್ 2ರಂದು ಭೂಪಾಲ್ ನಗರದ ಯೂನಿಯನ್ ಕಾರ್ಬೈಡ್ ಕಂಪನಿ (Union Carbide Company)ಯಲ್ಲಿ ವಿಷಪೂರಿತ ಅನಿಲ ಮೀಥೇ‌ ಐಸೋಸಿಯಾನೇಟ್‌ (Methyl Isocyanate) ಸೋರುವಿಕೆಯಿಂದ 16,000ದಿಂದ 30,000 ಜನ ಸಾವಿಗೀಡಾದರು ಮತ್ತು ಲಕ್ಷಾಂತರ ಜನ ತೀವ್ರ ಅನಾರೋಗ್ಯ ಪೀಡಿತರಾದರು.

ನಗರದ ಸಮಸ್ಯೆಗಳಿಗೆ ಪರಿಹಾರಗಳು (Solution to Urban Problems):

1) ನಗರಗಳ ವ್ಯವಸ್ಥಿತ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿ 2) ನಗರದ ವಲಸೆಯನ್ನು ತಡೆಗಟ್ಟಲು, ಸ್ಥಳೀಯ ಯೋಜನೆಗಳ ಮೂಲಕ ತಮ್ಮ ಸ್ವಂತ ಊರುಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು

3) ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಪ್ರೋತ್ಸಾಹಿಸುವುದು. ಇದರಿಂದಾಗಿ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಬಹುದು

4) ನಗರ ಸಭೆಗಳು ಅಭಿವೃದ್ಧಿಗೆ ಅಗತ್ಯವಾದ ತಮ್ಮದೇ ಆದ ಹಣಕಾಸಿನ ಮೂಲವನ್ನು ಹುಡುಕಿಕೊಳ್ಳಬೇಕು

5) ವ್ಯವಸ್ಥಿತವಾದ ವಸತಿ ಯೋಜನೆಯನ್ನು ರೂಪಿಸಿ ಜೊತೆಗೆ ಖಾಸಗಿ

ಕಂಪನಿಗಳು ತಮ್ಮ ಹೂಡಿಕೆಯನ್ನು ವಸತಿ ಕ್ಷೇತ್ರದಲ್ಲಿ ಹುಡುಕುವಂತೆ

ಪ್ರೋತ್ಸಾಹಿಸುವುದು

6) ಬಡ ಮತ್ತು ಕಡಿಮೆ ಆದಾಯದ ಮನೆ ನಿರ್ಮಾಣಕ್ಕೆ ವಿಶೇಷ ಯೋಜನೆಗಳನ್ನು ರೂಪಿಸುವುದು. ಇದಕ್ಕಾಗಿ ವಿಶೇಷ ತಂತ್ರಜ್ಞಾನವನ್ನು ಬಳಸಿ ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸಲು ಪ್ರೋತ್ಸಾಹಿಸುವುದು

7) ಉತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಖಾಸಗಿ ಸಾರಿಗೆಯನ್ನು ಪ್ರೋತ್ಸಾಹಿಸುವುದು

8) ನಗರದ ಚಟುವಟಿಕೆಗಳಲ್ಲಿ ಸಮುದಾಯದ ಜನ ಬಾಗಿಯಾಗುವಂತೆ ಪ್ರೋತ್ಸಾಹಿಸುವುದು. ನಗರ ಸಭೆಯ ಚಟುವಟಿಕೆಗಳನ್ನು ರಚನಾತ್ಮಕವಾಗಿ ವಿಕೇಂದ್ರೀಕರಣಗೊಳಿಸುವುದು, ನಿಯಂತ್ರಿತ ಉದಾರೀಕರಣ, ಸರ್ಕಾರಿ ಅಧಿಕಾರಿ ವರ್ಗಗಳು ಮತ್ತು ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಇವರೆಲ್ಲರ ಪ್ರಾಮಾಣಿಕ ಪ್ರಯತ್ನದಿಂದಾಗಿ ಈ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.

ನಗರ ನೈರ್ಮಲ್ಯ – ಸಾಧಕ ಬಾಧಕಗಳು: ನಗರೀಕರಣ

ನಿರ್ಮಲೀಕರಣವು ಭಾರತದ ಪ್ರಮುಖ ಅಭಿವೃದ್ಧಿಯ ಸವಾಲುಗಳಲ್ಲಿ ಒಂದು. ಭಾರತದ ನಗರ ಜನಸಂಖ್ಯೆಯ ನಾಲ್ಕನೇ ಒಂದರಷ್ಟು ಜನರಿಗೆ ಸುರಕ್ಷಿತ ಶೌಚ ವ್ಯವಸ್ಥೆ, ಲಭ್ಯವಿಲ್ಲ. ನಗರ ವಾಸಿಗಳಲ್ಲಿ ಕೇವಲ 30-40% ಜನರಿಗೆ ಮಾತ್ರ ಒಳಚರಂಡಿ ವ್ಯವಸ್ಥೆ ಮತ್ತು ಬಳಸಿದ ನೀರಿನ ಪುನರ್ ಬಳಕೆಯ ವ್ಯವಸ್ಥೆ ಲಭ್ಯವಿದೆ. ಬಹುತೇಕ ನಗರಗಳಲ್ಲಿ ಬಯಲು ಶೌಚಾಲಯಗಳ ಬಳಕೆಯು ವ್ಯಾಪಕವಾಗಿದೆ ಮತ್ತು ಇದು ಪರಿಸರ ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ.

ಒಂದು ದೇಶದ ಅಭಿವೃದ್ಧಿಯನ್ನು ಅಳೆಯಲು ಕೇವಲ ಆರ್ಥಿಕ ಸೂಚ್ಯಾಂಕಗಳು ಮಾತ್ರವಲ್ಲದೆ ಮಾನವ ಅಭಿವೃದ್ಧಿ ಸೂಚ್ಯಾಂಕವೂ ಅವಶ್ಯ ಎಂಬುದು ಗೊತ್ತಿರುವ ಸಂಗತಿ. ನಮ್ಮ ನಿರಾಶಾದಾಯಕ ಸಾಮಾಜಿಕ ಸೂಚ್ಯಾಂಕಗಳನನು ಗಮನಿಸಿದರೆ ಚೀನಾದ ನಂತರದ ಮಹಾನ್ ಶಕ್ತಿ ಎಂದು ಬಿಂಬಿಸಲ್ಪಟ್ಟಿರುವ ಭಾರತದ ವಿಷಯದಲ್ಲಿ ಇದು ಅನ್ವಯಿಸುವುದೇ ಇಲ್ಲವೆನಿಸುತ್ತದೆ.

ವಿಶ್ವಸಂಸ್ಥೆಯ ಅಧ್ಯಯನದ ಪ್ರಕಾರ ಭಾರತದಲ್ಲಿ ಬಹಳಷ್ಟು ಜನರಿಗೆ ಸುಧಾರಿತ ಶೌಚಾಲಯದ ಲಭ್ಯತೆ ಇರದಿದ್ದರೂ ಮೊಬೈಲ್ ಫೋನ್ ಬಹು ಸುಲಭವಾಗಿ ಕೈಗೆಟುಕುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 626 ಮಿಲಿಯನ್ ಜನರು ಬಯಲು ಶೌಚಾಲಯವನ್ನು ಬಳಸುತ್ತಾರೆ. ಅಂದರೆ ಜಗತ್ತಿನಲ್ಲಿ ಬಯಲು ಶೌಚಾಲಯ ಬಳಸುವವರಲ್ಲಿ ಶೇ.60 ಜನರು ಭಾರತದಲ್ಲಿಯೇ ಇದ್ದಾರೆ. ಜೊತೆಗೆ ಭಾರತದ ನಿರ್ಮಲೀಕರಣದ ಕೊರತೆಯ ಒಟ್ಟಾರೆ ವಾರ್ಷಿಕ ಆರ್ಥಿಕ ಪರಿಣಾಮವನ್ನು ರೂ.2.44 ಟ್ರಿಲಿಯನ್ (53.8 ಬಿಲಿಯನ್ ಅಮೆರಿಕನ್ ಡಾಲರ್) ಎಂದು ಅಂದಾಜಿಸಲಾಗಿದೆ.+

ಇದು ನಮ್ಮ ದೇಶದ 2006ರ ಜಿಡಿಪಿ ಯ 6.4%ಕ್ಕೆ ಸಮ. (ನೀರು ಮತ್ತು ನಿರ್ಮಲೀಕರಣ ಯೋಜನೆ-2007) ಕೇಂದ್ರ ಕುಡಿಯುವ ನೀರು ಮತ್ತು ನಿರ್ಮಲೀಕರಣ ಇಲಾಖೆಯು 2020ರ ವೇಳೆಗೆ ಬಯಲು ಶೌಚಾಲಯ ಮುಕ್ತ ಗುರಿ ತಲುಪಲು ಬದ್ದವಾಗಿದೆಯಾದರೂ ಇದು ನಿಜಕ್ಕೂ ಸಾಧ್ಯವಾಗುವುದೇ ಎನ್ನುವುದನ್ನು ಕಾದುನೋಡಬೇಕಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 2010ರಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಹಕ್ಕನ್ನು ಮೂಲಭೂತ ಹಕ್ಕಾಗಿ ಗುರುತಿಸಿರುವುದು ಈ ಕ್ಷೇತ್ರಕ್ಕೆ ಶಿಕ್ಷಣ, ಆಹಾರ ಭದ್ರತೆ ಮತ್ತು ಆರೋಗ್ಯದಂತಹ ಇತರ ಮೂಲಭೂತ ಹಕ್ಕೊತ್ತಾಯದ ಚಳುವಳಿಗಳ ನಡುವೆ ಸ್ಥಾನ ದೊರಕಿಸುವಲ್ಲಿ ಪ್ರೇರಕಶಕ್ತಿಯಾಗಿ ಕೆಲಸ ಮಾಡಿದೆ.

ಸ್ವಚ್ಛ ಕುಡಿಯುವ ನೀರು ಮತ್ತು ಸುಧಾರಿತ ಶೌಚವ್ಯವಸ್ಥೆ ಇವೆರಡು ಬಡತನ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ ಎಲ್ಲ ಮೂಲಭೂತ ಮಾನವ ಹಕ್ಕುಗಳ ಸಾಧನೆಗು ತಳಪಾಯ ಒದಗಿಸುತ್ತದೆ. (ಯುಎನ್‌ಡಿಪಿ, 2011) ಇದರ ಜೊತೆಗೆ ಸಾಕಷ್ಟು ಪ್ರಮಾಣದ ಹಣಕಾಸನ್ನು ಒದಗಿಸುವುದು ಸಹ ಕುಡಿಯುವ ನೀರು ಮತ್ತು ನಿರ್ಮಲೀಕರಣ ಯೋಜನೆಗಳ ಯಶಸ್ವೀ ಅನುಷ್ಠಾನ ಅತ್ಯವಶ್ಯಕ.

ವಿಶ್ವಸಂಸ್ಥೆಯ ‘ಕುಡಿಯುವ ನೀರು ಮತ್ತು ನೈರ್ಮಲ್ಯದ ಮಾನವ ಹಕ್ಕು’ ಕುರಿತ ವರದಿಯ ಪ್ರಕಾರ ಸಾಕಷ್ಟು ಪ್ರಮಾಣದ ಹಣಕಾಸು ಒದಗಿಸುವುದು ಎಂಬುದು ಕುಡಿಯುವ ನೀರು ಮತ್ತು ನಿರ್ಮಲೀಕರಣ ಸೌಲಭ್ಯ ಒದಗಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಯೋಜನೆಯ ನಿಯಂತ್ರಕ ಕ್ರಮಗಳ ವೆಚ್ಚ, ಸಂಬಂಧಿಸಿದ ಸಂಸ್ಥೆಗಳ ಬಲವರ್ಧನೆ ಹಾಗೂ ಇಡೀ ಯೋಜನೆಯ ಯಶಸ್ಸಿಗೆ ಸಂಬಂಧಿಸಿದ್ದಾಗಿರುತ್ತದೆ. (ಯುಎನ್ ಮತ್ತು ಮಾನವ ಹಕ್ಕುಗಳ ಆಯೋಗ- 2011).

ಭಾರತದಲ್ಲಿ ನಗರ ನೈರ್ಮಲ್ಯದ ಸ್ಥಿತಿ ಗತಿ: ನಗರೀಕರಣ

ಮೊದಲನೇ ಪಂಚವಾರ್ಷಿಕ ಯೋಜನೆ ಜಾರಿಯಾದಂದಿನಿಂದಲೂ ಕುಡಿಯುವ ನೀರು ಮತ್ತು ನಿರ್ಮಲೀಕರಣದ ಯೋಜನೆಗಳು ಜಾರಿಯಲ್ಲಿವೆ. ಗ್ರಾಮೀಣ ಪ್ರದೇಶಗಳಲ್ಲಿನ ನಿರ್ಮಲೀಕರಣದ ಜವಾಬ್ದಾರಿ ರಾಜ್ಯ ಸರ್ಕಾರದ್ದಾದರೆ, ನಗರಗಳಲ್ಲಿ ಮುನಿಸಿಪಾಲಿಟಿ ಮತ್ತು ರಾಜ್ಯ ಸರ್ಕಾರಗಳೆರಡೂ ಇದಕ್ಕೆ ಹೊಣೆಗಾರರು. “ನಮ್ಮ ಕೇಂದ್ರ ಸರ್ಕಾರವು ಈ ಸಮಯದಲ್ಲಿ ಉದಾರ ಸಹಾಯ ಮತ್ತು ಅನುಮೋದನೆಗಳನ್ನು ನೀಡುತ್ತದೆ” ಇತರ ಕ್ಷೇತ್ರಗಳ ತುಲನೆಯಲ್ಲಿ ಈ ಕ್ಷೇತ್ರಕ್ಕೆ ಸ್ವತಂತ್ರ ಸ್ಥಾನವೇನು ಇಲ್ಲ.

ಈ ಕ್ಷೇತ್ರದ ಮೇಲಣ ಸರ್ಕಾರದ ವೆಚ್ಚ 1%ಕ್ಕಿಂತ ಕಡಿಮೆ ಎಂಬುದನ್ನು ಗಮನಿಸಿದರೆ ಈ ವಿಷಯ ಮತ್ತಷ್ಟು ಸ್ಪಷ್ಟವಾಗುತ್ತದೆ. 2008ರಲ್ಲಿ 0.57% ರಷ್ಟಿದ್ದ ಈ ವೆಚ್ಚವು 2010ರಲ್ಲಿ 0.45ಕ್ಕೆ ಇಳಿದಿರುವುದು ಈ ಕ್ಷೇತ್ರಕ್ಕೆ ಒದಗಿಸುವ ಹಣಕಾಸಿನ ತೀವ್ರ ಕೊರತೆಯನ್ನು ತೋರಿಸುತ್ತದೆ. (ವಾಟರ್ ಏಡ್, 2001).

ಹಾಗಾಗಿ ನಿರ್ಮಲೀಕರಣವು ಭಾರತದ ಪ್ರಮುಖ ಅಭಿವೃದ್ಧಿಯ ಸವಾಲುಗಳಲ್ಲಿ ಒಂದು. ಭಾರತದ ನಗರ ಜನಸಂಖ್ಯೆಯ ನಾಲ್ಕನೇ ಒಂದರಷ್ಟು ಜನರಿಗೆ ಸುರಕ್ಷಿತ ಶೌಚವ್ಯವಸ್ಥೆ ಲಭ್ಯವಿಲ್ಲ. ನಗರವಾಸಿಗಳಲ್ಲಿ ಕೇವಲ 30-40% ಜನರಿಗೆ ಮಾತ್ರ ಒಳಚರಂಡಿ ವ್ಯವಸ್ಥೆ ಮತ್ತು ಬಳಸಿದ ನೀರಿನ ಮುನರ್‌ಬಳಕೆಯ ವ್ಯವಸ್ಥೆ ಲಭ್ಯವಿದೆ. 2001ರಲ್ಲಿ 27.8ರಷ್ಟಿದ್ದ ನಗರೀಕರಣದ ಮಟ್ಟವು 2011ರ ವೇಳೆಗೆ 31.2ರಷ್ಟಾಗಿದೆ. (2011ರ ಜನಗಣತಿ). ಆದರೆ ಬಹುತೇಕ ನಗರಗಳಲ್ಲಿ ಬಯಲು ಶೌಚಾಲಯಗಳ ಬಳಕೆಯು ವ್ಯಾಪಕವಾಗಿದೆ ಮತ್ತು ಇದು ಪರಿಸರ ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ.

ನಗರ ನಿರ್ಮಲೀಕರಣದ ಯೋಜನೆಗಳು:

ನಗರ ನಿರ್ಮಲೀಕರಣದ ಸಂಪೂರ್ಣ ಚಿತ್ರಣ ಸಿಗಬೇಕಿದ್ದರೆ, ಈ ಕುರಿತ ಕೇಂದ್ರ ಸರ್ಕಾರ ಮಟ್ಟದ ಯೋಜನೆಗಳ ಸೂಕ್ಷ್ಮ ಅಧ್ಯಯನ ಅವಶ್ಯಕ. ಇಂತಹ ಕೆಲವು ಪ್ರಮುಖ ಯೋಜನೆಗಳು ಇಂತಿವೆ,

ಜವಹಾರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ (JNNURM)

ಅ) ನಗರವಾಸಿಗಳಿಗೆ ಮೂಲ ಸೌಕರ್ಯ (BSUP)

ಆ) ರಾಜೀವ ಆವಾಸ್‌ ಯೋಜನೆ (RAY)

ಇ) ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಯೋಜನೆ

– ರಾಷ್ಟ್ರೀಯ ನಗರ ನಿರ್ಮಲೀಕರಣ ಕಾರ್ಯನೀತಿ, 2008

– ರಾಷ್ಟ್ರೀಯ ನಗರವಾಸಿ ಮತ್ತು ವಸತಿ ಯೋಜನೆ, 2007

ಕಡಿಮೆ ವೆಚ್ಚದ ಸಮಗ್ರ ಶೌಚವ್ಯವಸ್ಥೆ ಯೋಜನೆ (ILCS) ನಗರಾಭಿವೃದ್ಧಿ ಸಚಿವಾಲಯದ ಕೆಳಗೆ ಬರುವ JNNURM ಯೋಜನೆಯು ನಗರದಲ್ಲಿ ನೀರು ಮತ್ತು ಶೌಚ ವ್ಯವಸ್ಥೆ ಒದಗಿಸುವುದಲ್ಲದೆ,

ಅ) ನಗರಗಳ ಆರ್ಥಿಕ ಹಾಗೂ ಸಾಮಾಜಿಕ ಮೂಲಸೌಕರ್ಯದ ಅಭಿವೃದ್ಧಿ

ಆ) ನಗರದ ಬಡಜನರಿಗೆ ಕಡಿಮೆ ದರದಲ್ಲಿ ವಸತಿಯ ಜೊತೆಗೆ ಇತರ ಮೂಲ ಸೌಕರ್ಯಗಳನ್ನು ಒದಗಿಸುವುದು

ಇ) 74ನೇ ಸಾಂವಿಧಾನಿಕ ತಿದ್ದುಪಡಿಯ ಅನ್ವಯ ಮುನಿಸಿಪಾಲಿಟಿ ಮತ್ತು ಅದರ ಕಾರ್ಯವೈಖರಿಯನ್ನು ಬಲಗೊಳಿಸುವ ಗುರಿಯನ್ನು ಸಹ ಹೊಂದಿದೆ.

ನಗರದ ಬಡಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದರಲ್ಲಿ ಮುಖ್ಯವಾದದ್ದು ನೀರು ಸರಬರಾಜು ಮತ್ತು ಶೌಚ ವ್ಯವಸ್ಥೆ ಒದಗಿಸುವುದಾಗಿದೆ. ಇದು ಮುಖ್ಯವಾಗಿ ಸ್ಥಳೀಯ ಆಡಳಿತದ ಕಾರ್ಯಕ್ಷಮತೆಯ ಮೇಲೆ ಆಧಾರಿತವಾಗಿದೆ. JNNURM ಯೋಜನೆಯಡಿಯಲ್ಲಿ ಬರುವ ನಗರಗಳು ಅದರ ಉದ್ದೇಶಗಳಿಗನುಗುಣವಾಗಿ ನಗರಾಭಿವೃದ್ಧಿ ಯೋಜನೆಗಳನ್ನು (CDPs) ರೂಪಿಸಬೇಕು, JNNURMನ ಅಡಿ ಎಲ್ಲ ನಗರಗಳಿಗೂ ಯೋಜನೆಯನ್ನು ರೂಪಿಸಿದ್ದರೂ, ಇದರ ಮುಖ್ಯ ಲೋಪವೆಂದರೆ ಸಮಾಜದ ಎಲ್ಲ ವರ್ಗಗಳ ಜೊತೆಗೆ ಸಮಾಲೋಚಿಸದಿರುವುದು. ಈ ಲೋಪಕ್ಕೆ ಮೂಲ ಕಾರಣ ಸ್ಥಳೀಯ ಆಡಳಿತ ಸಂಸ್ಥೆಗಳ (ULB) ಅದಕ್ಷತೆ, 74ನೇ ಸಾಂವಿಧಾನಿಕ ತಿದ್ದಪಡಿಯ ಅನ್ವಯ JNNURM ಯೋಜನೆಯ ಹಣಕಾಸಿನ ಹಂಚಿಕೆ ಮತ್ತು ಕಾರ್ಯಕ್ರಮಗಳ ಅನುಷ್ಠಾನ ಈ ಸ್ಥಳೀಯ ಆಡಳಿತ ಸಂಸ್ಥೆಗಳ ಜವಾಬ್ದಾರಿಗೆ ಒಳಪಟ್ಟಿದೆ.

JNNURM ಅಡಿ ಬರುವ ನಗರವಾಸಿಗಳಿಗೆ ಮೂಲ ಸೌಕರ್ಯ (BSUP) ಯೋಜನೆಯು ನಗರದ ಬಡಜನರಿಗೆ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆ ಸೌಲಭ್ಯ ಒದಗಿಸುವುದಕ್ಕೆ ಒತ್ತು ನೀಡುತ್ತದೆ. ಸಂಪನ್ಮೂಲದ ಸೃಷ್ಟಿ ಮತ್ತು ಸಂಪನ್ಮೂಲ ನಿರ್ವಹಣೆಯ ನಡುವೆ ಸಶಕ್ತ ಸಂಬಂಧವನ್ನು ರೂಪಿಸುವುದರ ಮೂಲಕ ಈ ಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯ ಮೂಲೋದ್ದೇಶಗಳಲ್ಲೊಂದು. ಆದರೆ ಈ ಯೋಜನೆಯಡಿ, ನೀರು ಮತ್ತು ಶೌಚ ವ್ಯವಸ್ಥೆ ಸೌಲಭ್ಯ ಒದಗಿಸುವುದಕ್ಕಾಗಿ ಪ್ರತ್ಯೇಕ ಹಣಕಾಸು ವ್ಯವಸ್ಥೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ರಾಜೀವ್ ಆವಾಸ್ ಯೋಜನೆ (RAY) ಕೊಳಗೇರಿ ಮುಕ್ತ ರಾಜ್ಯದ ಉದ್ದೇಶ ಹೊಂದಿದೆ. ಈ ಯೋಜನೆಯು ಸದ್ಯ ಇರುವ ಕೊಳಗೇರಿಗಳನ್ನು ಮುಖ್ಯವಾಹಿನಿಯೊಂದಿಗೆ ಸೇರಿಸುವ ಜೊತೆ ಜೊತೆಗೇ ಕೊಳಗೇರಿಗಳ ಸೃಷ್ಟಿಯ ಕಾರಣವಾಗುವ ಸೂಕ್ಷ್ಮ ವಿಷಯಗಳನ್ನೂ ಅಭ್ಯಸಿಸುತ್ತದೆ. ಸ್ಥಳೀಯ ಸಂಸ್ಥೆಗಳ ಆಯವ್ಯಯದ ಮಿತಿಯಲ್ಲಿಯೇ ನಗರದ ಬಡಜನರಿಗೆ ಮೂಲಸೌಕರ್ಯ ಒದಗಿಸುವತ್ತ ಈ ಯೋಜನೆ ಗಮನಹರಿಸುತ್ತದೆ.

ಈ ಯೋಜನೆಯೂ ಸಹಾ ನಗರದ ಬಡಜನರಿಗೆ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆ ಸೌಲಭ್ಯ ಒದಗಿಸುವುದನ್ನೇ ತನ್ನ ಮೂಲೋದ್ದೇಶಗಳಲ್ಲೊಂದು ಎಂದು ಹೇಳಿದರೂ, ಈ ಉದ್ದೇಶದ ಈಡೇರಿಕೆಗೆ ಯಾವುದೇ ಪ್ರತ್ಯೇಕ ಹಣಕಾಸಿನ ವ್ಯವಸ್ಥೆ ಇಲ್ಲವೆಂಬ ಸತ್ಯವನ್ನು ಇದು ಮರೆಮಾಚುತ್ತದೆ.

ಸಮಗ್ರ ವಸತಿ ಮತ್ತು ಕೊಳಗೇರಿ ಅಭಿವೃದ್ಧಿ ಯೋಜನೆಯು (IHSDP) ಇರುವ ಮನೆಗಳನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ ಹೊಸ ಮನೆಗಳ ನಿರ್ಮಾಣದ ಮೂಲಕ ನಗರದ ಬಡಜನರಿಗೆ ಆಶ್ರಯ ಕಲ್ಪಿಸುವ ಮೂಲೋದ್ದೇಶ ಹೊಂದಿದೆ. ಜೊತೆಗೆ ಸಾರ್ವಜನಿಕ ಶೌಚಾಲಯಗಳ ನಿರ್ಮಣ, ನೀರು ಸರಬರಾಜು, ಪ್ರವಾಹ ಒಳಚರಂಡಿಗಳ ನಿರ್ಮಾಣ, ಸಾರ್ವಜನಿಕ ಸ್ನಾನಗೃಹಗಳ ನಿರ್ಮಾಣ, ಬೀದಿ ದೀಪ, ರಸ್ತೆಗಳ ಅಗಲೀಕರಣ ಇವೆಲ್ಲವೂ ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಈ ಯೋಜನೆಯ ಹಣಕಾಸು ವ್ಯವಸ್ಥೆಯನ್ನು ವಿಸ್ತ್ರತವಾಗಿ ವಿವರಿಸಲಾಗಿದೆ.

ರಾಷ್ಟ್ರೀಯ ನಗರ ನಿರ್ಮಲೀಕರಣ ಕಾರ್ಯನೀತಿಯು (2008) ನಗರದ ಬಡವರು ಮತ್ತು ಮಹಿಳೆಯರನ್ನು ಕೇಂದ್ರವನ್ನಾಗಿಟ್ಟುಕೊಂಡ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ನಗರ-ಭಾರತವನ್ನು ಸಾರ್ವತ್ರಿಕ ನೈರ್ಮಲ್ಯ ವ್ಯವಸ್ಥೆಯುಳ್ಳ, ಸಮುದಾಯಚಾಲಿತ, ಆರೋಗ್ಯವಂತ, ವಾಸಯೋಗ್ಯ ನಗರ ಮತ್ತು ಪಟ್ಟಣಗಳಾಗಿ ಪರಿವರ್ತಿಸುವ ಉದ್ದೇಶ ಹೊಂದಿದೆ. ಭಾರತದ ಎಲ್ಲ ನಗರಗಳೂ ಸಂಪೂರ್ಣ ಶೌಚ ವ್ಯವಸ್ಥೆಯುಳ್ಳ ಆರೋಗ್ಯಕರ, ವಾಸಯೋಗ್ಯ ನಗರಗಳಾಗಿಸಿ, ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಉತ್ತಮ ಪರಿಸರ ಒದಗಿಸುವ ಗುರಿ ಹೊಂದಿದೆ.

ಈ ಯೋಜನೆಯ ಮುಖ್ಯ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸಿ ಅವರ ನಡವಳಿಕೆಯಲ್ಲಿ ಧನಾತ್ಮಕ ಪರಿವರ್ತನೆ ತರುವುದು, ತನ್ಮೂಲಕ ನಗರ ನೈರ್ಮಲ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಸಮಗ್ರ ಶೌಚ ವ್ಯವಸ್ಥೆಯ ಅನುಷ್ಠಾನ ಮತ್ತು ನಿರ್ವಹಣೆಯ ಮೂಲಕ ಬಯಲು ಶೌಚಾಲಯ ಮುಕ್ತ ನಗರಗಳ ಗುರಿಯನ್ನು ಸಾಕಾರಗೊಳಿಸುವುದೇ ಆಗಿದೆ. ಇದರ ಪ್ರಕಾರ ಪ್ರತಿ ರಾಜ್ಯ ತನ್ನದೇ ‘ರಾಜ್ಯ ನಿರ್ಮಲೀಕರಣ’ ಮತ್ತು ‘ನಗರ ನಿರ್ಮಲೀಕರಣ’ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ.

ನಗರದ ಬಡಜನರ ಮುಖ್ಯ ಸಮಸ್ಯೆ ಭೂ ಗೇಣಿಯ ಪರಿಣಾಮವಾಗಿ ವಸತಿಗೆ ಸಂಬಂಧಿಸಿದಂತೆ ಅವರು ಎದುರಿಸುವ ಅನಿಶ್ಚಿತತೆ ಮತ್ತು ಅಸುರಕ್ಷಿತತೆ, ಒಕ್ಕಲೆಬ್ಬಿಸುವ ನಿರಂತರ ಭಯದೊಂದಿಗೇ ಬದುಕುವ ಅವರಿಗೆ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆಯಂತ ಮೂಲಭೂತ ಸೌಕರ್ಯಗಳು ಲಭ್ಯವಿರುವುದಿಲ್ಲ. ಇಂತಹ ಕೊಳಗೇರಿಗಳಲ್ಲಿ ನೀರು ಸಂಗ್ರಹಿಸುವ ಮತ್ತು ನೈರ್ಮಲ್ಯ ಕಾಪಾಡುವ ಹೆಚ್ಚಿನ ಹೊಣೆಯು ಮಹಿಳೆಯರ ಮೇಲೆಯೇ ಇರುತ್ತದೆ.

ರಾಷ್ಟ್ರೀಯ ನಗರ ನಿರ್ಮಲೀಕರಣ ಕಾರ್ಯನೀತಿಯು ಈ ಎಲ್ಲ ವಿಷಯಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತದೆಯಾದರೂ, ಈ ಸಂಬಂಧ ಇರುವ ಅನೇಕ ಇಲಾಖೆಗಳ ನಡುವೆ ಹೇಗೆ ಸಮನ್ವಯ ಸಾಧಿಸಬೇಕೆನ್ನುವ ಬಗ್ಗೆ ಮತ್ತು ಇದರಿಂದ ಬಾಧಿಸಲ್ಪಡುವ ವಿವಿಧ ಜನರ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕೆನ್ನುವ ಬಗ್ಗೆ ಏನನ್ನೂ ಹೇಳುವುದಿಲ್ಲ.

ರಾಷ್ಟ್ರೀಯ ನಗರವಾಸಿ ಮತ್ತು ವಸತಿ ಯೋಜನೆಯು (2007) ಸಮಾಜದ ಎಲ್ಲ ವರ್ಗದವರಿಗೂ ಭೂಮಿಯ ಸಮಾನ ಹಂಚಿಕೆ, ಮತ್ತು ಕೈಗೆಟುಕುವ ದರದಲ್ಲಿ ವಸತಿ ಲಭ್ಯತೆಯನ್ನು ಕಲ್ಪಿಸುವ ಗುರಿ ಹೊಂದಿದೆ. ವಸತಿ ಯೋಜನೆ ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಎಲ್ಲ ಹಂತಗಳಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಗೊಳಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಯೋಜಿಸಿದೆ.

ಈ ಯೋಜನೆಯು ವೃತ್ತಿನಿರತ ಮಹಿಳೆಯರ, ಒಂಟಿ ಮಹಿಳೆಯರ, ಮಹಿಳಾ ಒಡೆತನದ ಕುಟುಂಬಗಳ ಮಹಿಳೆಯರ, ವಿಶೇಷ ಅಗತ್ಯಗಳನ್ನು ಗುರುತಿಸುವುದರೊಂದಿಗೆ ನೀರು ಮತ್ತು ಶೌಚ ವ್ಯವಸ್ಥೆಯನ್ನೊಳಗೊಂಡಂತೆ ಮೂಲಸೌಕರ್ಯದ ಕೊರತೆಯಿಂದ ಬಾಧಿಸಲ್ಪಟ್ಟ ಮಹಿಳೆಯರ ಅಗತ್ಯಗಳನ್ನೂ ಗಮನಕ್ಕೆ ತೆಗೆದುಕೊಳ್ಳುತ್ತದೆ. ಇದೊಂದು ಯೋಜನೆಯು ಮಾತ್ರ ತನ್ನ ಮಾರ್ಗಸೂಚಿಯಲ್ಲಿ ಮಹಿಳೆಯರನ್ನು ಒಳಗೊಳ್ಳಲು ಪ್ರಯತ್ನಿಸಿದೆ.

ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯವು ಕೇಂದ್ರ ಸರ್ಕಾರದ ಅನುದಾನಿತ ‘ಕಡಿಮೆ ವೆಚ್ಚದ ಸಮಗ್ರ ಶೌಚ ವ್ಯವಸ್ಥೆ ಯೋಜನೆ (ICS) ಯೋಜನೆಯನ್ನು (ನಗರಗಳಿಗಾಗಿ) ನಿರ್ವಹಿಸುತ್ತದೆ.

ಸದ್ಯ ಇರುವ ಒಣ ಪಾಯಖಾನೆಗಳನ್ನು ನೀರು-ಸಹಿತ ಪಾಯಖಾನೆಯುಕ್ತ ಶೌಚ ವ್ಯವಸ್ಥೆಯಾಗಿ JOSEFAL (water seal toilets with super structures) ಪಾಯಖಾನೆ ಹೊಂದಿಲ್ಲದ ಆರ್ಥಿಕವಾಗಿ ಹಿಂದುಳಿದ (EWS) ವರ್ಗಕ್ಕೆ ಸೇರಿದ ಕುಟುಂಬದ ಮನೆಗಳಲ್ಲಿ ಹೊಸ ಪಾಯಖಾನೆಗಳ ನಿರ್ಮಾಣ ಈ ಯೋಜನೆಯ ಮುಖ್ಯ ಉದ್ದೇಶಗಳು, ಇವು ನಗರಗಳ ಒಟ್ಟಾರೆ ನೈರ್ಮಲ್ಯವನ್ನು ಹೆಚ್ಚಿಸುತ್ತವೆ.

ಅದಕ್ಕಿಂತ ಮುಖ್ಯವಾಗಿ ಇದು ಅಮಾನವೀಯವಾದ ಮಲಹೊರುವ ಪದ್ಧತಿಯನ್ನು ನಿರ್ಮೂಲನೆಗೊಳಿಸುವಲ್ಲಿ ಸಹಾಯಕವಾಗಿದೆ. ILCSನ ಮೌಲ್ಯಮಾಪನ ವರದಿಯ (ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ, 2007) ಪ್ರಕಾರ ಈ ಯೋಜನೆಯ ಅತಿ ಮುಖ್ಯ ಪರಿಣಾಮವೆಂದರೆ, ಹೀಗೆ ಶೌಚಾಲಯ ಹೊಂದಿರುವ ಮನೆಗಳ ಒಡೆಯರ ಸಾಮಾಜಿಕ ವರ್ಚಸ್ಸು ಹೆಚ್ಚಾಗಿರುವುದು.

ಇಷ್ಟೆಲ್ಲಾ ಯೋಜನೆಗಳಲ್ಲಿ ನಿರ್ಮಲೀಕರಣದ ವಿಷಯ ಪ್ರಸ್ತಾಪವಾಗಿದ್ದರೂ, ನಗರ ನಿರ್ಮಲೀಕರಣಕ್ಕಾಗಿ ಈ ಯೋಜನೆಗಳಲ್ಲಿ ಲಭ್ಯವಿರುವ ಹಣದ ಮೊತ್ತವನ್ನು ಕಂಡುಹಿಡಿಯುವುದು ಕಷ್ಟಸಾಧ್ಯ. ILCS ಯೋಜನೆ ಒಂದರಲ್ಲಿ ಮಾತ್ರವೇ ಇದಕ್ಕಾಗಿ ಮೀಸಲಿಟ್ಟ ಮೊತ್ತವು ತಿಳಿಯುತ್ತದೆ.

ಪಟ್ಟಿ 1ರಲ್ಲಿ HUPA ಆಯವ್ಯಯದಲ್ಲಿ ILCS ಯೋಜನೆಗಾಗಿ ಮೀಸಲಿಟ್ಟ ಹಣದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿರುವುದನ್ನು ಕಾಣಬಹುದು. 2011ರ ಮನೆ ಗಣತಿಯ ಪ್ರಕಾರ ಇನ್ನೂ 7.94 ಲಕ್ಷ ಪಾಯಖಾನೆಗಳನ್ನು ಜನರು ಕೈಯಿಂದ ಸ್ವಚ್ಛಗೊಳಿಸುತ್ತಾರೆ. ಇದು ಮಲಹೊರುವ ಅಮಾನವೀಯ ಪದ್ಧತಿ ನಮ್ಮ ದೇಶದಲ್ಲಿ ಜೀವಂತವಿರುವುದಕ್ಕೆ ಸಾಕ್ಷಿ.

‘ಕಡಿಮೆ ವೆಚ್ಚದ ಸಮಗ್ರ ಶೌಚವ್ಯವಸ್ಥೆ ಯೋಜನೆ’ (ILCS) ಯೋಜನೆಯೊಂದನ್ನು ಹೊರತುಪಡಿಸಿ ಮತ್ಯಾವುದೇ ಯೋಜನೆಯೂ ನೇರವಾಗಿ ನೀರು ಸರಬರಾಜು ಮತ್ತು ನಿರ್ಮಲೀಕರಣವನ್ನು ಪ್ರಸ್ತಾಪಿಸುವುದಿಲ್ಲ. ನೀರು ಸರಬರಾಜು ಮತ್ತು ನಿರ್ಮಲೀಕರಣವು ವಸತಿ ಯೋಜನೆಗಳ ಭಾಗವಾಗಿ ಇಲ್ಲವೇ ಉದ್ಯೋಗ ಸೃಷ್ಟಿಯ ಭಾಗವಾಗಿ ಪ್ರಸ್ತಾಪಿಸಲ್ಪಡುತ್ತವೆಯೇ ಹೊರತು, ಇದೇ ಒಂದು ಪ್ರಮುಖ ಮತ್ತು ಪ್ರತ್ಯೇಕ ಸಮಸ್ಯೆಯಾಗಿ ಪರಿಗಣಿಸಲ್ಪಟ್ಟಿಲ್ಲ. ನಗರದ ಬಡಜನರ ಅದರಲ್ಲೂ ಕೊಳಗೇರಿ ನಿವಾಸಿಗಳ ನೀರು ಮತ್ತು ಶೌಚ ವ್ಯವಸ್ಥೆಯ ಅವಶ್ಯಕತೆಗಳ ಕಡೆಗೆ ಯೋಜನೆ ರೂಪಿಸುವವರ ನಿರ್ಲಕ್ಷ್ಯವನ್ನೇ ತೋರುತ್ತದೆ.

ನಗರದ ಬಡತನ ಮತ್ತು ನಿರ್ಮಲೀಕರಣ: ನಗರೀಕರಣ

ನಗರದಲ್ಲಿನ ಬಡತನ ಢಾಳಾಗಿ ಕಾಣುವುದು ನಗರದ ಕೊಳಗೇರಿಗಳಲ್ಲಿ, ನಗರದ ಕೊಳಗೇರಿಗಳ ಕೆಲವು ಮುಖ್ಯ ಸೂಚ್ಯಾಂಕಗಳನ್ನು ಪಟ್ಟಿ-2ರಲ್ಲಿ ತೋರಿಸಲಾಗಿದೆ. ಒಟ್ಟಾರೆ ಕೊಳಗೇರಿಗಳ ಪೈಕಿ 42% ಗುರುತಿಸದಿರುವ ಕೊಳಗೇರಿಗಳು ಮತ್ತು ಅವುಗಳಲ್ಲಿ 45% ಕೊಳಗೇರಿಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ನಿರ್ಮಲೀಕರಣ ಎನ್ನುವುದು ಕೇವಲ ಶೌಚಾಲಯಗಳ ನಿರ್ಮಾಣಕ್ಕೆ ಸೀಮಿತವಾದದ್ದಲ್ಲ. ಬದಲಿಗೆ ಬದುಕುವುದಕ್ಕೆ ಸ್ವಚ್ಛವಾದ ವಾತಾವರಣ ಕಲ್ಪಿಸುವುದೂ ಅದರ ಭಾಗವೇ ಆಗಿದೆ.

ಹಾಗಾಗಿ ಕಸದ ವಿಲೇವಾರಿಯನ್ನೂ ಇಲ್ಲಿ ನಿರ್ಮಲೀಕರಣದ ಭಾಗವಾಗಿ ಪರಿಗಣಿಸಿದರೆ, ಕೇವಲ 38% ಗುರುತಿಸದಿರುವ ಕೊಳಗೇರಿಗಳಲ್ಲಿ ಮಾತ್ರವೇ ಕಸ ವಿಲೇವಾರಿಯ ವ್ಯವಸ್ಥೆ ಇದೆ.

ನಗರಾಡಳಿತ, ಸಮುದಾಯ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿ ಹೇಗೆ ನಗರದ ನಿರ್ಮಲೀಕರಣದ ಸಮಸ್ಯೆಯನ್ನು ಬಗೆಹರಿಸಬಹುದೆಂಬುದಕ್ಕೆ ತಮಿಳುನಾಡಿನ ತಿರುಚನಾಪಲ್ಲಿ ಒಂದು ಉದಾಹರಣೆ. ನಗರದ ಕೊಳಗೇರಿ ನಿವಾಸಿಗಳಿಗಾಗಿ ಸಮುದಾಯ ನಿರ್ವಹಣೆಯ ಶೌಚಗೃಹ ಮತ್ತು ಸ್ನಾನಗೃಹಗಳನ್ನು ನಿರ್ಮಿಸಲಾಯಿತು. (Water Aid India, 2008) ಮುಖ್ಯವಾಗಿ ಇದು ಸಾಧ್ಯವಾದದ್ದು ತೆರೆದ ಮನಸ್ಸಿನ ನಗರಾಡಳಿತ, ಸಮುದಾಯ ಮತ್ತು ಸರ್ಕಾರೇತರ ಸಂಸ್ಥೆಗಳು ಒಟ್ಟಾಗಿ ಕೈಜೋಡಿಸಿದ್ದರಿಂದ, ಕೊಳಗೇರಿಗಳಲ್ಲಿ ಆರೋಗ್ಯವನ್ನು ಮತ್ತು ನೈರ್ಮಲ್ಯವನ್ನು ಸಾಧಿಸಲು ದೊಡ್ಡ ಮೊತ್ತದ ಹಣ ಬೇಕಿಲ್ಲ.

ಬದಲಿಗೆ ಬೇಕಿರುವುದು ಕೊಳಗೇರಿ ಜನರ ಕಷ್ಟಗಳಿಗೆ ಕಿವಿಗೊಡುವ ತೆರೆದ ಮನಸ್ಸಿನ ನಗರಾಡಳಿತ, ಸಹಾಯಕ ಸಮುದಾಯ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವು, ಸಮುದಾಯಗಳು ಶೌಚಾಲಯಗಳನ್ನು ತಾವೇ ನಿರ್ವಹಿಸುತ್ತಿದ್ದರಿಂದ ಇದು ಮಹಿಳಾ ಸಬಲೀಕರಣಕ್ಕೂ ದಾರಿ ಮಾಡಿಕೊಟ್ಟಿತಲ್ಲದೇ ವೈಯಕ್ತಿಕ ಹಾಗೂ ಸಮುದಾಯದ ಅಭಿವೃದ್ಧಿಯ ಮೇಲೂ ಸಾಕಷ್ಟು ಸಕಾರಾತ್ಮಕ ಪರಿಣಾಮವನ್ನೇ ಬೀರಿತು.

ಇದಕ್ಕೆ ತದ್ವಿರುದ್ದವಾಗಿ ‘ಜಾಗೋರಿ, ಮತ್ತು ಅಂತಾರಾಷ್ಟ್ರೀಯ ನಗರಗಳಲ್ಲಿ ಮಹಿಳೆಯರು’ ನಡೆಸಿದ ಅಂತರಾಷ್ಟ್ರೀಯ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ” ಏಷ್ಯಾದ ನಗರಗಳಲ್ಲಿ ಮಹಿಳೆಯ ಹಕ್ಕುಗಳು ಹಾಗೂ ನೀರು ಮತ್ತು ಶೌಚವ್ಯವಸ್ಥೆಯ ಲಭ್ಯತೆ (2009- 2011) ವರದಿಯ ಪ್ರಕಾರ ದೆಹಲಿಯ ಸರ್ಕಾರ ಜೆಜೆ ಕಾಲೋನಿಯ ಪ್ರತಿಯೊಬ್ಬರ ಮೇಲೆ ನೀರಿಗಾಗಿ ಖರ್ಚು ಮಾಡುವ ಮೊತ್ತ ಕೇವಲ ರೂ.30/- ($0.66) ಮತ್ತು ನಿರ್ಮಲೀಕರಣಕ್ಕಾಗಿ ವ್ಯಯಿಸುವುದು ರೂ.60/- (Sl.78) ಮಾತ್ರ (2011- 12) .

ದೆಹಲಿಯಲ್ಲಿ ನೀರು ಮತ್ತು ನಿರ್ಮಲೀಕರಣವನ್ನು ವಿವಿಧ ಸಂಸ್ಥೆಗಳು ನಿರ್ವಹಿಸುತ್ತಿದ್ದುದರಿಂದ ಯಾವುದೇ ಸಂಸ್ಥೆಯೂ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿರಲಿಲ್ಲ. ಜೊತೆಗೆ ಇದು ನೀರು ಮತ್ತು ನಿರ್ಮಲೀಕರಣದ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ.

ಈ ಎರಡು ಉದಾಹರಣೆಗಳು ದೇಶದಾದ್ಯಂತ ಹೇಗೆ ನೀರು ಮತ್ತು ನಿರ್ಮಲೀಕರಣದ ವ್ಯವಸ್ಥೆ ಭಿನ್ನವಾಗಿದೆ ಎಂಬುದನ್ನು ತೋರಿಸುವುದರ ಜೊತೆಗೆ ಹೇಗೆ ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನ ಅಂಶಗಳು ಇದರ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಒಟ್ಟಾರೆಯಾಗಿ ‘ಒಂದೇ ಮಂತ್ರ’ ಎಲ್ಲ ಕಡೆಗೂ ಹೊಂದುವುದಿಲ್ಲ ಎಂಬುದನ್ನು ಅರಿಯುವುದು ಬಹು ಮುಖ್ಯ

ಭಾರತದ ಅಭಿವೃದ್ಧಿಯ ಗಾದೆ ಆಸಕ್ತಿದಾಯಕವಾಗಿದ್ದರೂ, ನಿರ್ಮಲೀಕರಣದ ಅಂಕಿ ಅಂಶಗಳನ್ನು ಗಮನಿಸಿದಾಗ ಹೇಳಿಕೊಳ್ಳುವುದಕ್ಕೆ ಅಲ್ಲಿ ಹೆಚ್ಚೇನೂ ಇಲ್ಲ. ಒಂದೇ ಸಮನೆ ಹೆಚ್ಚುತ್ತಿರುವ ಕೊಳಗೇರಿಯ ಜನಸಂಖ್ಯೆಯ ಜೊತೆಗೆ ನೀರು ಮತ್ತು ಶೌಚ ವ್ಯವಸ್ಥೆಗಳಂತ ಮೂಲಭೂತ ಸೌಕರ್ಯಗಳ ಮೇಲೆ ಒತ್ತಡ ತೀವ್ರವಾಗುತ್ತಲೇ ಇದೆ. ಶೌಚಾಲಯಗಳ ನಿರ್ಮಾಣ ಸಮಗ್ರ ನಿರ್ಮಲೀಕರಣ ವ್ಯವಸ್ಥೆಯ ಒಂದು ಭಾಗ ಮಾತ್ರ.

ಒಳಚರಂಡಿ ವ್ಯವಸ್ಥೆ, ನೀರಿನ ಪುನರ್‌ಬಳಕೆ, ಘನತ್ಯಾಜ್ಯ ನಿರ್ವಹಣೆ ಇವೆಲ್ಲವನ್ನೂ ಜೊತೆಗೆ ನಿರ್ವಹಿಸುವುದು ಅತ್ಯವಶ್ಯಕ ಮತ್ತು ಇದರಲ್ಲಿ ನಗರಾಡಳಿತ ಮುಖ್ಯ ಪಾತ್ರ ವಹಿಸಬೇಕಿದೆ.

ಕೊಳಗೇರಿಗಳಲ್ಲಿ ಸುರಕ್ಷಿತ ಮತ್ತು ಸಮರ್ಥ ನೈರ್ಮಲ್ಯವನ್ನು ಸಾಧಿಸುವುದು ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಸುರಕ್ಷತೆ, ಆರೋಗ್ಯ ಸುಧಾರಿಸುವಲ್ಲಿ ಹಾಗೂ ಅವರ ಖಾಸಗಿತನ ಮತ್ತು ಆತ್ಮಗೌರವವನ್ನು ಕಾಪಾಡುವಲ್ಲಿ ಬಹಳ ಸಹಾಯಕವಾಗಿದೆ. ಆದರೆ ನಗರ ನಿರ್ಮಲೀಕರಣದ ಬಹಳಷ್ಟು ಯೋಜನೆ ಕಾರ್ಯಕ್ರಮಗಳಲ್ಲಿ ಮಹಿಳೆಯರು ಕಾಣುವುದೇ ಇಲ್ಲ. ಮಲಹೊರುವ ಪದ್ದತಿ ಇನ್ನೂ ಚಾಲ್ತಿಯಲ್ಲಿದೆ ಎನ್ನುವ ಅಂಶವೇ, ಒಣ ಪಾಯಖಾನೆಗಳ ಬಳಕೆಯನ್ನು ನಿಲ್ಲಿಸುವ ಹಾಗೂ ನೀರು-ಸಹಿತ ಪಾಯಖಾನೆಯುಕ್ತ ಶೌಚವ್ಯವಸ್ಥೆಯನ್ನು ಬಳಕೆಗೆ ತರುವ ಕೆಲಸ ಪರಿಣಾಮಕಾರಿಯಾಗಿ ಆಗಿಲ್ಲ ಎಂಬುದನ್ನು ತೋರಿಸುತ್ತದೆ.

“ಶೌಚಾಲಯದ ಹಕ್ಕು” ಕುರಿತಾಗಿ ಇನ್ನು ಸಮರ್ಥವಾದ ಮತ್ತು ತೀವ್ರವಾದ ಪ್ರಚಾರಾಂದೋಲನವನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಬೇಕಾದ ಅಗತ್ಯವಿದೆ. ಇದು ಪ್ರಮುಖವಾಗಿ ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸುವತ್ತ ಗಮನ ಕೇಂದ್ರೀಕರಿಸಬೇಕಿದೆ. ಜನಜಾಗೃತಿ ಮೂಡಿಸುವ ಮೂಲಕ ಸುರಕ್ಷಿತ ಶೌಚವ್ಯವಸ್ಥೆಯ ಬಳಕೆಯನ್ನು ಉತ್ತೇಜಿಸುವುದರ ಜೊತೆಗೆ ಶೌಚವ್ಯವಸ್ಥೆಯಲ್ಲಿ ಹೊಸ ಮತ್ತು ಅವಿಷ್ಕಾರಿ ತಂತ್ರಜ್ಞಾನವನ್ನು ಪ್ರೋತ್ಸಾಹಿಸಬೇಕಿದೆ.

ಕೊಳಗೇರಿ ನಿವಾಸಿಗಳ ಭೂಮಿಯ ಹಕ್ಕು, ಜೀವನೋಪಾಯದ ಅವಕಾಶಗಳು, ಶಿಕ್ಷಣ ಮತ್ತು ಆರೋಗ್ಯದಂತ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವುದು ಸಹ ನಗರದ ಕೊಳಗೇರಿಗಳ ನಿರ್ಮಲೀಕರಣದ ಯೋಜನೆಗಳ ಯಶಸ್ಸಿಗೆ ಸಹಕಾರಿಯಾಗಿದೆ (ಪಾಂಡ ಮತ್ತು ಅಗರ್‌ವಾಲ್‌, 2013), ಸಾಕಷ್ಟು ಹಣಕಾಸಿನ ನೆರವು ಮತ್ತು ಸಶಕ್ತ ಅನುಷ್ಠಾನದ ಹೊರತು ನಗರ ನಿರ್ಮಲೀಕರಣದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಪರಿಣಾಮಕಾರಿಯಾಗಲಾರವು.

ಸರ್ಕಾರ ಮತ್ತು ನಗರಾಡಳಿತಗಳ ಪ್ರಬಲ ರಾಜಕೀಯ ಇಚ್ಛಾಶಕ್ತಿಯು ನಗರ ನಿರ್ಮಲೀಕರಣದ ವಿಚಾರದಲ್ಲಿ ಸಾಕಷ್ಟು ಬದಲಾವಣೆ ತರಬಲ್ಲವು. “ಸ್ಮಾರ್ಟ್ ಸಿಟಿ” ಎಂಬುದು ಹೊಸಮಂತ್ರವಾಗಿರುವ ಈ ದಿನಗಳಲ್ಲಿ ಪ್ರಸಕ್ತ ಕೇಂದ್ರ ಸರ್ಕಾರವು ನೈರ್ಮಲ್ಯವನ್ನು ಕೇಂದ್ರವಾಗಿಸಿಕೊಂಡು ‘ಸ್ವಚ್ಛಭಾರತ ಅಭಿಯಾನ’ವನ್ನು ರೂಪಿಸಿರುವುದು ಸ್ವಾಗತಾರ್ಹ. ಎಂದಿಗೆ ಶೌಚವ್ಯವಸ್ಥೆ ಎಂಬುದು ಒಂದು ಕೊಳಕು ಪದ ಎಂಬುದು ಕರಗಿ ಅದು ನಮ್ಮ ಆದ್ಯತೆಯ ಕ್ಷೇತ್ರವಾಗುತ್ತೆಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

Photo of Amith

Subscribe to our mailing list to get the new updates!

World hepatitis day essay 2023 | a comprehensive essay , related articles.

Electoral Bond

ಭಾರತದಲ್ಲಿ ಎಲೆಕ್ಟೋರಲ್ ಬಾಂಡ್ ಕುರಿತು ಪ್ರಬಂಧ 2024| Electoral Bond in India Essay | Comprehensive Essay

Essay On Banyan tree

ಆಲದ ಮರದ ಮಹತ್ವ 2024 | Essay On Banyan tree | Comprehensive Essay

One Election

[PDF]’ಒಂದು ಚುನಾವಣೆ, ಒಂದು ರಾಷ್ಟ್ರ’ ಕುರಿತು ಪ್ರಬಂಧ 2024: One Election, One Nation | Comprehensive essay

Essay about COW

ಹಸುವಿನ ಬಗ್ಗೆ ಪ್ರಬಂಧ 2024 | Essay about COW | Comprehensive Essay

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

Adblock Detected

  • Privacy Policy
  • Add anything here or just remove it...

Kannada Study

  • Social Science
  • Information

ಮಹಿಳಾ ಸಬಲೀಕರಣ ಪ್ರಬಂಧ | Mahila Sabalikarana Essay in Kannada

Mahila Sabalikarana Essay in Kannada

ಮಹಿಳಾ ಸಬಲೀಕರಣ ಪ್ರಬಂಧ Mahila Sabalikarana Essay in Kannada mahila sabalikarana prabandha in kannada mahila sabalikarana in kannada women empowerment essay in kannada

Mahila Sabalikarana Essay in Kannada

ಮಹಿಳಾ ಸಬಲೀಕರಣವು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಬಲೀಕರಣವನ್ನು ಉಲ್ಲೇಖಿಸಲು ಬಳಸಲಾಗುವ ಪದವಾಗಿದೆ ಉದಾ ಶಿಕ್ಷಣ, ಉದ್ಯೋಗ, ಆರೋಗ್ಯ, ಸುರಕ್ಷತೆ, ಇತ್ಯಾದಿ. ಇದು ರಾಷ್ಟ್ರದ ಮತ್ತು ಪ್ರಪಂಚದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಮೂಲಭೂತವಾಗಿದೆ. ಎಲ್ಲಿಯವರೆಗೆ ಲಿಂಗ ತಾರತಮ್ಯ ಅಸ್ತಿತ್ವದಲ್ಲಿದೆಯೋ ಅಲ್ಲಿಯವರೆಗೆ ಸಮಾನ ಸಮಾಜ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ.  ಮಹಿಳಾ ಸಬಲೀಕರಣದ ಕುರಿತಾದ ಈ ಪ್ರಬಂಧದಲ್ಲಿ ನಾವು ಮಹಿಳಾ ಸಬಲೀಕರಣದ ಅಗತ್ಯತೆ ಮತ್ತು ಅದನ್ನು ಸಾಧಿಸುವ ಮಾರ್ಗಗಳನ್ನು ಚರ್ಚಿಸುತ್ತೇವೆ.

Mahila Sabalikarana Essay in Kannada

ಮಹಿಳಾ ಸಬಲೀಕರಣ ಪ್ರಬಂಧ

ನಮ್ಮ ಸಮಾಜವು ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡಿದೆ. ಹಿಂದಿನ ಕಾಲದಲ್ಲಿ, ಪುರುಷರನ್ನು ಕುಟುಂಬದ ಪ್ರಮುಖ ಸದಸ್ಯರೆಂದು ಪರಿಗಣಿಸಲಾಗಿತ್ತು. ಅವರು ಜೀವನೋಪಾಯವನ್ನು ಗಳಿಸುವ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಕುಟುಂಬದ ನಿರ್ಧಾರ ತೆಗೆದುಕೊಳ್ಳುವವರಾಗಿದ್ದರು. ಮತ್ತೊಂದೆಡೆ, ಮಹಿಳೆಯರು ಮನೆಕೆಲಸ ಮತ್ತು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಹೊಂದಿದ್ದರು. ಆದ್ದರಿಂದ, ಪಾತ್ರಗಳು ಮುಖ್ಯವಾಗಿ ಲಿಂಗವನ್ನು ಆಧರಿಸಿವೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇರಲಿಲ್ಲ. ನಾವು ನಮ್ಮ ಸಂಪೂರ್ಣ ವಲಯವನ್ನು ನಿರ್ಣಯಿಸಿದರೆ, ಮಹಿಳೆಯ ಸಮಸ್ಯೆಗಳು ಅವಳ ಸಂತಾನೋತ್ಪತ್ತಿ ಪಾತ್ರ ಮತ್ತು ಅವಳ ದೇಹದ ಮೇಲೆ ಅಥವಾ ಕೆಲಸಗಾರ್ತಿಯಾಗಿ ಅವರ ಆರ್ಥಿಕ ಪಾತ್ರದ ಮೇಲೆ ಕೇಂದ್ರೀಕೃತವಾಗಿವೆ.

ಮಹಿಳಾ ಸಬಲೀಕರಣವು ಸಮಾಜದಲ್ಲಿ ಸಂತೋಷ ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಮಹಿಳೆಯರಲ್ಲಿ ಶಕ್ತಿಯನ್ನು ಸೃಷ್ಟಿಸುವ ಪ್ರಕ್ರಿಯೆಯಾಗಿದೆ. ಶಿಕ್ಷಣ, ವೃತ್ತಿ, ಜೀವನಶೈಲಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಮಿತಿ ಮತ್ತು ನಿರ್ಬಂಧಗಳಿಲ್ಲದೆ ಅವಕಾಶಗಳನ್ನು ಪಡೆಯಲು ಸಾಧ್ಯವಾದಾಗ ಮಹಿಳೆಯರು ಸಬಲರಾಗುತ್ತಾರೆ. ಇದು ಶಿಕ್ಷಣ, ಅರಿವು, ಸಾಕ್ಷರತೆ ಮತ್ತು ತರಬೇತಿಯ ಮೂಲಕ ಅವರ ಸ್ಥಾನಮಾನವನ್ನು ಹೆಚ್ಚಿಸುವುದನ್ನು ಒಳಗೊಂಡಿದೆ. ಇದು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಸಹ ಒಳಗೊಂಡಿದೆ. ಮಹಿಳೆ ನಿರ್ಣಾಯಕ ನಿರ್ಧಾರವನ್ನು ಮಾಡಿದಾಗ, ಅವಳು ಅಧಿಕಾರವನ್ನು ಅನುಭವಿಸುತ್ತಾಳೆ.

ವಿಷಯ ವಿಸ್ತಾರಣೆ :

ಮಹಿಳಾ ಸಬಲೀಕರಣವು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಒಂದು ಕುಟುಂಬದಲ್ಲಿ ಒಬ್ಬ ಸಂಪಾದನೆಯ ವ್ಯಕ್ತಿ ಇದ್ದಾನೆ, ಇನ್ನೊಂದು ಕುಟುಂಬದಲ್ಲಿ ಗಂಡಸರು ಮತ್ತು ಹೆಂಗಸರು ಇಬ್ಬರೂ ಸಂಪಾದಿಸುತ್ತಿದ್ದಾರೆ, ಆಗ ಯಾರು ಉತ್ತಮ ಜೀವನಶೈಲಿಯನ್ನು ಹೊಂದಿರುತ್ತಾರೆ ಎಂದು ಭಾವಿಸೋಣ. ಉತ್ತರ ಸರಳವಾಗಿದೆ, ಪುರುಷರು ಮತ್ತು ಮಹಿಳೆಯರು ಇಬ್ಬರೂ ಹಣವನ್ನು ಗಳಿಸುವ ಕುಟುಂಬ. ಹೀಗಾಗಿ, ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಕೆಲಸ ಮಾಡುವ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ.

ಮಹಿಳಾ ಸಬಲೀಕರಣದ ಅವಶ್ಯಕತೆ :

ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಪುರಾತನ ಕಾಲದ ಹೆಣ್ಣು ಮಕ್ಕಳ ಗರ್ಭಪಾತಕ್ಕೆ ಸತಿ ಪ್ರಾತಃ ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಇಂತಹ ಹಿಂಸೆಯನ್ನು ಎದುರಿಸುತ್ತಲೇ ಇದ್ದಾರೆ. ಇಷ್ಟು ಮಾತ್ರವಲ್ಲದೆ, ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ, ವರದಕ್ಷಿಣೆ ವ್ಯವಸ್ಥೆ, ಮರ್ಯಾದಾ ಹತ್ಯೆ, ಕೌಟುಂಬಿಕ ದೌರ್ಜನ್ಯ ಇತ್ಯಾದಿ ಘೋರ ಅಪರಾಧಗಳು ಭಾರತದಲ್ಲಿ ನಡೆಯುತ್ತಲೇ ಇವೆ.

ಒಟ್ಟು ಜನಸಂಖ್ಯೆಯ ಪೈಕಿ ಶೇ.50ರಷ್ಟು ಮಹಿಳೆಯರೇ ಇರಬೇಕು. ಆದರೆ, ಹೆಣ್ಣು ಭ್ರೂಣಹತ್ಯೆ ಪದ್ಧತಿಯಿಂದಾಗಿ ಭಾರತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ. ಇದು ಭಾರತದಲ್ಲಿ ಲಿಂಗ ಅನುಪಾತದ ಮೇಲೂ ಪರಿಣಾಮ ಬೀರಿದೆ. ಹೆಣ್ಣು ಮಕ್ಕಳ ಸಾಕ್ಷರತೆ ಪ್ರಮಾಣ ತೀರಾ ಕಡಿಮೆ. ಹೆಚ್ಚಿನ ಹೆಣ್ಣುಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೂ ಇಲ್ಲ. ಇದಲ್ಲದೆ, ಅವರು ಬೇಗನೆ ಮದುವೆಯಾಗುತ್ತಾರೆ ಮತ್ತು ಮಕ್ಕಳನ್ನು ಬೆಳೆಸುತ್ತಾರೆ ಮತ್ತು ಮನೆಯ ಕೆಲಸವನ್ನು ಮಾತ್ರ ಮಾಡುತ್ತಾರೆ. ಅವರಿಗೆ ಹೊರಗೆ ಹೋಗಲು ಅವಕಾಶವಿಲ್ಲ ಮತ್ತು ಅವರ ಗಂಡನ ಪ್ರಾಬಲ್ಯವಿದೆ. ಮಹಿಳೆಯರನ್ನು ಪುರುಷರು ತಮ್ಮ ಆಸ್ತಿ ಎಂದು ಪರಿಗಣಿಸುತ್ತಾರೆ. ಕೆಲಸದ ಸ್ಥಳದಲ್ಲೂ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತಿದೆ. ಅವರ ಪುರುಷರಿಗೆ ಹೋಲಿಸಿದರೆ ಅದೇ ಕೆಲಸಕ್ಕೆ ಕಡಿಮೆ ವೇತನವನ್ನು ನೀಡಲಾಗುತ್ತದೆ.

ಮಹಿಳೆಯರ ಸಬಲೀಕರಣಕ್ಕೆ ಕ್ರಮಗಳು :

ಮಹಿಳೆಯರು ವಿವಿಧ ರೀತಿಯಲ್ಲಿ ಸಬಲರಾಗಬಹುದು. ಇದನ್ನು ಸರ್ಕಾರದ ಯೋಜನೆಗಳ ಮೂಲಕ ಮತ್ತು ವೈಯಕ್ತಿಕ ಆಧಾರದ ಮೇಲೆ ಮಾಡಬಹುದು. ವೈಯಕ್ತಿಕ ಮಟ್ಟದಲ್ಲಿ, ನಾವು ಮಹಿಳೆಯರನ್ನು ಗೌರವಿಸಲು ಪ್ರಾರಂಭಿಸಬೇಕು ಮತ್ತು ಪುರುಷರಿಗೆ ಸಮಾನವಾದ ಅವಕಾಶಗಳನ್ನು ನೀಡಲು ಪ್ರಾರಂಭಿಸಬೇಕು. ಉದ್ಯೋಗ, ಉನ್ನತ ಶಿಕ್ಷಣ, ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ನಾವು ಅವರನ್ನು ಉತ್ತೇಜಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ಸರ್ಕಾರವು ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ, ಮಹಿಳಾ-ಇ-ಹಾತ್, ಮಹಿಳಾ ಶಕ್ತಿ ಕೇಂದ್ರ, ವರ್ಕಿಂಗ್ ವುಮೆನ್ ಹಾಸ್ಟೆಲ್, ಸುಕನ್ಯಾ ಮುಂತಾದ ಹಲವಾರು ಯೋಜನೆಗಳನ್ನು ತಂದಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಸಮೃದ್ಧಿ ಯೋಜನೆ ಇತ್ಯಾದಿ. ಈ ಯೋಜನೆಗಳಲ್ಲದೆ, ವರದಕ್ಷಿಣೆ ವ್ಯವಸ್ಥೆ, ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕುವ ಮೂಲಕ ನಾವು ವ್ಯಕ್ತಿಗಳಾಗಿ ಮಹಿಳೆಯರನ್ನು ಸಬಲಗೊಳಿಸಬಹುದು. ಈ ಸಣ್ಣ ಹೆಜ್ಜೆಗಳು ಸಮಾಜದಲ್ಲಿ ಮಹಿಳೆಯರ ಪರಿಸ್ಥಿತಿಯನ್ನು ಬದಲಾಯಿಸುತ್ತವೆ ಮತ್ತು ಅವರು ಸಬಲರಾಗುತ್ತಾರೆ.

ಮಹಿಳಾ ಸಬಲೀಕರಣವು ಇಂದಿನ ಅಗತ್ಯವಾಗಿದೆ ಮತ್ತು ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮತ್ತು ಪ್ರಪಂಚದ ಬೆಳವಣಿಗೆಗೆ ಬಹಳ ಅವಶ್ಯಕವಾಗಿದೆ. ಭೂಮಿಯ ಮೇಲಿನ ಪ್ರತಿಯೊಬ್ಬ ಮಹಿಳೆಗೆ ಸಮಾನ ಅವಕಾಶಗಳನ್ನು ಒದಗಿಸದಿದ್ದರೆ, ಸುಸ್ಥಿರ ಅಭಿವೃದ್ಧಿ ಸಮಾಜದ ಕನಸು ದೂರದ ವಾಸ್ತವವಾಗುತ್ತದೆ. ಮಹಿಳೆಯರಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ಒದಗಿಸಲು ಸರ್ಕಾರಗಳು, ಜನರು ಮತ್ತು ಸಂಸ್ಥೆಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

ಮಹಿಳಾ ಸಬಲೀಕರಣವು ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಮೇಲೆ ಬಹುಮುಖಿ ಪ್ರಯೋಜನಗಳನ್ನು ಹೊಂದಿದೆ. ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಹಿಳೆಯರ ಪ್ರಗತಿಗೆ ಅಡೆತಡೆಗಳನ್ನು ತೆಗೆದುಹಾಕುತ್ತದೆ ಮತ್ತು ಅವರ ಮನಸ್ಸನ್ನು ಮುಕ್ತಗೊಳಿಸುತ್ತದೆ ಮತ್ತು ಅವರು ನಿರ್ಧಾರಗಳನ್ನು ಮತ್ತು ಪ್ರಗತಿಯನ್ನು ಮಾಡಲು ಸಾಧ್ಯವಾಗುತ್ತದೆ.

ಇತರೆ ವಿಷಯಗಳು :

ದೇವರಾಜ ಅರಸು ಜೀವನ ಚರಿತ್ರೆ ಮತ್ತು ಸಾಧನೆ

ಸರ್‌ ಎಂ ವಿಶ್ವೇಶ್ವರಯ್ಯ ಪ್ರಬಂಧ

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಚರಿತ್ರೆ

ಮಹಿಳಾ ಸಬಲೀಕರಣದ ಅರ್ಥವೇನು?

ಮಹಿಳೆಯರ ಅಭಿಪ್ರಾಯಗಳು ಮತ್ತು ಅಭಿಪ್ರಾಯಗಳನ್ನು ಸ್ವೀಕರಿಸುವುದು ಎಲ್ಲಾ ವೃತ್ತಿಗಳಲ್ಲಿ ಹೊಸ ಉದ್ಯಮಗಳನ್ನು ಪ್ರಯತ್ನಿಸಲು ಮತ್ತು ಕೈಗೊಳ್ಳಲು ಮಹಿಳೆಯರನ್ನು ಪ್ರೋತ್ಸಾಹಿಸುವುದು ಹೆಣ್ಣು ಮಕ್ಕಳಿಗೆ ಶಿಕ್ಷಣ ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಬಗ್ಗೆ ಅರಿವು ಮೂಡಿಸುವುದು.

ಮಹಿಳೆ ಸಶಕ್ತಳಾಗಲು ಕಾರಣವೇನು?

ಮಹಿಳೆಯ ಧ್ವನಿಯನ್ನು ಕೇಳುವ ಮತ್ತು ಜೀವನದ ಎಲ್ಲಾ ಅಂಶಗಳಲ್ಲಿ ಸರಿಯಾದ ಹಕ್ಕುಗಳನ್ನು ನೀಡಿದ ಮಹಿಳೆಯನ್ನು ಮಹಿಳಾ ಸಬಲೀಕರಣ ಎಂದು ಹೇಳಲಾಗುತ್ತದೆ.

ಸಬಲೀಕರಣಕ್ಕೆ ಅಗತ್ಯವಾದ ಅಂಶಗಳು ಯಾವುವು?

ಯಾವುದೇ ರೀತಿಯ ಸಬಲೀಕರಣಕ್ಕಾಗಿ ಕಲಿಕೆ, ಶ್ರಮ ಮತ್ತು ನಾಯಕತ್ವ.

' src=

kannadastudy24

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

  • information
  • Jeevana Charithre
  • Entertainment

Logo

ಮಹಿಳಾ ಸಬಲೀಕರಣ ಪ್ರಬಂಧ | Mahila Sabalikaran Prabandha in Kannada

ಮಹಿಳಾ ಸಬಲೀಕರಣ ಪ್ರಬಂಧ | Mahila Sabalikaran Prabandha in Kannada

ಮಹಿಳಾ ಸಬಲೀಕರಣ ಪ್ರಬಂಧ, Mahila Sabalikaran Prabandha in Kannada, mahila sabalikaran essay in kannada, women empowerment essay in kannada

ಮಹಿಳಾ ಸಬಲೀಕರಣ ಪ್ರಬಂಧ

Mahila Sabalikaran Prabandha in Kannada

ಈ ಲೇಖನಿಯಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನ ಮೂಲಕ ತಿಳಿಸಿದ್ದೇವೆ.

ಮಹಿಳಾ ಸಬಲೀಕರಣವು ಮಹಿಳೆಯರು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿದೆ. ಅದರ ನಿಜವಾದ ರೂಪದಲ್ಲಿ, ಮಹಿಳಾ ಸಬಲೀಕರಣವು ಸ್ವಾತಂತ್ರ್ಯ, ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಶಗಳನ್ನು ಒಳಗೊಂಡಿದೆ. ಇದರ ಮೂಲಕ, ನಾವು ಲಿಂಗ ಸಮಾನತೆಯನ್ನು ತರುತ್ತೇವೆ ಎಂದು ಖಚಿತಪಡಿಸಿಕೊಳ್ಳುವುದರಲ್ಲಿ ನಿಜವಾದ ಪ್ರಯತ್ನವಿದೆ.

ಮಹಿಳಾ ಸಬಲೀಕರಣ ಎಂಬ ಪದವನ್ನು ಸಮಾಜದಲ್ಲಿ ಮಹಿಳೆಯರ ಸ್ಥಿತಿಯನ್ನು ಸುಧಾರಿಸಲು ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಲಿಂಗ ವ್ಯತ್ಯಾಸಗಳನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳನ್ನು ಸೂಚಿಸಲು ಬಳಸಲಾಗುತ್ತದೆ. ವಿಶಾಲ ಅರ್ಥದಲ್ಲಿ, ಇದು ಹಲವಾರು ನೀತಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಒಳಗೊಂಡಿದೆ.

ವಿಷಯ ವಿವರಣೆ

ಮಹಿಳಾ ಸಬಲೀಕರಣ ಎಂದರೇನು.

ಮಹಿಳೆಯರನ್ನು ಸಬಲೀಕರಣಗೊಳಿಸುವುದು ಎಂದರೆ ಮಹಿಳೆಯರ ಸ್ವಾಭಿಮಾನದ ಪ್ರಜ್ಞೆಯನ್ನು ಉತ್ತೇಜಿಸುವುದು. ಇದರರ್ಥ ಅವರ ದೌರ್ಬಲ್ಯಗಳನ್ನು ಗುರುತಿಸಲು ಮತ್ತು ಅವುಗಳನ್ನು ಜಯಿಸಲು ಅವರ ಸಾಮರ್ಥ್ಯವನ್ನು ನಿರ್ಧರಿಸಲು ಉತ್ತೇಜಿಸುವುದು ಮತ್ತು ಸಹಾಯ ಮಾಡುವುದು. ಮಹಿಳೆಯರ ಸಬಲೀಕರಣವು ಸಮಾಜದಲ್ಲಿ ತಾವಾಗಿಯೇ ಒಂದು ಹೆಜ್ಜೆ ಇಡಲು ಕಾರಣವಾಗುತ್ತದೆ.

ಮಹಿಳಾ ಸಬಲೀಕರಣವು ಎಲ್ಲಾ ಜಾತಿ, ಧರ್ಮ ಮತ್ತು ಬಣ್ಣಗಳನ್ನು ಲೆಕ್ಕಿಸದೆ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶದ ಅಧಿಕಾರವನ್ನು ನೀಡಲು ಬಳಸಲಾಗುತ್ತದೆ. ಮಹಿಳಾ ಸಬಲೀಕರಣವು ಅವರನ್ನು ಶಕ್ತಿಯುತರನ್ನಾಗಿ ಮಾಡಲು ಪರಿಗಣಿಸಲಾಗುತ್ತದೆ ಇದರಿಂದ ಅವರಿಗೆ ಸರಿ ಮತ್ತು ತಪ್ಪು ಯಾವುದು ಎಂದು ನಿರ್ಧರಿಸಬಹುದು.

ಹಿಂದೆ ಸಮಾಜದಲ್ಲಿ ಪುರುಷರನ್ನು ಸರ್ವಶ್ರೇಷ್ಠರೆಂದು ಪರಿಗಣಿಸಲಾಗುತ್ತಿತ್ತು. ಎಲ್ಲಾ ನಿರ್ಧಾರಗಳನ್ನು ಮನುಷ್ಯನು ತೆಗೆದುಕೊಳ್ಳುತ್ತಾನೆ ಮತ್ತು ಅವನು ಕುಟುಂಬಕ್ಕೆ ಏಕೈಕ ಬ್ರೆಡ್ ಮಾಲೀಕರಾಗುತ್ತಾನೆ. ಮಕ್ಕಳನ್ನು ಬೆಳೆಸುವುದು ಮತ್ತು ಮನೆಕೆಲಸವನ್ನು ನೋಡಿಕೊಳ್ಳುವುದು ಮಹಿಳೆಯರ ಜವಾಬ್ದಾರಿ ಎಂದು ಪರಿಗಣಿಸಲಾಗಿದೆ.

ಮಹಿಳಾ ಸಬಲೀಕರಣದ ಪ್ರಯೋಜನಗಳು

  • ಮಹಿಳೆಯರು ತಮ್ಮ ಜೀವನವನ್ನು ಘನತೆ ಮತ್ತು ಸ್ವಾಭಿಮಾನದಿಂದ ಬದುಕಬಲ್ಲರು.
  • ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ ಮತ್ತು ಅವರು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಪ್ರಗತಿಯನ್ನು ಸಾಧಿಸುತ್ತಾರೆ.
  • ಮಹಿಳೆಯರ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಲಾಗಿದೆ ಮತ್ತು ಅವರು ಉತ್ತಮ ಗುರುತಿಸುವಿಕೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತಾರೆ.
  • ಅವರು ತಮ್ಮ ಸ್ವಂತ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಸಮರ್ಥರಾಗಿದ್ದಾರೆ.
  • ಮಹಿಳಾ ಸಬಲೀಕರಣವು ಲಿಂಗ ತಾರತಮ್ಯ ಇಲ್ಲದ ಸಮಾನ ಸಮಾಜಕ್ಕೆ ದಾರಿ ಮಾಡಿಕೊಡುತ್ತದೆ.
  • ಮಹಿಳಾ ಸಬಲೀಕರಣವು ಮಹಿಳೆಯರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ತರುತ್ತದೆ ಮತ್ತು ಇದು ದೇಶದ ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ಸುಧಾರಿಸುತ್ತದೆ.
  • ಗಳಿಸುವ ಮಹಿಳೆ ಕುಟುಂಬದ ಆದಾಯಕ್ಕೆ ಸೇರಿಸುತ್ತಾಳೆ ಮತ್ತು ಆದ್ದರಿಂದ ಅದರ ಜೀವನಮಟ್ಟ ಮತ್ತು ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತಾಳೆ.
  • ಸುಶಿಕ್ಷಿತ ಮಹಿಳೆ ತನ್ನ ಮಕ್ಕಳಿಗೂ ಶಿಕ್ಷಣ ನೀಡುವಂತೆ ನೋಡಿಕೊಳ್ಳುತ್ತಾಳೆ, ಸಮೃದ್ಧ ರಾಷ್ಟ್ರಕ್ಕೆ ದಾರಿ ಮಾಡಿಕೊಡುತ್ತಾಳೆ.

ಮಹಿಳಾ ಸಬಲೀಕರಣವನ್ನು ಹೇಗೆ ಸ್ಥಾಪಿಸಬೇಕು?

ಶಿಕ್ಷಣ .

ಮಹಿಳಾ ಸಬಲೀಕರಣದ ವಿಚಾರದಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯ. ಶಿಕ್ಷಣದಿಂದ ಮಾತ್ರ ಮಹಿಳೆಯರು ಉತ್ತಮ ಅವಕಾಶಗಳು ಮತ್ತು ಆದಾಯವನ್ನು ಪಡೆಯುತ್ತಾರೆ. ಶಿಕ್ಷಣವಿಲ್ಲದೆ, ಅವರು ಕಡಿಮೆ ಸಂಬಳದ ಉದ್ಯೋಗಗಳನ್ನು ತೆಗೆದುಕೊಳ್ಳಲು ಒತ್ತಾಯಿಸಲ್ಪಡುತ್ತಾರೆ ಮತ್ತು ಯಾವಾಗಲೂ ತಮ್ಮ ಅಗತ್ಯಗಳಿಗಾಗಿ ಪುರುಷರ ಮೇಲೆ ಅವಲಂಬಿತರಾಗಿರುತ್ತಾರೆ.

ಶಿಕ್ಷಣವು ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರವಾಗಿಸಲು ಮತ್ತು ತಮ್ಮದೇ ಆದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ಮಾಡುವ ಏಕೈಕ ಸಾಧನವಾಗಿದೆ. ವಿದ್ಯಾವಂತ ಮಹಿಳೆ ತನ್ನ ಸ್ವಂತ ಕನಸನ್ನು ಮುಂದುವರಿಸಲು ಮತ್ತು ತನ್ನ ಜೀವನ ಮತ್ತು ವೃತ್ತಿಜೀವನದ ಬಗ್ಗೆ ನಿರ್ಧರಿಸಲು ಸಾಧ್ಯವಾಗುತ್ತದೆ.

ಸುಸ್ಥಿರ ಅಭಿವೃದ್ಧಿ

ಪ್ರಪಂಚದಾದ್ಯಂತದ ಮಹಿಳೆಯರು ಮಕ್ಕಳ ಪೋಷಣೆ, ಅವರ ಶಿಕ್ಷಣ ಮತ್ತು ಮನೆಯ ನಿರ್ವಹಣೆಯ ಪ್ರಾಥಮಿಕ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾರೆ. ಪರಿಸರ, ಆರೋಗ್ಯ ಮತ್ತು ಇತರ ಪ್ರಮುಖ ಕ್ಷೇತ್ರಗಳಂತಹ ಕ್ಷೇತ್ರಗಳಲ್ಲಿ ಮಹಿಳೆಯರ ಉಪಸ್ಥಿತಿಯು ಹೆಚ್ಚುತ್ತಿದೆ.

ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸುವ ಎಲ್ಲಾ ಮೂಲ ಕಾರಣಗಳನ್ನು ತೆಗೆದುಹಾಕುವ ಮೂಲಕ ಲಿಂಗ ಸಮಾನತೆಯ ಗುರಿಯನ್ನು ಹೊಂದಿದೆ. ಹಲವಾರು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಒಂದೇ ಕೆಲಸಕ್ಕೆ ಕಡಿಮೆ ವೇತನ ನೀಡಲಾಗುತ್ತದೆ.

ಲಿಂಗ ಸಮಾನತೆಯನ್ನು ಸಾಧಿಸದಿದ್ದರೆ ಮತ್ತು ಮಹಿಳೆಯರು ಪುರುಷರಂತೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಆನಂದಿಸದಿದ್ದರೆ, ಸುಸ್ಥಿರ ಅಭಿವೃದ್ಧಿ ಇನ್ನೂ ದೂರದ ಕನಸಾಗಿರುತ್ತದೆ.

ಮಹಿಳಾ ಸಬಲೀಕರಣ ಏಕೆ ಬೇಕು?

ಪ್ರಪಂಚದ ಪ್ರತಿಯೊಂದು ದೇಶವು ಅಭಿವೃದ್ಧಿ ಹೊಂದುತ್ತಿರಲಿ, ಆದರೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡುವ ಇತಿಹಾಸವನ್ನು ಹೊಂದಿದೆ ಎಂಬುದು ನೋವಿನ ಸಂಗತಿಯಾಗಿದೆ. ಮಹಿಳೆಯರು ತಮ್ಮ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ವಿವಿಧ ರೀತಿಯ ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಗಾಗುತ್ತಾರೆ.

ಆದಾಗ್ಯೂ, ಪರಿಸ್ಥಿತಿಯು ಹಿಂದಿನಿಂದ ಗಣನೀಯವಾಗಿ ಸುಧಾರಿಸಿದೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚು. ಆದರೆ, ಭಾರತ, ಆಫ್ರಿಕಾ ಮುಂತಾದ ತೃತೀಯ ಜಗತ್ತಿನ ರಾಷ್ಟ್ರಗಳು ಸುಧಾರಣೆಗಳ ಹೊರತಾಗಿಯೂ ತಮ್ಮ ಮಹಿಳೆಯರನ್ನು ಸಬಲೀಕರಣಗೊಳಿಸುವ ವಿಷಯದಲ್ಲಿ ಇನ್ನೂ ಹಿಂದುಳಿದಿವೆ.

ಇನ್ನೂ ಕೆಲವು ಸಮಾಜಗಳಲ್ಲಿ ಹೆಣ್ಣನ್ನು ಒಂದು ಸರಕಿನಂತೆ ಪರಿಗಣಿಸಲಾಗಿದೆ. ಅವರು ಮನೆಕೆಲಸಗಳನ್ನು ಮಾಡಲು, ಅಡುಗೆ ಮಾಡುವ ಆಹಾರ, ಶುದ್ಧ ಪಾತ್ರೆಗಳು ಮತ್ತು ಬಟ್ಟೆ ಇತ್ಯಾದಿಗಳನ್ನು ಮಾತ್ರ ನಿರೀಕ್ಷಿಸುತ್ತಾರೆ. ಮಹಿಳೆ ಅಥವಾ ಹೆಣ್ಣು ಮಗುವಿಗೆ ಶಿಕ್ಷಣ ನೀಡುವುದು ನಿಷೇಧ ಮತ್ತು ಸಮಯ ಮತ್ತು ಹಣದ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ.

ಮಹಿಳೆಯರ ಆರ್ಥಿಕ ಮತ್ತು ರಾಜಕೀಯ ಸಬಲೀಕರಣವು ಅವರ ಸಾಮಾಜಿಕ ಸ್ಥಾನಮಾನವನ್ನು ಸುಧಾರಿಸಲು ಮತ್ತು ಅವರನ್ನು ಸ್ವತಂತ್ರವಾಗಿಸಲು ಬಹಳ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಮುಂದೆ ಬರಬೇಕು ಅವರ ಸ್ಥಾನವನ್ನು ಭದ್ರವಾಗಿಟ್ಟುಕೊಳ್ಳಬೇಕು. ಮಹಿಳೆಯರು ಮುಂದೆ ಬರಲು ಪರುಷರು ಅವರಿಗೆ ಪೋತ್ಸಾಹವನ್ನು ನೀಡಬೇಕು ಜೊತೆಗೆ ಸರ್ಕಾರ ಇದರ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಬೇಕು.

ಮಹಿಳಾ ಸಬಲೀಕರಣವು ಎಲ್ಲಾ ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡುವ ಮೂಲಕ ಸಮಾನ ಅವಕಾಶದ ಹಕ್ಕನ್ನು ನೀಡುತ್ತಿದೆ.

ಮಹಿಳಾ ದಿನಾಚರಣೆ ಯಾವಾಗ?

ಇತರೆ ಪ್ರಬಂಧಗಳು:

ಹೆಣ್ಣು ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯಗಳ ಪ್ರಬಂಧ

ಸುಕನ್ಯಾ ಸಮೃದ್ಧಿ ಯೋಜನೆ ಮಾಹಿತಿ

LEAVE A REPLY Cancel reply

Save my name, email, and website in this browser for the next time I comment.

EDITOR PICKS

Irumudi kattu sabarimalaikku lyrics in kannada | ಇರುಮುಡಿ ಕಟ್ಟು ಶಬರಿಮಲೈಕ್ಕಿ ಸಾಂಗ್‌ ಲಿರಿಕ್ಸ್‌, atma rama ananda ramana lyrics in kannada | ಆತ್ಮಾರಾಮ ಆನಂದ ರಮಣ ಸಾಂಗ್‌ ಲಿರಿಕ್ಸ್‌ ಕನ್ನಡ, ಮಹಾತ್ಮ ಗಾಂಧೀಜಿ ಪ್ರಬಂಧ ಕನ್ನಡ | mahatma gandhi essay in kannada, popular posts, popular category.

  • information 267
  • Prabandha 227
  • Kannada Lyrics 122
  • Lyrics in Kannada 57
  • Jeevana Charithre 41
  • Festival 36
  • Kannada News 32

© KannadaNew.com

  • Privacy Policy
  • Terms and Conditions
  • Dmca Policy

Jagathu Kannada News

ಕರ್ನಾಟಕ ಏಕೀಕರಣ ಪ್ರಬಂಧ I Karnataka Unification Essay in Kannada

'  data-src=

ಕರ್ನಾಟಕ ಏಕೀಕರಣ ಪ್ರಬಂಧ, Karnataka Unification Essay karnataka ekikarana prabandha in kannada

ಕರ್ನಾಟಕ ಏಕೀಕರಣ ಪ್ರಬಂಧ

ನಮಸ್ತೆ ಗೆಳೆಯರೆ, ನಾವಿಂದು ಚರ್ಚಿಸುವ ವಿಷಯ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಬಗ್ಗೆ. ಈ ಕರ್ನಾಟಕ ಏಕೀಕರಣದ ಹಿಂದೆ ಅನೇಕ ಜನರ ಹೋರಟ ಪ್ರಾಣ ತ್ಯಾಗ-ಬಲಿದಾನಗಳು ಇವೆ. ನಾವಿಂದು ನಮ್ಮದೆ ರಾಜ್ಯವಾದ ಕರ್ನಾಟಕದ ಹೋರಟದ ಬಗ್ಗೆ ಕರ್ನಾಟಕದ ಇತಿಹಾಸದ ಬಗ್ಗೆ,ಕಲ್ಯಾಣ ಕರ್ನಾಟಕದ ಬಗ್ಗೆ, ಪ್ರಮುಖ ಆಯೋಗಗಳು, 1924ರ ಬೆಳಗಾವಿ ಆಧಿವೇಶನದ ಬಗ್ಗೆ ನಾವಿಂದು ಈ ಪ್ರಬಂಧದಲ್ಲಿ ತಿಳಿಯೋಣ.

Karnataka Unification Essay In Kannada

ಕರ್ನಾಟಕ ಏಕೀಕರಣ ಭಾರತ ದೇಶದಲ್ಲಿ ಹೊಸ ರಾಜ್ಯದ ಸ್ಥಾಪನೆಗೆ ನಾಂದಿಯಾಯಿತು ಎನ್ನಬಹುದು.ಕರ್ನಾಟಕವನ್ನು ಕನ್ನಡವನ್ನು ಮಾತನಾಡುವ ಜನರನ್ನು ಕನ್ನಡಿಗರು ಎಂದು ಬೇರ್‌ಪಡಿಸಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಇವರು ಹರಿದು ಹಂಚಿಹೊಗಿದ್ದರು. ಹಾಗಾಗಿ ಎಲ್ಲಾ ಕನ್ನಡಿಗರು ಒಟ್ಟಿಗೆ ಇರಲು ಸರಿಯಾದ ರಾಜ್ಯದ ಅವಶ್ಯಕತೆ ಇತ್ತು ಹಾಗಾಗಿ ಕರ್ನಾಟಕ ವನ್ನು 1956ರಲ್ಲಿ ಕನ್ನಡ ಮಾತನಾಡುವ ಜನರು ಎಂದು ಪ್ರತ್ಯೇಕ ರಾಜ್ಯ ಸ್ಥಾಪನೆಯಾಯಿತು ಆ ರಾಜ್ಯಕ್ಕೆ ಮೈಸೂರು ಸಂಸ್ಥಾನ ಎಂಬ ಹೆಸರನ್ನು ನೀಡಲಾಯಿತು.

ಕರ್ನಾಟಕದ ಇತಿಹಾಸ:

ಕರ್ನಾಟಕ ಮತ್ತು ಕನ್ನಡಕ್ಕೆ ತನ್ನದೆ ಆದ ಇತಿಹಾಸವಿದೆ. ಕನ್ನಡ ಭಾಷೆ 2000 ವರ್ಷಗಳಷ್ಟು ಹಳೆಯದು ಎಂಬುದು ಎಲ್ಲಾರಿಗು ತಿಳಿದಿರುವ ವಿಷಯ. ಮೊದಲು ಕರ್ನಾಟಕವನ್ನು ಅದೆಷ್ಟೋ ರಾಜ ಮನೆತನಗಳು ಆಳ್ವಿಕೆ ಮಾಡಿವೆ. ಹಾಗೆ ಹೊಯ್ಸಳರು ಮತ್ತು ಸೇವುಣರ ಆಳ್ವಿಕೆಯ ಸಮಯದಲ್ಲಿರಾಜಕೀಯ ಸೆಣಸಾಟದಲ್ಲಿ ಕರ್ನಾಟಕವನ್ನು ಎರಡು ಭಾಗಗಳಾಗಿ ವಿಭಾಗಿಸಲಾಯಿತು. ತುಂಗಾಭದ್ರಾ ನದಿಯ ಉತ್ತರಕ್ಕೆ ಸೇವುಣರೂ, ದಕ್ಷಿಣಕ್ಕೆ ಹೊಯ್ಸಳರೂ ಆಳ್ವಿಕೆ ಮಾಡಿದರು. ಈ ಎಲ್ಲಾ ಘಟನೆಗಳು ನಡೆದಿದ್ದು 13ನೇ ಶತಮಾನದ ಅಸು ಪಸಿನಲ್ಲಿ ಆದರೆ ಆ ಭಾಗಗಳು ಮತ್ತೆ ಒಟ್ಟುಗೂಡಿದ್ದು 1956ರಲ್ಲಿಯೇ ಆಗಿತ್ತು.

ಸರಿಸುಮಾರು 750 ವರ್ಷಗಳ ಕಾಲ ಕನ್ನಡಿಗರು ಯಾವಗಾಲು ಕನ್ನಡೇತರರಿಂದ ಆಳಿಸಿಕೊಳ್ಳುತ್ತಿದ್ದರು. ಹಾಗಾಗಿ ಆಳುವ ರಾಜರ ಮಾತೃ ಭಾಷೆಯೆ ಅಳ್ವಿಕೆ ಯಲ್ಲಿ ಬಳಸುವುದು ವಾಡಿಕೆ ಹಾಗೆ ಉಳಿದ ಭಾಷೆಗಳ ಪ್ರಭಾವ ಹೆಚ್ಚಿದಾಗ ಉಪಯೊಗಿಸದ ಭಾಷೆ ತನಾಗಿಯೆ ಕುಂಟಿತ ಕಾಣುತ್ತದೆ. ಭಾಷೆಯ ಅವನತಿಯೊಂದಿಗೆ ಭಾಷಿಗರ ಸಂಸ್ಕೃತಿ -ಸಂಪ್ರದಾಯಗಳು ಅವನತಿಯನ್ನು ಕಾಣುತ್ತವೆ. ಹಾಗೇ ಕ್ರಮೇಣ ಗುರುತು ಸಿಗದಷ್ಟು ಬದಲವಣೆಯನ್ನು ಅನುಭಾವಿಸುವುದು ಕಂಡಿತ ಹಾಗೇ ನಮ್ಮ ಕರ್ನಾಟಕದಲ್ಲಿಯುಕೂಡ.

ಕರ್ನಾಟಕದ ಗಡಿ ಪ್ರದೇಶ:

ಬಾದಾಮಿ ಚಾಲುಕ್ಯ, ಗಂಗ, ಕದಂಬ ವಂಶಗಳು ಆಳ್ವಿಕೆ ಮಾಡುವ ಸಮಯದಲ್ಲಿ ಗೋದವರಿ ನದಿಯಿಂದ ತಮ್ಮ ಉತ್ತರದ ಗಡಿಯನ್ನು, ಕಾವೇರಿ ಸಮುದ್ರ ಸೇರುವ ವರೆಗು ಭಾಗಗಳವರೆಗು ತನ್ನ ಗಡಿಯನ್ನು ವಿಸ್ತರಿಸಿತ್ತು. ಕರ್ನಾಟಕದ ಬಾದಾಮಿ ಚಾಳುಕ್ಯರ ದೊರೆ ಇಮ್ಮುಡಿ ಪುಲಿಕೇಶಿಯ ಕಾಲದಲ್ಲಿ ನರ್ಮದೆಯವರೆಗು ತನ್ನ ಗಡಿಯನ್ನು ವಿಸ್ತರಿಸುವ ಅವಕಾಶವಿದ್ದರು ಸಹ ಕೆಲವು ಕಾರಣಗಳಿಂದ ಅವನು ಆ ರೀತಿ ಮಾಡಲಿಲ್ಲ.

ಶ್ರೀವಿಜಯನು ತನ್ನ ಕೃತಿಯಾದ ಕವಿರಾಜಮಾರ್ಗ ದಲ್ಲಿ ಕರ್ನಾಟಕದ ಗಡಿಯನ್ನು ಹೀಗೆ ವಿವರಿಸಿದ್ದಾನೆ. “ ಕಾವೇರಿಯಿಂದಮಾಗೋದಾವರಿವರಮಿರ್ದ ” ನಾಡು ಕನ್ನಡ ದೇಶ ಎಂದು ವಿವರಿಸಿದ್ದಾರೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಮಹಾರಾಷ್ಟ್ರಮತ್ತು ಆಂಧ್ರದ ಕೆಲವು ಭಾಗಗಳನ್ನು ಕರ್ನಾಟಕ ರಾಜ್ಯ ಎಂದೇ ಕರೆಯುತ್ತಿದ್ದರು.

ಮರಾಠರ ಪ್ರಭಾಲ್ಯ ಭಾರತದ ಭಾಗಗಳನ್ನು ಅನೇಕ ಗಡಿ ರಜ್ಯಗಳು ತನ್ನ ಹಿಡಿತಕ್ಕೆ ತೆಗೆದು ಕೊಂಡವು. ಅಂತೆಯೇ ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬಯಿ ಅಧಿಪತ್ಯಕ್ಕೂ ದಕ್ಷಿಣ ಕನ್ನಡ, ಬಳ್ಳಾರಿಗಳು ಬ್ರಿಟಿಷರ ಮದ್ರಾಸ್‌ ಅಧಿಪತ್ಯಕ್ಕೂ, ಬೀದರ್‌, ಗುಲಬರ್ಗ ಮತ್ತು ರಾಯಚೂರುಗಳು ಹೈದ್ರಬಾದ್‌ ನಿಜಾಮನ ಆಳ್ವಿಕೆಗೆ ಸೇರಿದ್ದವು. ಕೊಡಗು ಜಿಲ್ಲೆಯು ಬ್ರಿಟಿಷರ ಅಧೀನ ರಾಜ್ಯವಾಗಿತ್ತು.

ಕಲ್ಯಾಣ ಕರ್ನಾಟಕ:

ಸ್ವತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳು ಇದ್ದವು ಎಲ್ಲಾ ಸಂಸ್ಥಾನಗಳನ್ನು ರಾಜ ಮಹರಾಜರು ಆಳ್ವಿಕೆ ಮಾಡುತ್ತಿದ್ದರು. ಬ್ರೀಟಿಷರು ದೇಶ ಬಿಟ್ಟು ಹೊಗುವ ಸಮಯದಲ್ಲಿ ಎಲ್ಲಾ ಸಂಸ್ಥಾನಗಳಿಗೆ ಒಂದು ಕರೆಯನ್ನು ನೀಡಿದರು ಅದೆನಿಂದರೆ ಅದು ಯಾವುದೇ ಸಂಸ್ಥಾನದ ರಾಜರು ತಾವಿ ಇಚ್ಚೆಪಟ್ಟರೆ ಭಾರತದ ಒಕ್ಕೂಟವನ್ನು ಸೇರಬಹುದು ಅಥವಾ ಪ್ರತ್ಯೇಕ ದೇಶದ ಸ್ಥಾಪನೆ ಮಾಡಬಹುದು ಎಂದು ತಮ್ಮ ವಿಷಯವನ್ನು ಮಂಡಿಸಿದರು. ಇದರಿಂದ ಎಲ್ಲಾ ರಾಜರಲ್ಲಿ ಆಧಿಕಾರದ ಆಸೆಯನ್ನು ಹೆಚ್ಚಿಸಿದರು.

ಇದರಿಂದಗಿ ಭಾರತದ ಅವಿಭಾಜ್ಯ ಅಂಗವಾಗಿರುವ ಜಮು-ಕಾಶ್ಮೀರದ ರಾಜ ಹರಿಸಿಂಗ್‌, ಪಂಜಾಬ್‌ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್‌ ಮಹಾಬಾತ್‌ ಕಣಜಿ-ಖಖಖ ಹಾಗೂ ಹೈದ್ರಾಬಾದ್‌ ಸಂಸ್ಥಾನದ ನಿಜಾಮನಾದ ಮೀರ್‌ ಉಸ್ಮಾನ ಅಲೀ ಖಾನ್‌ ಇವರು ಆಗಸ್ಟ್‌ 15- 1947ರಂದು ಭಾರತದ ಒಕ್ಕೂಟ ಸೇರಲು ನಿರಕರಿಸಿದರು. ಮತ್ತು ಪ್ರತ್ಯೇಕ ದೇಶದ ಸ್ಥಾಪನೆಯ ಗುರಿಯನ್ನು ಹೊಂದಿದರು.

ಮಹಿಳಾ ಸಬಲೀಕರಣ ಪ್ರಬಂಧ | Women Empowerment Essay In Kannada

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe…

ಕಾಲಕ್ರಮೇಣ ಜಮ್ಮು-ಕಾಶ್ಮೀರ ಕೆಲ ಶರತ್ತುಗಳ ಮೂಲಕ ಸಂವಿಧಾನದ ಅನುಚ್ಛೇಧ 370ರ ಅಡಿಯಲ್ಲಿ ರಕ್ಷಣೆಯನ್ನು ಪಡೆದು ಭಾರತದ ಒಕ್ಕೂಟವನ್ನು ಸೇರುತ್ತದೆ. ಅದೇ ರೀತಿ ಜುನಾಗಡ್‌ನ ಸಂಸ್ಥಾನವುಕೂಡ 24ನೇ ಫೆಬ್ರವರಿ1948ರಲ್ಲಿ ಭಾರತ ಒಕ್ಕೂಟ ಸೇರಿ ಭಾರತದ ರಾಜ್ಯವಾಯಿತು.

ಭಾರತ ಸ್ವಾತಂತ್ರ್ಯಗೊಂಡನಂತರ ಹೈದ್ರಬಾದ್‌ ನಿಜಾಮರು ಕರ್ನಾಟಕ ಮತ್ತು ಕನ್ನಡಿಗರನ್ನು ತಮ್ಮ ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಕೆಲವು ಒಪ್ಪಂದ ಗಳ ನಂತರ 17 ನೆ ಸೆಪ್ಟಂಬರ್‌ ಹೈದರಬಾದ್‌ ನ ಆಳ್ವಿಕೆ ಇಂದ ಕರ್ನಾಟಕ ಮುಕ್ತವಾಯಿತು ಹಾಗಾಗೀ ಕರ್ನಾಟಕದ ಜನರು ವರ್ಷ ಏರಡು ಬಾರಿ ಸ್ವಾತಂತ್ರ್ಯದಿನ ವನ್ನು ಆಚರಿಸುತ್ತಾರೆ ಅವುಗಳೆಂದರೆ , 15 ಆಗಸ್ಟ್ ಸ್ವಾತಂತ್ರ್ಯದಿನಾಚರಣೆ , 17 ಸೆಪ್ಟೆಂಬರ್‌ ಹೈದರಬಾದ್‌ ನಿಂದ ಕರ್ನಾಟಕ ವಿಮೊಚನ ದಿನ.

1924ರ ಬೆಳಗಾವಿ ಆಧಿವೇಶನ:

1924ರಲ್ಲಿ ಕರ್ನಾಟಕದ ಪ್ರದೇಶದಲ್ಲಿ ಕಾಂಗ್ರೇಸ್‌ ಸಮಿಯ ಆಶ್ರಯದಲ್ಲಿ ಭಾರತೀಯ ರಾಷ್ಟೀಯ ಕಾಂಗ್ರೇಸ್‌ ನ ಐತಿಹಾಸಿ ಬೆಳಗಾವಿ ಅಧಿವೇಶನ ಸಂಘಟಿಸಲಾಯಿತ್ತು. ಈ ಆಧಿವೇಶನದ ಅದ್ಯಕ್ಷತೆಯನ್ನು ಮಹಾತ್ಮ ಗಾಂಧೀ ಯವರು ವಹಿಸಿದ್ದರು.

ಮತ್ತು ಇದೇ ಸ್ಥಾಳದಲ್ಲಿ ಚೊಚ್ಚಲ ಕರ್ನಾಟಕ ಏಕೀಕರಣ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಈ ಸಮ್ಮೇಳನದ ಅಧ್ಯಕ್ಷತೆಯನ್ನು ಸಿದ್ದಪ್ಪ ಕಂಬಳಿ ಯವರು ವಹಿಸಿದ್ದರು.

ಪ್ರಮುಖ ಆಯೋಗಗಳು:

  • 1948ರಲ್ಲಿ ಕೇಂದ್ರ ಸರ್ಕಾರದ ಧಾರ ಆಯೋಗ
  • 1949ರಲ್ಲಿ ಜೆ.ವಿ.ಪಿ ಸಮಿತಿ ಭಾಷವಾರು ವಿಂಗಡಣೆ ರಾಷ್ಟ್ರದ ಐಕ್ಯತೆಗೆ ದಕ್ಕೆ.
  • 1953ರಲ್ಲಿ ಆಂಧ್ರದಲ್ಲಿ ರೊಟ್ಟಿ ಶ್ರೀರಾಮುಲು ರವರು ಉಪವಾಸ ಮಾಡಿ ತಮ್ಮ ಪ್ರಾಣತ್ಯಾಗ ಮಾಡಿದ್ದರಿಂದಾಗಿ ಭಾಷಾ ಆಧಾರದ ಮೇಲೆ ಆಂಧ್ರಪ್ರದೇಶ ರಚನೆ.
  • 1953ರಲ್ಲಿ ಕೇಂದ್ರ ಸರ್ಕಾರ ಪಜಲ್‌ ಅಲಿ ಅಯೋಗ ನೇವಿಸಿತು. ಇದು ತನ್ನ ವರದಿಯನ್ನು 1955ರಲ್ಲಿ ಸರ್ಕಾರಕ್ಕೆ ನೀಡಿ ಭಾಷಾವಾರು ವಿಂಗಡಣೆ ಸೂಕ್ತವೆಂದು ತಿಳಿಸಿತು.

1956ರಲ್ಲಿ ರಾಜ್ಯ ಮನರ್‌ ವಿಂಗಡಣಾ ಕಾಯ್ದೆಯನ್ವಯ 1956 ನವೆಂಬರ್‌ 1 ರಂದು ವಿಶಾಲ ಮೈಸೂರು ಸಂಸ್ಥಾನವೆಂದು ಎಸ್.‌ ನಿಜಲಿಂಗಪ್ಪ ರ ನೇತೃತ್ವದಲ್ಲಿ ರಚನೆಯಾಯಿತು.

ಕರ್ನಾಟಕದ ಏಕೀಕರಣ ಒಂದು ಸಾಧನೆಯ ಫಲ ಬೇರೆ ರಾಜ್ಯಗಳೆಲ್ಲ ತಮ್ಮ ರಾಜ್ಯ ಎಂದು ಹೇಳಿಕೊಳ್ಳುವ ಈ ಸಮಯದಲ್ಲಿ ನಮಗೆ ಒಂದು ಪ್ರತ್ಯೇಕ ರಾಜ್ಯವಿಲ್ಲ ಎಂಬುದು ತುಂಬ ನೋವಿನ ಸಂಗತಿ. ಪ್ರತಿ ಗೆಲುವಿನಲ್ಲು ಅದೆಷ್ಟೋ ಜನರ ನೋವಿನ ಕಥೆಗಳು ಇವೆ ಎಂಬುದು ಎಲ್ಲಾರಿಗು ಗೊತ್ತಿರುವ ವಿಷಯ. ನಮ್ಮ ಕರ್ನಾಟಕ್ಕೆ ರಾಜ್ಯ ಪುನರ್‌ ರಚನೆ ಮಾಡಿದರಾದರು ರಾಜ್ಯದಲ್ಲಿನ ಜನರು ಆ ರಾಜ್ಯ ಅಥವಾ ದೇಶದ ಸಂಸೃತಿ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೊಗುವುದು ಪ್ರತಿಯೊಬ್ಬರ ಕರ್ತವ್ಯ.

ವಿಶಾಲ ಮೈಸೂರು ಎಂದು ಯಾರ ನೇತೃತ್ವದಲ್ಲಿ ರಚನೆಯಾಯಿತು?

ಎಸ್.‌ ನಿಜಲಿಂಗಪ್ಪ

ಕರ್ನಾಟಕದಲ್ಲಿ ಎಂದು ಹೈದ್ರಬಾದ್‌ ವಿಮೊಚನ ದಿನವನ್ನು ಆಚರಿಸುತ್ತಾರೆ?

17 ಸೆಪ್ಟೆಂಬರ್‌

ಕವಿರಾಜಮಾರ್ಗ ಯಾರ ಕೃತಿ?

1924ರ ಬೆಳಗಾವಿ ಆಧಿವೇಶನದ ಅಧ್ಯಕ್ಷತೆಯನ್ನು ಯಾರುವಹಿಸಿದ್ದರು.

ಮಹಾತ್ಮ ಗಾಂಧೀಜಿ

ಇತರೆ ವಿಷಯಗಳು:

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ಸ್ನೇಹಿತರ ಬಗ್ಗೆ ಪ್ರಬಂಧ

ಮತದಾನ ಪ್ರಬಂಧ  

'  data-src=

ಕ್ರೀಡೆ ಮತ್ತು ನಮ್ಮ ಆರೋಗ್ಯ ಪ್ರಬಂಧ | Kride Mattu Namma Arogya Prabandha In Kannada

ಬಡತನದ ಬಗ್ಗೆ ಪ್ರಬಂಧ I Poverty Essay in Kannada | ಬಡತನ ನಿರ್ಮೂಲನೆ ಬಗ್ಗೆ ಪ್ರಬಂಧ,

ತ್ಯಾಜ್ಯ ವಸ್ತುಗಳ ಮರುಬಳಕೆ ಪ್ರಬಂಧ | Waste Material Recycling Essay in…

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe Prabandha in…

ಗಾಂಧಿ ಜಯಂತಿ ಪ್ರಬಂಧ | Gandhi Jayanti Essay in Kannada

Your email address will not be published.

Save my name, email, and website in this browser for the next time I comment.

nagarikarana essay in kannada

  • SUBSCRIBE TO OUR NEWSLETTERS

nagarikarana essay in kannada

ನವರಸಗಳು ಕಲಾತ್ಮಕತೆಯ ಅಭಿವ್ಯಕ್ತಿಗಳನ್ನು ವಿಸ್ತರಿಸುತ್ತದೆ: ಟಿ.ಎಸ್.‌ ನಾಗಾಭರಣ

Date: 18-03-2023

Location: ಬೆಂಗಳೂರು

ಬೆಂಗಳೂರಿನ ಇನ್ಫೋಸಿಸ್‌ ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ವತಿಯಿಂದ ಶನಿವಾರದಂದು ‘ಬೊಂಬೆಹಬ್ಬ- ಬೊಂಬೆಯ ಭಾವಾಭಿವ್ಯಕ್ತಿಯಲ್ಲಿ ನವರಸಗಳು’ ಏಳನೇ ದಿನದ ಸಮಾರೋಪ ಕಾರ್ಯಕ್ರಮವು ಭಾರತೀಯ ವಿದ್ಯಾಭವನದಲ್ಲಿ ನಡೆಯಿತು.

ನಟ, ನಿರ್ದೇಶಕ ಟಿ.ಎಸ್.‌ ನಾಗಾಭರಣ ಅವರು ‘ಸಿನಿಮಾಗಳಲ್ಲಿ ನವರಸಗಳ ಅಭಿವ್ಯಕ್ತಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ನವರಸಗಳ ಪ್ರಕಾರವೇ ಕಲಾತ್ಮಕತೆಯ ಜೀವಾಳ’ : ಟಿ.ಎಸ್.‌ ನಾಗಾಭರಣ, ‘ಭಾರತೀಯ ಸಿನಿಮಾರಂಗ ಎಂಬುವುದೇ ಬಹಳ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಭಾರತೀಯ ಸಿನಿಮಾ ಎಂದರೇ, ಕೇವಲ ಹಿಂದಿ ಸಿನಿಮಾಗಳು ಎಂಬ ಅಪನಂಬಿಕೆ ಇದೆ ಇದನ್ನು ನಾವು ಮೊದಲು ತೊಲಗಿಸಬೇಕು. ನವರಸಗಳ ಪ್ರಕಾರವೇ ಕಲಾತ್ಮಕತೆಯ ಜೀವಾಳವಾಗಿದೆ. ಹಾಸ್ಯ, ಭೀಭತ್ಸ, ರೌದ್ರ, ಭಯನಕ, ವೀರ, ಶೃಂಗಾರ, ಶಾಂತ ಈ ನವರಸಗಳು ಕಲಾತ್ಮಕತೆಯ ಅಭಿವ್ಯಕ್ತಿಗಳನ್ನು ವಿಸ್ತರಿಸುವ ಪಾತ್ರವನ್ನು ಶಕ್ತಿಯುತವಾಗಿ ನಿರ್ವಹಿಸಿದೆ. ಜೀವ ಸಾಧ್ಯತೆ ಒಳಗಡೆ ಕಂಡುಬರುವ ಅತ್ಯಂತ ಸರಳ ರಸಗಳೇ ಈ ನವರಸಗಳು’ ಎಂದರು.

‘ಪ್ರದರ್ಶನ ಕಲೆಗಳು ಜನರ ಜೀವನದಲ್ಲಿ ವಿಭಿನ್ನ ಪಾತ್ರವನ್ನು ವಹಿಸುತ್ತದೆ. ಸಿನಿಮಾದಂತಹ ನೂತನ ತಂತ್ರಜ್ಞಾನ ಬಂದಾಗ ಈ ಪ್ರದರ್ಶನ ಕಲೆಗಳಿಗೆ ಹೊಸ ಆಯಾಮಗಳು ಬಂದವು. ಆದರೂ ಸಿನಿಮಾಗಳಲ್ಲಿಯು ನವರಸಗಳ ಪಾತ್ರ ಅಪಾರವಾಗಿದೆ. ಪೌರಾಣಿಕ ಸಿನಿಮಾಗಳ ಕಾಲ ಮುಗಿದ ಮೇಲೆ ಪ್ರಾರಂಭವಾದದ್ದು ಸಾಮಾಜಿಕ ಸಿನಿಮಾಗಳ ಕಾಲ. ಈ ಕಾಲದಲ್ಲಿ ನವರಸಗಳ ಬಳಕೆ ಹೆಚ್ಚಿದ್ದವು. ಹೀಗೆ ಸಿನಿಮಾ ರಂಗಗಳಲ್ಲಿ ಬೆಳವಣಿಗೆ ಆದ ಹಾಗೆ ಶೃಂಗಾರ ರಸಗಳ ಬಳಕೆಯು ಜಾಸ್ತಿಯಾಯಿತು. ಇತ್ತೀಚಿನ ದಿನಗಳಲ್ಲಿ ಶೃಂಗಾರ ರಸಗಳ ಬಳಕೆ ಜಾಸ್ತಿಯಾಗಿದ್ದು, ಭಾವಗಳ ಬಳಕೆ ಕಡಿಮೆಯಾಗಿರುವುದು ವಿಷಾದನೀಯ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ಫೋಸಿಸ್‌ ನಿರ್ದೇಶಕಿ ಶ್ರುತಿ ಕುರಾನ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ‘ದೇವಿ ಮಹಾತ್ಮೆ ಯಕ್ಷಬೊಂಬೆಯಾಟ’ವು ಕಾಸರಗೋಡಿನ ಕೆ.ವಿ. ರಮೇಶ್‌ ಅವರ ನಿರ್ದೆಶನದಲ್ಲಿ ಮೂಡಿಬಂತು.

ಕಾರ್ಯಕ್ರಮವನ್ನು ಫೇಸ್ ಬುಕ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ... ಕಾರ್ಯಕ್ರಮವನ್ನು ಯುಟ್ಯೂಬ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ...

nagarikarana essay in kannada

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

nagarikarana essay in kannada

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...

nagarikarana essay in kannada

Daily Column View All

nagarikarana essay in kannada

ಹಿಂದಿನ ನಿಲ್ದಾಣದಲ್ಲಿ...

nagarikarana essay in kannada

ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ

nagarikarana essay in kannada

ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್

Zoom with Bookbrahma

Mukha Mukhi

Latest Story View All

nagarikarana essay in kannada

ಕೆ.ಎಸ್ ಗಂಗಾಧರ

Latest Poem View All

nagarikarana essay in kannada

ಚನ್ನಪ್ಪ ಅಂಗಡಿ - ಬೆಳ್ಳಿಚುಕ್ಕಿ

Kathe Kelu Kanda

Kate Kelona Banni

Gandhada Beedu

Subscribe to Book Brahma

nagarikarana essay in kannada

Thank you for Subscribing

nagarikarana essay in kannada

©2024 Book Brahma Private Limited.

VidyaSiri

  • Latest News
  • Sarkari Yojana
  • Scholarship

ನನ್ನ ರಾಷ್ಟ್ರದ ಬಗ್ಗೆ ಪ್ರಬಂಧ | Essay On My Nation in Kannada

ನನ್ನ ರಾಷ್ಟ್ರದ ಬಗ್ಗೆ ಪ್ರಬಂಧ Essay On My Nation in Kannada nanna rashtrada bagge prabandha indian essay in kannada

ನನ್ನ ರಾಷ್ಟ್ರದ ಬಗ್ಗೆ ಪ್ರಬಂಧ

Essay On My Nation in Kannada

ಈ ಲೇಖನಿಯಲ್ಲಿ ನನ್ನ ದೇಶ ಭಾರತದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ವಿವಿಧತೆಯಲ್ಲಿ ಏಕತೆ ಎಂಬುದಕ್ಕೆ ಭಾರತ, ನಮ್ಮ ದೇಶ ಅತ್ಯುತ್ತಮ ಉದಾಹರಣೆ. ವಿವಿಧ ಹಿನ್ನೆಲೆ ಮತ್ತು ಧರ್ಮದ ಜನರು ಇಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ವಾಸಿಸುತ್ತಿದ್ದಾರೆ. ಇದಲ್ಲದೆ, ನಮ್ಮ ದೇಶವು ವಿವಿಧ ಭಾಷೆಗಳಿಗೆ ಹೆಸರುವಾಸಿಯಾಗಿದೆ.

ವಿಶ್ವದ ಏಳನೇ ಅತಿದೊಡ್ಡ ದೇಶವಾಗಿರುವ ಭಾರತವು ಸುಂದರವಾದ ಭೌಗೋಳಿಕ ಸ್ಥಳದಲ್ಲಿ ನೆಲೆಗೊಂಡಿದೆ. ಉತ್ತರದಲ್ಲಿ ಹಿಮಾಲಯದಿಂದ ಸುತ್ತುವರೆದಿರುವ ಈ ದೇಶವು ಪೂರ್ವದಲ್ಲಿ ಬಂಗಾಳ ಕೊಲ್ಲಿ ಮತ್ತು ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದ ನಡುವೆ ಹಿಂದೂ ಮಹಾಸಾಗರಕ್ಕೆ ಬೀಳುತ್ತದೆ. ಭಾರತವು ನೇಪಾಳ, ಭೂತಾನ್, ಬಾಂಗ್ಲಾದೇಶ, ಪಾಕಿಸ್ತಾನ, ಚೀನಾ ಮತ್ತು ಮ್ಯಾನ್ಮಾರ್‌ನೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ.

ವಿಷಯ ವಿವರಣೆ

ನಾವು ವಾಸಿಸುವ ಭಾರತವು ಉತ್ತರದಲ್ಲಿ ಹಿಮಾಲಯದಿಂದ, ದಕ್ಷಿಣದಲ್ಲಿ ಶ್ರೀಲಂಕಾ ಮತ್ತು ಹಿಂದೂ ಮಹಾಸಾಗರದಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಮತ್ತು ಪಶ್ಚಿಮದಲ್ಲಿ ಅರೇಬಿಯನ್ನಿಂದ ಸುತ್ತುವರೆದಿರುವ ಸುಂದರವಾದ ರಾಷ್ಟ್ರವಾಗಿದೆ. ಸಮುದ್ರ ಮತ್ತು ಪಾಕಿಸ್ತಾನ. ಇದು ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ತಲುಪುತ್ತದೆ.

ಭಾರತವು ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಮತ್ತು ಸಂವಹನದಲ್ಲಿ ತನ್ನ ಸಾಧನೆಗಳಿಗಾಗಿ ವಿಶ್ವದ ಅತ್ಯಂತ ಹೆಚ್ಚು ಗೌರವಾನ್ವಿತ ರಾಷ್ಟ್ರಗಳಲ್ಲಿ ಒಂದಾಗಿದೆ. ನಾವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಕರು. ಗೋಧಿ ಮತ್ತು ಸಕ್ಕರೆಯ ಅತಿ ಹೆಚ್ಚು ಉತ್ಪಾದಕರಲ್ಲಿ ನಾವಿದ್ದೇವೆ. ಭಾರತೀಯರು ತಮ್ಮ ತಾಂತ್ರಿಕ ಮತ್ತು ಎಂಜಿನಿಯರಿಂಗ್ ಕೌಶಲ್ಯಗಳಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರತೀಯರು ಹೆಚ್ಚು ಬೇಡಿಕೆಯಲ್ಲಿದ್ದಾರೆ.

nagarikarana essay in kannada

ಪ್ರವಾಸಿ ಸ್ಥಳಗಳು ಮತ್ತು ಪ್ರಕೃತಿ ಸೌಂದರ್ಯ

ಶತಮಾನಗಳಿಂದ ನಾವು ನಮ್ಮ ಸಂಸ್ಕೃತಿಯನ್ನು ಪರಂಪರೆಯಿಂದ ಪಡೆದುಕೊಂಡಿದ್ದೇವೆ ವಿವಿಧತೆಯಲ್ಲಿ ಏಕತೆ ಇದೆ. ನಾವು ಅನೇಕ ಭಾಷೆಗಳನ್ನು ಮಾತನಾಡುತ್ತೇವೆ, ಅನೇಕ ದೇವರುಗಳನ್ನು ಆರಾಧಿಸುತ್ತೇವೆ ಮತ್ತು ಅದೇ ಆತ್ಮವನ್ನು ಹೊಂದಿದ್ದೇವೆ. ಭಾರತದ ಚೈತನ್ಯ, ದೇಶಾದ್ಯಂತ ಓಡುತ್ತಿದೆ, ನಮ್ಮನ್ನು ಒಟ್ಟಿಗೆ ಬಂಧಿಸುತ್ತದೆ ಭಾರತವು ಅನೇಕ ಪ್ರವಾಸಿ ಸ್ಥಳಗಳನ್ನು ಹೊಂದಿದೆ.

ತಾಜ್ ಮಹಲ್, ಫತೇಪುರ್ ಸಿಕ್ರಿ ದಿ ಕುತುಬ್ ಮಿನಾರ್, ರೆಡ್ ಫೋರ್ಟ್, ಗೇಟ್ವೇ ಆಫ್ ಇಂಡಿಯಾ. ಹವಾಯಿ ಮಹಲ್, ಚಂಡೀಗಢದ ರಾಕ್ ಗಾರ್ಡನ್, ಚಿತ್ತೋರಗಢ ಮತ್ತು ಮೈಸೂರು ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುವ ಹಲವಾರು ಅದ್ಭುತಗಳಲ್ಲಿ ಕೆಲವು.

ಕಾಶ್ಮೀರವು ತನ್ನ ನೈಸರ್ಗಿಕ ಸೌಂದರ್ಯದಿಂದ ಬಹಳ ಶ್ರೀಮಂತವಾಗಿದೆ. ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಬಣ್ಣಿಸಲಾಗಿದೆ. ಕಣಿವೆಗಳು, ನದಿಗಳು ಮತ್ತು ಸರೋವರಗಳು ಮತ್ತು ಪರ್ವತಗಳ ದೇಶವು ದೇವರುಗಳಿಗೆ ಸೂಕ್ತವಾದ ವಾಸಸ್ಥಾನವಾಗಿದೆ.

ಊಟಿ, ನೀಲಗಿರಿ ಬೆಟ್ಟಗಳು, ಶಿಮ್ಲಾ ಮತ್ತು ದಕ್ಷಿಣ ಭಾರತದ ದೇವಾಲಯಗಳು, ಹಾಗೆಯೇ ಖಜುರಾಹೊ ಅಜಂತಾ ಮತ್ತು ಎಲ್ಲೋರಾ ಗುಹೆಗಳು, ಒಬ್ಬರು ಹೆಮ್ಮೆಪಡಬಹುದಾದ ಸ್ಥಳಗಳು ಇದು ನನ್ನ ಕನಸಿನ ಭೂಮಿ ನಾನು ನನ್ನ ದೇಶವನ್ನು ತುಂಬಾ ಪ್ರೀತಿಸುತ್ತೇನೆ.

ನೈಸರ್ಗಿಕ ಮಣ್ಣಿನಿಂದಾಗಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಬಹುದು. ಭಾರತೀಯ ಭೂಮಿ ತುಂಬಾ ಫಲವತ್ತಾದ ಮತ್ತು ವಿಸ್ತರಿಸುತ್ತಿರುವ ಕಾರಣ, ಭಾರತೀಯ ರೈತರು ವರ್ಷವಿಡೀ, ಎಲ್ಲಾ ಋತುಗಳಲ್ಲಿ ವಿವಿಧ ಬೆಳೆಗಳನ್ನು ನೆಡುತ್ತಾರೆ, ಆದ್ದರಿಂದ ಅವರ ಹೊಲಗಳು ಎಂದಿಗೂ ಖಾಲಿಯಾಗಿರುವುದಿಲ್ಲ.

ಭಾರತವು ಪ್ರಸಿದ್ಧ ಮಾವಿನ ಹಣ್ಣು ಮತ್ತು ಗೋಧಿ, ಜೋಳ, ಅಕ್ಕಿ ಮತ್ತು ಮಸಾಲೆಗಳನ್ನು ಒಳಗೊಂಡಂತೆ ವಿವಿಧ ಬೆಳೆಗಳನ್ನು ಉತ್ಪಾದಿಸುತ್ತದೆ. ಭಾರತವು ಕೆಂಪು ಮಣ್ಣು, ಕಪ್ಪು ಮಣ್ಣು, ಮರುಭೂಮಿ ಮಣ್ಣು, ಸುಣ್ಣದ ಮಣ್ಣು, ಪರ್ವತ ಮಣ್ಣು ಮತ್ತು ಮೆಕ್ಕಲು ಮಣ್ಣು ಸೇರಿದಂತೆ ಬಹು ವಿಧದ ಮಣ್ಣುಗಳನ್ನು ಹೊಂದಿದೆ. ಭಾರತವು ಜಾಗತಿಕ ಖ್ಯಾತಿಯನ್ನು ಹೊಂದಿದೆ ಮತ್ತು ಭಾರತವು ವಿದೇಶಿ ರಾಷ್ಟ್ರಗಳಿಗೆ ಬೃಹತ್ ಪ್ರಮಾಣದ ಕೃಷಿ ಸರಕುಗಳನ್ನು ರಫ್ತು ಮಾಡುತ್ತದೆ.

ಸಾಂಸ್ಕೃತಿಕ ಪರಂಪರೆ

ನನ್ನ ದೇಶವಾದ ಭಾರತವು ತನ್ನ ಸಾಂಸ್ಕೃತಿಕ ಪರಂಪರೆಯ  ಬಗ್ಗೆ ನಂಬಲಾಗದಷ್ಟು ಹೆಮ್ಮೆಪಡುತ್ತದೆ , ಅದರ ಸಂಸ್ಕೃತಿಗಳು ವಿಭಿನ್ನವಾಗಿವೆ ಮತ್ತು ಹೆಚ್ಚಿನವು ಬಹಳ ಕಾಲ ಉಳಿದುಕೊಂಡಿವೆ. ಶ್ರೀಮಂತ ಜೀವನಶೈಲಿ, ಭಾಷಾ ಸಂಪ್ರದಾಯಗಳು ಮತ್ತು ನವ ಭಾರತದ ಇತರ ಅಂಶಗಳು ಉದಾಹರಣೆಗಳಾಗಿ ಕಾರ್ಯನಿರ್ವಹಿಸುತ್ತವೆ.

ಜನರು ವಿವಿಧ ಧಾರ್ಮಿಕ ನಂಬಿಕೆಗಳು ಮತ್ತು ಗಮನಾರ್ಹ ನಂಬಿಕೆಗಳಿಗೆ ಸೇರಿದವರಾಗಿದ್ದಾರೆ. ಆದಾಗ್ಯೂ, ಭಾರತದಲ್ಲಿನ ಬಹುಪಾಲು ಜನರು ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಸಿಖ್ಖರು ಸೇರಿದಂತೆ ಹಲವಾರು ಧರ್ಮಗಳು ಮತ್ತು ಸಮುದಾಯಗಳ ಸದಸ್ಯರಾಗಿದ್ದಾರೆ.

ವೇದ ಉಪನಿಷತ್, ಮಹಾಭಾರತ, ಗೀತೆ ಮತ್ತು ರಾಮಾಯಣದಿಂದ ರಚನೆಗಳು, ಹಾಗೆಯೇ ಕಾಳಿದಾಸ, ಜಯದೇವ, ತುಳಸಿದಾಸ ಮತ್ತು ಸೂರದಾಸರಂತಹ ಕವಿಗಳ ಕೃತಿಗಳು ಸಾಂಸ್ಕೃತಿಕ ಪರಂಪರೆಯ ಭಾಗವೆಂದು ಪರಿಗಣಿಸಲಾಗಿದೆ.

ಗರ್ಬಾ, ಭಾಂಗ್ರಾ, ಬಿಹು ಘೂಮರ್, ಸುಖ್ ಮತ್ತು ಪಾಂಡವಾನಿ ಸೇರಿದಂತೆ ಜಾನಪದ ನೃತ್ಯಗಳು ರಾಷ್ಟ್ರದ ರಾಜ್ಯಗಳಾದ್ಯಂತ ಪ್ರಸಿದ್ಧವಾಗಿವೆ.

ಭಾರತವು ವಿವಿಧ ಸಾಂಸ್ಕೃತಿಕ ಮೌಲ್ಯಗಳನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿದೆ. ಈ ದೇಶದ ಬಗ್ಗೆ ತಿಳಿದುಕೊಳ್ಳುವುದು ಮತ್ತು ಬದುಕುವುದು ಜೀವನದ ಸಾಟಿಯಿಲ್ಲದ ಸಂತೋಷಗಳಲ್ಲಿ ಒಂದಾಗಿದೆ. ನನ್ನ ದೇಶವು ತನ್ನ ಸ್ವಾತಂತ್ರ್ಯವನ್ನು ಗೆಲ್ಲಲು ಬಹಳ ಕಷ್ಟಪಟ್ಟು ಮತ್ತು ತ್ಯಾಗ ಮಾಡಿದರೂ ಸಹ ಪರಿಶ್ರಮಪಟ್ಟಿತು. ಭಾರತ, ನನ್ನ ದೇಶ, ಇಂದು ಜಾಗತಿಕ ಶಕ್ತಿಯಾಗಲು ಹತ್ತಿರವಾಗುತ್ತಿದೆ. ನನ್ನ ದೇಶದ ಬಗ್ಗೆ ನನಗೆ ಹೆಮ್ಮೆ ಇದೆ.

ಭಾರತದ ರಾಷ್ಟ್ರೀಯ ತರಕಾರಿ ಯಾವುದು?

ಭಾರತದ ರಾಷ್ಟ್ರೀಯ ಹಾಡು ಯಾವುದು.

ವಂದೇ ಮಾತರಂ.

ಇತರೆ ವಿಷಯಗಳು :

ರಾಷ್ಟ್ರೀಯ ಸೇನಾ ದಿನದ ಬಗ್ಗೆ ಪ್ರಬಂಧ

ನನ್ನ ಕನಸಿನ ಭಾರತ ಪ್ರಬಂಧ

Leave your vote

' src=

vidyasiri24

Leave a reply cancel reply.

Your email address will not be published. Required fields are marked *

Save my name, email, and website in this browser for the next time I comment.

Username or Email Address

Remember Me

Forgot password?

Enter your account data and we will send you a link to reset your password.

Your password reset link appears to be invalid or expired.

Privacy policy, add to collection.

Public collection title

Private collection title

No Collections

Here you'll find all collections you've created before.

  • kannadadeevige.in
  • Privacy Policy
  • Terms and Conditions
  • DMCA POLICY

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 8th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Information
  • Life Quotes
  • Education Loan

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ | Kannada Bhashe Ulisuvalli Kannadaigara Paatra Essay in Kannada

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ, Kannada Bhashe Ulisuvalli Kannadaigara Paatra Essay in Kannada Prabandha Role of Kannadigas in Saving Kannada Language Essay

Kannada Bhashe Ulisuvalli Kannadaigara Paatra Essay in Kannada

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ

ಒಬ್ಬ ವ್ಯಕ್ತಿ ಪರಿಪೂರ್ಣತೆಯನ್ನು ಪಡೆಯಬೇಕಾದರೆ ಮಾತೃಭಾಷೆಯಿಂದ ಮಾತ್ರ ಸಾಧ್ಯ. ಮಾತೃಭಾಷೆಯನ್ನು ಕಡೆಗಣಿಸಿದ ವ್ಯಕ್ತಿ ಹೆತ್ತ ತಾಯಿಯನ್ನು ಕಡೆಗಣಿಸಿದಷ್ಟೇ ಸತ್ಯ.

ನೀವು ಸಹ ಸ್ಥಳೀಯರ ಕೂಟದಲ್ಲಿ ಕನ್ನಡಿಗನಾಗಿದ್ದರೆ, ಬೇಗ ಅಥವಾ ನಂತರ ಬಹುತೇಕ ಅನಿವಾರ್ಯವಾಗಿ ಉದ್ಭವಿಸುವ ಒಂದು ವಿಷಯವೆಂದರೆ “ಕನ್ನಡದ ಸಾವು”.

ಕನ್ನಡಿಗನಾಗಿ ಹುಟ್ಟಿ ಕೊನೆಗೆ ಮಣ್ಣಲ್ಲಿ ಮಣ್ಣಾಗುವ ವರೆಗೆ ಕನ್ನಡಿಗನಾಗಿ ಬದುಕಿ ಬಾಳುವುದು ಮನುಷ್ಯತ್ವ ಅಲ್ಲವೇ. ಕನ್ನಡಿಗರು ಯಾವುದೇ ಮುಜುಗರಕ್ಕೆ ಒಳಪಡದೆ ಪರಭಾಷಿಗರನ್ನು ಕನ್ನಡದಲ್ಲಿ ಮಾತನಾಡಿಸಬೇಕು.

ಆಂಗ್ಲಭಾಷೆ ಅಥವಾ ಹಿಂದಿ ಕಲಿತರೇ ಹೊಟ್ಟೆಗೆ ಅನ್ನ ಎಂಬ ಭಾವನೆಯನ್ನು ಬಿಡಬೇಕು. ನಮ್ಮ ಕನ್ನಡ ಭಾಷೆಯಲ್ಲಿಯೇ ಕಲಿತು ಉನ್ನತ ವಿದ್ಯಾಭ್ಯಾಸಕ್ಕೆ ಸೇರಿ ಇಂಗ್ಲಿಷ್ ಕಲಿತು, ಆನಂತರ ನಮಗೆ ಅನ್ನ ಕೊಟ್ಟ ಭಾಷೆ ಎಂದು ಎಲ್ಲವೂ ಇಂಗ್ಲಿಷ್ಮಯ ವಾಗಬಾರದು.

ವಿಷಯ ಬೆಳವಣಿಗೆ

ಪರಭಾಷೆ ನಮಗೆ ಎಷ್ಟು ಅವಶ್ಯವೋ ಅಷ್ಟನ್ನು ಮಾತ್ರ ಬಳಸಬೇಕು ಅದು ಅತಿಯಾಗಬಾರದು. ಒಟ್ಟಿನಲ್ಲಿ ಭಾಷೆ ಮತ್ತು ಸಂಸ್ಕೃತಿ ಹೇಗೆ ನಿಧಾನವಾಗಿ ಮರೆಯಾಗುತ್ತಿದೆ ಎಂಬುದು ಈ ಸಂಭಾಷಣೆಗಳ ಸಾರಾಂಶ.

“ಭಾರತದಾದ್ಯಂತ ಜನರು ನಮ್ಮ ನಗರಕ್ಕೆ ಬರುತ್ತಿದ್ದಾರೆ ಆದರೆ ಅವರಿಗೆ ಕನ್ನಡ ತಿಳಿದಿಲ್ಲ ಮತ್ತು ಆದ್ದರಿಂದ ನಮ್ಮದೇ ರಾಜ್ಯದಲ್ಲಿ ಕನ್ನಡವನ್ನು ‘ದ್ವಿತೀಯ’ ಭಾಷೆಯಾಗಿ ಮಾಡಲಾಗುತ್ತಿದೆ!”

ಕನ್ನಡ ಮಾತನಾಡುವುದು ಸಹ ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ ಎಂಬ ಅರಿವನ್ನು ನಾವು ಹರಡಬೇಕು. ಈಗ ಹಲವರು ಇಂಗ್ಲಿಷ್ ಮಾತನಾಡುವುದು ಒಳ್ಳೆಯದು.

ಕನ್ನಡದ ಉಳಿವಿಗೆ ನಾವು ಕನ್ನಡಿಗರು ಮಾಡಬಹುದಾದ ಕರ್ತವ್ಯಗಳು

  • ಕನ್ನಡದ ವ್ಯಾಪ್ತಿ ಚಿಕ್ಕದು ಎಂಬ ಕಿಳರಿಮೆ ಇಂದ ಹೊರಬನ್ನಿ..ಕರ್ನಾಟಕ ಎಂಬುದು ಇಟಲಿ, ಜರ್ಮನಿ ಯಷ್ಟೇ ದೊಡ್ಡದು..ಅವರಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ್ದೆವೆ. ಜಗತ್ತಿನ ೨೩ನೇ ಅತಿ ಹೆಚ್ಚು ಜನರಾಡೋ‌ ಭಾಷೆ ಇದು.
  • ಕಿಳರಿಮೆ ತೊಡೆದ ನಂತರ, ಎಲ್ಲರೊಂದಿಗೆ ಪುಷ್ಕಳವಾದ ನೇರವಾದ ಕನ್ನಡದಲೇ ಮಾತಾಡಿ.ಎಷ್ಟೋ ಸಲ ನಾವು ಆಡುವ ಸುತ್ತಿ ಬಳಸಿದ ಸಪ್ಪೆ ಕನ್ನಡ‌ ನಮಗೇ ಬೆಸರ ಉಂಟು‌ಮಾಡುತ್ತದೆ.
  • ನಿಮ್ಮ ಮಕ್ಕಳು ಡಿಸ್ಕವರಿ, ಕಾರ್ಟೂನ್, ನ್ಯಾಷನಲ್ ಜಿಯೊಗ್ರಾಫಿಕ ಚಾನೆಲ್ ಕನ್ಬಡದಲಿ ನೊಡುವಂತಾಗಲು ಟಿ.ವಿ.ಸಿಸ್ಟಮ್‌ ಲ್ಯಾಂಗ್ವೆಜ್ ಸೆಟ್ ಅಪ್ ನಲಿ ಕನ್ನಡ ಅಂತ ಆಯ್ಕೆ ಮಾಡಿ.
  • ವೈಯಕ್ತಿಕವಾಗಿ ಕನ್ನಡಿಗನೊಂದಿಗೆ ಯಾವುದಾದರೂ ಭಾಷೆಲಿ ಮಾತನಾಡಿ..ಅದರೆ ಗುಂಪಿನಲಿ ಯಾರೇ ಇರಲಿ ನಿಮ್ಮ ಬಾಯಿಂದ ಕನ್ನಡವೇ ಬರಲಿ.
  • ಕನ್ನಡಪರರೊಂದಿಗೆ ಮಾತ್ರ ನಿಮ್ಮ ವ್ಯಾಪಾರ ವ್ಯವಹಾರಗಳಿರಲಿ..ಅಗ ಮಾತ್ರ ಕನ್ನಡಕ್ಕೆ‌ ಆನೆ‌ಬಲ‌ ಬರುವುದು..

ಇದು ಅತೀ‌ ಮಹತ್ವದ್ದು..ಅಕನ್ನಡಿಗರ ಮಣಿಸಲು, ವಲಸೆ ತಡೆಯಲು‌ ಇದೇ ಒಳರಣಸೂತ್ರ.

  • ನಿಮ್ಮ ಯುಟ್ಯುಬ್ ಚಾನೆಲ್ ನಲಿ ಆದಷ್ಟು ಕನ್ನಡದ ಚಾನೆಲಗ ಗಳಿಗೆ ಚಂದಾದಾರರಾಗಿ.ಇದರಿಂದ ಹೆಚ್ಚಿನ‌ ಕನ್ನಡ ಯುಟ್ಯುಬರ್ಸ ಗೆ ಹುರುಪು‌ ಸಿಗುತ್ತೆ.
  • ಕನ್ನಡಿಗರು ಅಲ್ಪತೃಪ್ತರು, ಅತೀ ಸಹಮತಿಗಳು ಎಂಬ ಹಣೆಪಟ್ಟಿ ಕಳಚುವಂತಾಗಲಿ.. ಕನ್ನಡ‌ ಸಿನಿಮಾನೇ ನೋಡಿ.

ಜಾಹಿರಾತುಗಳಲಿ ಪರಭಾಷಾ ನಟರು ಕಂಡೊಡನೆ ಆ ಕಂಪನಿಗೆ ಫೊನ್ ಮಾಡಿ ತರಾಟೆಗೆ ತೆಗೆದುಕೊಳ್ಳಿ..ಕನ್ನಡ ನಟರನು‌ ಜಾಹಿರಾತಲಿ ಬಳಸಿಕೊಳ್ಳಲು ಒತ್ತಾಯಿಸಿ.. ಕನ್ನಡ ಮೂಲದ ಕಂಪನಿಗಳ ಉತ್ಪನ್ನಗಳನೆ ಬಳಸಿ.

  • ಕಸ್ಟಮರ್ ಕೆರ್ ನಲ್ಲಂತೂ ಕನ್ನಡ ಬಿಟ್ಟು ಬೆರೆ ಭಾಷೆ ಮಾತಾಡಲೆಬಾರದು.. ಎಕೆಂದರೆ ಇದರಲಿ ಸಿಗುವ ದತ್ತಾಂಶಗಳಿಂದಲೆ‌ ಕಂಪನಿಗಳು ಕನ್ನಡಿಗರ ಮಾರ್ಕೆಟ್, ಅವರಿಗೆ ಸೆವೆ ಒದಗಿಸುವ ಭಾಷೆ , ಕನ್ನಡಗರ ಪುರೋಗಾಮಿತ್ವ ವನು ಲೆಕ್ಕ ಹಾಕುತ್ತಿರುತ್ತವೆ…ಆದ್ದರಿಂದ ಇಲ್ಲಿ ಮಾತ್ರ ಕನ್ನಡ ರಾರಾಜಿಸಲೆಬೆಕು .

ಕನ್ನಡಿಗ ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ ಕನ್ನಡ ಬೆಳೆದರೆ ಮಾತ್ರ ಕನ್ನಡಿಗ ಬೆಳೆಯುತ್ತಾನೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು.

ಕನ್ನಡವನ್ನು ಉಳಿಸಲು ಕನ್ನಡಿಗರು ತೆಗೆದುಕೊಳ್ಳಬೇಕಾದ ಕ್ರಮಗಳು

ಅರಿವು ಮೂಡಿಸುವದು.

ಕನ್ನಡ ಮಾತನಾಡುವುದು ಸಹ ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ ಎಂಬ ಅರಿವನ್ನು ನಾವು ಹರಡಬೇಕು. ಈಗ ಹಲವರು ಇಂಗ್ಲಿಷ್ ಮಾತನಾಡುವುದು ಒಳ್ಳೆಯದು ಮತ್ತು ನಾವು ವಿದ್ಯಾವಂತರು ಅಥವಾ ಉತ್ತಮ ಉದ್ಯೋಗದಲ್ಲಿ ಇದ್ದೇವೆ ಎಂದು ತೋರಿಸಿಕೊಳ್ಳುವುದಕ್ಕೆ ಇಂಗ್ಲಿಷ್ ನಲ್ಲಿ ಮಾತನಾಡುತ್ತಾರೆ.

ನಾವು ಈ ಪೊಳ್ಳು ವಾದದಿಂದ ಹೊರಬಂದು ಕನ್ನಡವನ್ನು ವಿಶ್ವಾಸದಿಂದ ಮಾತನಾಡಲು ಪ್ರಾರಂಭಿಸಬೇಕು.

ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ

ರಾಜ್ಯದ ಪ್ರತಿ ಶಾಲೆಯಲ್ಲೂ ಕನ್ನಡ ಕಲಿಸಲೇಬೇಕು, ಕರ್ನಾಟಕ ರಾಜ್ಯ ಅಥವಾ ಐಸಿಎಸ್ಇ ಅಥವಾ ಸಿಬಿಎಸ್ಇ, ಯಾವುದೇ ಇರಲಿ, ಕನ್ನಡ ಕಡ್ಡಾಯ ವಿಷಯವಾಗಿರಬೇಕು.

ಪಠ್ಯ ಪುಸ್ತಕವು ಉತ್ತಮ ಗುಣಮಟ್ಟದ್ದಾಗಿರಬೇಕು, ಇದರಿಂದಾಗಿ ವಿದ್ಯಾರ್ಥಿಯು ತನ್ನ ೧೦ ನೇ ತರಗತಿಯನ್ನು ಮುಗಿಸುವ ಹೊತ್ತಿಗೆ ಅವನು / ಅವಳು ಒಳ್ಳೆ ಗುಣಮಟ್ಟದ ಕನ್ನಡದಲ್ಲಿ ಏನನ್ನೂ ಬೇಕಾದರೂ ನಿರ್ವಹಿಸಲು ಸಾಧ್ಯವಾಗುತ್ತದೆ.

ಸಿಬಿಎಸ್‌ಇ / ಐಸಿಎಸ್‌ಇ ಶಾಲೆಗಳು ಅನೇಕರು ಕನ್ನಡವನ್ನು ಕಲಿಸಲು ನಿರಾಕರಿಸುತ್ತಾರೆ, ಸರ್ಕಾರ ಅಂತವರಿಗೆ ತಕ್ಕ ಶಾಸ್ತಿ ಮಾಡಬೇಕು.

ಕನ್ನಡ ಸರ್ಕಾರೀ ಶಾಲೆಗಳಿಗೆ ಇನ್ನಷ್ಟು ಒಳ್ಳೆಯ ಪ್ರೋತ್ಸಾಹ ಕೊಡಬೇಕು

ಈಗಿರುವ ಎಲ್ಲಾ ಕನ್ನಡ ಮಧ್ಯಮ ಶಾಲೆಗಳನ್ನು ಸರಾಗವಾಗಿ ನಿರ್ವಹಿಸಬೇಕು ಮತ್ತು ನಡೆಸಬೇಕು. ಶಾಲೆಗಳಿಗೆ ಸರಿಯಾದ ಕಟ್ಟಡಗಳು ಮತ್ತು ಬೋಧನಾ ಸಿಬ್ಬಂದಿ ಇರಬೇಕು.

ಅಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆಗೆ ತಿಂಗಳಿಗೆ ಪ್ರೋತ್ಸಾಹಧನ (100 ಅಥವಾ 200 ರೂ.) ನೀಡಬೇಕು, ಇದರಿಂದ ಹೆಚ್ಚಿನ ವಿದ್ಯಾರ್ಥಿಗಳು ಆ ಶಾಲೆಗಳಿಗೆ ಸೇರುತ್ತಾರೆ.

ಅಂತಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ಇರಬೇಕು.

ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳು

ಕನ್ನಡವು ಶ್ರೀಮಂತ ಸಾಹಿತ್ಯವನ್ನು ಹೊಂದಿದೆ, ಆದರೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳ ವಿಷಯಕ್ಕೆ ಬಂದರೆ ಅದು ತೀರಾ ಕಡಿಮೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ವಾಂಟಮ್ ಮೆಕ್ಯಾನಿಕ್ಸ್ ಮುಂತಾದ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಸಿದ್ಧಪಡಿಸಬೇಕಾಗಿದೆ. ಇದನ್ನು ಈಗಾಗಲೇ ಮುನ್ನೋಟ ತಂಡದ ಯುವ ಉತ್ಸಾಹಿಗಳು ಮಾಡುತ್ತಿದ್ದಾರೆ.

ಹೆಚ್ಚಿನ ಜನರು ಅವುಗಳನ್ನು ಓದುತ್ತಾರೆ ಮತ್ತು ಕನ್ನಡದಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಪತ್ರಿಕೆಗಳು ಸಹ ಇದರಲ್ಲಿ ಕೊಡುಗೆ ನೀಡಬಹುದು. ಅಂತಹ ಪುಸ್ತಕಗಳನ್ನು ಪ್ರೋತ್ಸಾಹಿಸಬೇಕಾಗಿದೆ, ಜನರು ಅವುಗಳನ್ನು ಹೆಚ್ಚು ಖರೀದಿಸಿ ಕಲಿಯಬೇಕು.

ಕನ್ನಡದಲ್ಲೇ ಹೊಸ ಪದಗಳನ್ನು ಕಟ್ಟಬೇಕು

ಮೊಬೈಲ್, ಚಾರ್ಜರ್, ಬ್ಲೂಟೂತ್, ವೈ-ಫೈ, ಮತ್ತು ಇನ್ನೂ ಅನೇಕ ತಾಂತ್ರಿಕ ಮತ್ತು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಪದಗಳಿಗೆ ಹೊಸ ಪದಗಳನ್ನು ರಚಿಸಬೇಕಾಗಿದೆ,

ಇದು ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತದೆ ಮತ್ತು ಯುವಕರು ಖಂಡಿತವಾಗಿಯೂ ಈ ಪದಗಳನ್ನು ದಿನನಿತ್ಯದ ಸಂವಹನದಲ್ಲಿ ತೆಗೆದುಕೊಳ್ಳುತ್ತಾರೆ.

ಓದುವ ಅಭ್ಯಾಸ

ಭಾರತದ ಇತರ ಭಾಷಾ ಗುಂಪುಗಳಿಗೆ ಹೋಲಿಸಿದರೆ ಕನ್ನಡಿಗರು ಕಡಿಮೆ ಓದುತ್ತಾರೆ. ಜನರು ಕಾದಂಬರಿಗಳು, ಪತ್ರಿಕೆಗಳು, ಇತ್ಯಾದಿಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.

ಆನ್‌ಲೈನ್‌ನಲ್ಲಿ ಓದುವಾಗಲೂ ಕನ್ನಡ ಆವೃತ್ತಿಗೆ ಆದ್ಯತೆ ನೀಡಬೇಕು.

ಗುಣಮಟ್ಟದ ಚಲನಚಿತ್ರಗಳು / ಮನರಂಜನೆ

ಕನ್ನಡವು ಬಲವಾದ ಸಿನೆಮಾ ಅಡಿಪಾಯವನ್ನು ಹೊಂದಿದೆ. ಆದರೆ ನಾವು ಈಗ ಗುಣಮಟ್ಟದ ಚಲನಚಿತ್ರಗಳನ್ನು ನೋಡುತ್ತಿಲ್ಲ. ರಿಮೇಕ್‌ಗಳನ್ನು ನಿಲ್ಲಿಸಬೇಕಾಗಿದೆ, ಡಬ್ಬಿಂಗ್ ಅನ್ನು ಪ್ರೋತ್ಸಾಹಿಸಬೇಕಾಗಿದೆ.

ಬಾಹುಬಲಿ ಪ್ರತಿಯೊಬ್ಬ ಭಾರತೀಯನನ್ನು ತೆಲುಗಿನತ್ತ ಆಕರ್ಷಿಸಿದಂತೆಯೇ ಗುಣಮಟ್ಟದ ಚಲನಚಿತ್ರಗಳು ನಮ್ಮ ಚಲನಚಿತ್ರಗಳತ್ತ ಕನ್ನಡಿಗರನ್ನು ಮತ್ತು ಬೇರೆಯವರನ್ನುಆಕರ್ಷಿಸುತ್ತವೆ.

ಸ್ಟ್ಯಾಂಡ್ ಅಪ್ ಕಾಮಿಡಿ, ರಾಪ್ ಮ್ಯೂಸಿಕ್, , ಆನ್‌ಲೈನ್ ವೆಬ್ ಸರಣಿಗಳು ಮುಂತಾದ ವಿವಿಧ ರೀತಿಯ ಮನರಂಜನೆಗಳು ಬರಬೇಕಿದೆ, ಅದು ಈಗ ಇಂಗ್ಲಿಷ್‌ನಲ್ಲಿ ಮಾತ್ರ ಇದೆ.

ಕನ್ನಡದಲ್ಲಿ ಇವೆಲ್ಲವೂ ಬಹಳ ಬಾಲ್ಯ ಹಂತದಲ್ಲಿದೆ, ಅದು ತುಂಬಾ ಬಲವಾಗಿ ಬೆಳೆಯಬೇಕು.

ಸಂಸ್ಕೃತ ಪ್ರಭಾವ

ಕನ್ನಡದಿಂದ ಸಂಸ್ಕೃತ ಪದಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ನಾನು ಹೇಳುವುದಿಲ್ಲ ಹಾಗೆಯೇ ಕನ್ನಡದಲ್ಲಿ ಹೆಚ್ಚು ಸಂಸ್ಕೃತ ಪದಗಳನ್ನು ಸೇರಿಸಲು ನಾನು ಪ್ರೋತ್ಸಾಹಿಸುವುದಿಲ್ಲ.

ಸಮತೋಲನ ಇರಬೇಕು. ಸರಳ ಸ್ಥಳೀಯ ಕನ್ನಡ ಪದಗಳಿದ್ದಾಗ, ಕಠಿಣ ಸಂಸ್ಕೃತ ಪದಗಳ ಬದಲಿಗೆ ಅವುಗಳನ್ನು ಬಳಸೋಣ.

ನಾನು ಇಲ್ಲಿ ಒಂದು ಉದಾಹರಣೆಯನ್ನು ನೀಡಲು ಇಷ್ಟಪಡುತ್ತೇನೆ.

“ಹೆಲ್ಮೆಟ್ ಧರಿಸಿ, ವಾಹನ ಚಲಾಯಿಸಿ” ಸಂಸ್ಕೃತ ಮಿಶ್ರಿತಕನ್ನಡ

“ಹೆಲ್ಮೆಟ್ ಹಾಕಿಕೊಂಡು , ಗಾಡಿ ಓಡಿಸಿ” ಸರಳ ಕನ್ನಡ

ಇಲ್ಲಿ ನಾವು ಎರಡನೇ ಸಾಲನ್ನು ಬಳಸಲು ಆದ್ಯತೆ ನೀಡಬಹುದು.

ಹೆಚ್ಚು ಸರಳವಾದ ಭಾಷೆಗೆ, ಸ್ಥಳೀಯರು ಮತ್ತು ಹೊರಗಿನವರು ಆಕರ್ಷಿತರಾಗುತ್ತಾರೆ ಮತ್ತು ಅದನ್ನು ಕಲಿಯುತ್ತಾರೆ.

ಕನ್ನಡ ಕೋಚಿಂಗ್ ತರಗತಿಗಳು / ಕಾರ್ಪೊರೇಟ್ ಜವಾಬ್ದಾರಿ

ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಎರಡೂ ಕನ್ನಡ ಕಲಿಸುವ ತರಗತಿಗಳನ್ನು ನಡೆಸಬೇಕು ಮತ್ತು ಮಾತನಾಡುವ ಮತ್ತು ಲಿಖಿತ ಕನ್ನಡವನ್ನು ರಾಜ್ಯದಲ್ಲಿ ವಾಸಿಸುವ ಕನ್ನಡಿಗರಲ್ಲದವರಿಗೆ ಕಲಿಸಬೇಕು.

ಇದನ್ನು ಈಗಾಗಲೇ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ, ಇದನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೇರೆಯವರು ಕಾರ್ಪೊರೇಟ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವುದರಿಂದ, ಅವರು ತಮ್ಮ ಉದ್ಯೋಗಿಗಳಿಗೆ ಕನ್ನಡವನ್ನು ಕಲಿಸಲು ವ್ಯವಸ್ಥೆ ಮಾಡಬೇಕು.

ಇನ್ಫೋಸಿಸ್, ಟಿಸಿಎಸ್ ಮುಂತಾದ ಕೆಲವು ಐಟಿ ಕಂಪನಿಗಳಲ್ಲಿ ಇದನ್ನು ಈಗಾಗಲೇ ಮಾಡಲಾಗುತ್ತಿದೆ, ಇದನ್ನು ಇತರ ಕಂಪನಿಗಳು ಸಹ ಅನುಕರಿಸಬಹುದು.

ಇಂಗ್ಲಿಷ್ ಲಿಪಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡವನ್ನು ಬರೆಯಲು ಬಳಸುವುದ

ಇದು ನನ್ನ ವಯುಕ್ತಿಕ ಅಭಿಪ್ರಾಯ. ನಾವು ಎಲ್ಲಾ ಬೋರ್ಡ್‌ಗಳಲ್ಲಿ ಮೊದಲು ಕನ್ನಡ, ನಂತರ ಇಂಗಿಷ್ ಮತ್ತು ಕೆಳಗೆ ರೋಮನ್ ಲಿಪಿಯಲ್ಲಿ ಕನ್ನಡದಲ್ಲಿ ಬರೆಯಬಹುದು,

ಇದರಿಂದಾಗಿ ಕನ್ನಡಿಗರಲ್ಲದವರು ಅದನ್ನು ಓದುತ್ತಾರೆ ಮತ್ತು ಇಂಗ್ಲಿಷ್‌ನೊಂದಿಗೆ ಹೋಲಿಕೆ ಮಾಡಲು ಪ್ರಯತ್ನಿಸುತ್ತಾರೆ ಮತ್ತು ಸಾಧ್ಯವಾದಷ್ಟು ಕಲಿಯುತ್ತಾರೆ.

ಎಲ್ಲಾ ಕಡೆ ಅಲ್ಲದಿದ್ದರೂ, ಇಬ್ಬರಿಗೂ ಕನ್ನಡ ಮಾತನಾಡಲು ಬರುವಾಗ ಕನ್ನಡ ಮಾತನಾಡಲು ಏನು ಕಷ್ಟ? ಉದಾಹರಣೆಗೆ ಮಲಯಾಳಿಗಳನ್ನು ನೋಡಿ. ಎತ್ತ ಹೋದರೂ, ಅವರು ತಮ್ಮ ಬಾಷೆಯನ್ನು ಬಿಟ್ಟು ಕೊಡುವುದಿಲ್ಲ.

ನನ್ನೊಂದಿಗೆ ಮಾತನಾಡುವವ ಮಲಯಾಳಿ ಎಂಬ ಒಂದು ಕುರುಹು ಸಿಕ್ಕಿದರೂ ಸಾಕು, ಶುರು ಹಚ್ಚುತ್ತಾರೆ. ಹತ್ತಿರದಲ್ಲಿ ಮಲಯಾಳಿ ಬಾರದವರಿದ್ದರೂ, ಅವನನ್ನು ಕಡೆಗಣಿಸಿ ಅವರು ತಮ್ಮದೇ ಭಾಷೆಯಲ್ಲಿ ಮುಂದುವರೆಯುತ್ತಾರೆ.

ನಾವೂ ಅಪ್‍ಡೇಟ್ ಆಗುವ. ಸಾಮಾಜಿಕ ಜಾಲತಾಣಗಳಲ್ಲಿ, ಇತರ ಜಾಲತಾಣಗಳಲ್ಲಿ ಕನ್ನಡದ ಬಳಕೆ ಮಾಡುವ. ಇಂಗ್ಲೀಷ್ ಭಾಷೆಯ ಮೇಲಿನ ವ್ಯಾಮೋಹ ಕಮ್ಮಿಯಾದಾಗ ಮಾತ್ರ ನಾವು ಇದನ್ನು ಮಾಡಲು ಸಾಧ್ಯ.

ಕೆಲವು ಪದಗಳ ಬಳಕೆಯೂ ಅಷ್ಟೇ. ಇಂಗ್ಲೀಷ್ ಪದಗಳನ್ನು ನಾವು ನಮ್ಮ ಭಾಷೆಗೆ ಅನುವಾದಿಸದೇ, ಮೂಲ ಭಾಷೆಯ ಪದಗಳನ್ನೇ ಬಳಸುತ್ತೇವೆ.

ಅದರಲ್ಲೂ ಬದಲಾವಣೆ ತರಬಹುದಾಗಿದೆ. ಬೇಗನೇ ಒಗ್ಗಿಕೊಳ್ಳಲಾಗದಿದ್ದರೂ, ಹಂತಹಂತವಾಗಿ ಬದಲಾವಣೆ ತರಬಹುದಾಗಿದೆ.

ನಾವು ನಿರಂತರವಾಗಿ ನಮ್ಮ ಭಾಷೆಯನ್ನು ಹೆಮ್ಮೆಯಿಂದ ಮತ್ತು ಆತ್ಮವಿಶ್ವಾಸದಿಂದ ಬಳಸಿದರೆ, ಖಂಡಿತವಾಗಿಯೂ ಅದರ ಬಳಕೆ ಹೆಚ್ಚಾಗುತ್ತದೆ.

ಹೆಚ್ಚುತ್ತಿರುವ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತಿದೆ. ರಾಜ್ಯದಲ್ಲಿ ಮಾತೃಭಾಷೆ ರಕ್ಷಣೆಗೆ ಕಾನೂನು ಹೋರಾಟ ಅನಿವಾರ್ಯವಾಗಿದೆ.

“ಪ್ರಾದೇಶಿಕ ಭಾಷೆಗಳನ್ನು ರಕ್ಷಿಸಲು ನಾವು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ, ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಬೇಕಾದ ಸಮಯ ಇದು”

ಎಸ್‍ಎಸ್‍ಎಲ್‍ಸಿ ವರೆಗೆ ಕನ್ನಡ ಭಾಸೆಯ ಕಲಿಕೆ ಕಡ್ಡಾಯವಾಗಿದೆ. ಆದರೆ, ಪದವಿ ಪೂರ್ವ ತರಗತಿಯಿಂದ, ಕನ್ನಡವು ಒಂದು ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯನ್ನು ಕಡ್ಡಾಯ ಮಾಡಿ, ಕನ್ನಡದೊಂದಿಗೆ, ಹಿಂದಿ ಮತ್ತು ಸಂಸ್ಕøತವನ್ನೂ ಆಯ್ಕೆಯಾಗಿ ನೀಡಲಾಗುತ್ತದೆ.

ಇದನ್ನು ಬಿಟ್ಟು, ಆಂಗ್ಲ ಮಾಧ್ಯಮ ಕಾಲೇಜಾಗಲಿ, ಕನ್ನಡ ಮಾಧ್ಯಮವಾಗಲಿ, ಕನ್ನಡವನ್ನು ಕಡ್ಡಾಯ ಭಾಷೆಯಾಗಿಸಬೇಕು.

ಕಳೆದ ನಾಲ್ಕು ದಶಕಗಳನ್ನು ಅವಲೋಕಿಸಿದಾಗ ಕನ್ನಡದ ಬಳಕೆ ತೀವ್ರವಾಗಿ ಕುಸಿದಿದೆ, ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೆರಡು-ಮೂರು ದಶಕಗಳಲ್ಲಿ ಕನ್ನಡದಲ್ಲಿ ಯಾರೂ ವ್ಯಾಪಾರ ಮಾಡುವುದಿಲ್ಲ. 

ಭಾಷೆಯ ರಕ್ಷಣೆಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಆಂಗ್ಲ ಮಾಧ್ಯಮದಲ್ಲಿ ತರಗತಿಗಳನ್ನು ವಿರೋಧಿಸುವ ಅಗತ್ಯವಿದೆ

 ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಬೇಕು ಮತ್ತು ಪ್ರಪಂಚದ ಯಾವುದೇ ಭಾಷೆಯನ್ನು ಕಲಿಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ . ಭಾಷೆ ಮತ್ತು ಸಂಸ್ಕೃತಿ ಅಧಃಪತನವಾಗುತ್ತಿರುವುದರಿಂದ ಕನ್ನಡ ಮಾತನಾಡುವ ಅನೇಕ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. 

ಕನ್ನಡವನ್ನು ಉಳಿಸುವುದು ಹೇಗೆ ಎಂಬಂತಹ ಪ್ರಶ್ನೆಗಳೇಕೆ ಉದ್ಭವಿಸುತ್ತದೋ ಗೊತಿಲ್ಲ! ಕನ್ನಡ ವಿನಾಶದ ಅಂಚಿನಲ್ಲಿರುವ ಭಾಷೆ ಎಂದು ನೀವು ಭಾವಿಸಿರಬೇಕು.

ಕನ್ನಡದ ಉಳಿವು, ಕನ್ನಡವನ್ನು ಉಳಿಸೋಣ, ಕನ್ನಡವನ್ನು ರಕ್ಷಿಸೋಣ ನಮ್ಮವರೇ ನಮಗಾಗಿ ನಿಲ್ಲದಾಗ, ಇತರರಾದರೂ, ಏನು ಮಾಡಲು ಸಾಧ್ಯ

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ – Kannada Bhashe Ulisuvalli Kannadaigara Paatra Essay in Kannada

ಇತರ ಪ್ರಭಂದಗಳು

ಕನ್ನಡ ನಾಡು ನುಡಿ ಪ್ರಬಂಧ

ಕನ್ನಡ ಭಾಷೆಯ ಬಗ್ಗೆ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪ್ರಬಂಧ

ಕನ್ನಡ ರಾಜ್ಯೋತ್ಸವ ಬಗ್ಗೆ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ  Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ  ಟೆಲಿಗ್ರಾಮ್  ಗೆ ಜಾಯಿನ್ ಆಗಿ 

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಕನ್ನಡದಲ್ಲಿ ಪ್ರಬಂಧ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

' src=

One thought on “ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ | Kannada Bhashe Ulisuvalli Kannadaigara Paatra Essay in Kannada ”

' src=

ಒಳ್ಳೆಯ ಪ್ರಬಂಧ ಚೆನ್ನಾಗಿತ್ತು ನಮ್ಮ ನಾಡು ನುಡಿ ಕನ್ನಡ ಜೈ ಕರ್ನಾಟಕ

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

IMAGES

  1. how to write essay in kannada step by step

    nagarikarana essay in kannada

  2. Importance Of School Essay In Kannada Pdf

    nagarikarana essay in kannada

  3. essay about granthalaya mahatva in Kannada

    nagarikarana essay in kannada

  4. Antharala- Durga Bhagawat's Award Winning Essays (Kannada)

    nagarikarana essay in kannada

  5. ಪ್ರಾಕ್ತನ (ರಾ. ನರಸಿಂಹಾಚಾರ್ಯರ ಲೇಖನಗಳು ಭಾಷಣಗಳು)- Prakthana (Articles By R

    nagarikarana essay in kannada

  6. Click Here To Download

    nagarikarana essay in kannada

VIDEO

  1. ರಕ್ತದಾನ ಮತ್ತು ನೇತ್ರದಾನಗಳ ಮಹತ್ವ ಪ್ರಬಂಧ kannada prabandha essay raktadana netradangala mahatva

  2. ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ

  3. ಕಂಪ್ಯೂಟರ್ ಶಿಕ್ಷಣ ಪ್ರಬಂಧ prabandha essay kannada computer shikshana

  4. ಸಾಮಾಜಿಕ ಪಿಡುಗು prabandha essay kannada samajika pidugugalu

  5. ರಾಷ್ಟ್ರೀಯ ಭಾವೈಕ್ಯತೆ ಕನ್ನಡ ಪ್ರಬಂಧ kannada prabandha essay

  6. ಜನಸಂಖ್ಯಾ ಸ್ಫೋಟ ಮತ್ತು ಅದರ ಕಾರಣಗಳು/ Causes of population explosion kAnnada Essay

COMMENTS

  1. ಜಾಗತೀಕರಣದ ಬಗ್ಗೆ ಪ್ರಬಂಧ

    ಜಾಗತೀಕರಣದ ಬಗ್ಗೆ ಪ್ರಬಂಧ, Jagatikarana Essay In Kannada, globalization essay in kannada, ಜಾಗತೀಕರಣದ ಪ್ರಬಂಧ, jagatikarana prabandha in kannada

  2. ಜಾಗತೀಕರಣದ ಬಗ್ಗೆ ಪ್ರಬಂಧ

    ಜಾಗತೀಕರಣದ ಬಗ್ಗೆ ಪ್ರಬಂಧ, Essay About Globalization in Kannada, ಜಾಗತೀಕರಣದ ಪರಿಣಾಮಗಳು ಪ್ರಬಂಧ, Jagatikarana Prabandha in Kannada

  3. ಜಾಗತೀಕರಣ ಪ್ರಬಂಧ

    ಜಾಗತೀಕರಣ ಪ್ರಬಂಧ Globalization Essay in Kannada Jagatikarana Prabandha in Kannada jagatikarana essay in kannada essay on jagatikarana in kannada. Tuesday, April 9, 2024. Education. Prabandha. information. Jeevana Charithre. Speech. Kannada Lyrics. Bakthi. Kannada News. information. Festival. Entertainment ...

  4. ಮಹಿಳಾ ಸಬಲೀಕರಣ ಪ್ರಬಂಧ

    ಮಹಿಳಾ ಸಬಲೀಕರಣ ಪ್ರಬಂಧ, mahila sabalikaran prabandha in kannada, Mahhila Sabalikarana Essay Writing in kannada, ಆರ್ಥಿಕ ಭದ್ರತೆಯಿಂದ ಮಹಿಳಾ ಪ್ರಬಂಧ

  5. ಜಾಗತೀಕರಣ

    ಮುಖ್ಯ ಪುಟ; ಸಮುದಾಯ ಪುಟ; ಪ್ರಚಲಿತ; ಇತ್ತೀಚೆಗಿನ ಬದಲಾವಣೆಗಳು; ಯಾವುದೋ ಒಂದು ಪುಟ

  6. ಪ್ರಬಂಧ

    ಮುಖ್ಯ ಪುಟ; ಸಮುದಾಯ ಪುಟ; ಪ್ರಚಲಿತ; ಇತ್ತೀಚೆಗಿನ ಬದಲಾವಣೆಗಳು; ಯಾವುದೋ ಒಂದು ಪುಟ

  7. 350+ ಕನ್ನಡ ಪ್ರಬಂಧಗಳು

    Prabandhagalu in Kannada PDF. 350+ ಕನ್ನಡ ಪ್ರಬಂಧಗಳು | Prabandhagalu in Kannada Essay List Free For Students.

  8. ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana

    ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana. ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ, Krishi Sanskriti Mattu Jagatikarana Questions and Answers Pdf, Notes, Summary, 1st PUC Kannada Prabandha, ಪ್ರತಮ ಪಿ.ಯು.ಸಿ ...

  9. ಜಾಗತೀಕರಣ ಪ್ರಬಂಧ Jagatikarana Prabandha In Kannada Best No1 Essay

    jagatikarana prabandha in kannada, Jagatikarana Prabandha in Kannada, ಜಾಗತೀಕರಣ ಪ್ರಬಂಧ, ಜಾಗತೀಕರಣ ಪ್ರಬಂಧ Globalization Essay in Kannada Jagatikarana Prabandha in Kannada jagatikarana essay in kannada essay on jagatikarana in kannada, ಜಾಗತೀಕರಣ ಪ್ರಬಂಧ ಕನ್ನಡ Pdf, ಜಾಗತೀಕರಣದ ಬಗ್ಗೆ ...

  10. ಭಾರತದಲ್ಲಿ ನಗರೀಕರಣ ಸಮಸ್ಯೆ ಮತ್ತು ಸವಾಲುಗಳು

    Kannada essays ಭಾರತದಲ್ಲಿ ನಗರೀಕರಣ ಸಮಸ್ಯೆ ಮತ್ತು ಸವಾಲುಗಳು | Urbanization problem and challenges in India 2024 | Essay for IAS, KAS Amith Send an email July 28, 2023. 0 609 12 minutes read.

  11. 400+ ಕನ್ನಡ ಪ್ರಬಂಧಗಳು

    ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List

  12. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ ಕನ್ನಡ

    ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ ಕನ್ನಡ Parisara ...

  13. ಮಹಿಳಾ ಸಬಲೀಕರಣ ಪ್ರಬಂಧ

    This entry was posted in Prabandha and tagged Essay in Kannada, Kannada, Mahila Sabalikarana, ಪ್ರಬಂಧ, ಮಹಿಳಾ ಸಬಲೀಕರಣ. kannadastudy24 ವನ್ಯಜೀವಿಗಳ ಸಂರಕ್ಷಣೆ ಪ್ರಬಂಧ | Vanyajeevi Samrakshane Essay in Kannada

  14. ನಾಗಚಂದ್ರ

    ಕಾಲ. ನಾಗಚಂದ್ರ ಹನ್ನೆರಡನೆಯ ಶತಮಾನ. ಪ್ರಸಿದ್ಧ ಜೈನಕವಿ. ಅಭಿನವ ಪಂಪ ಎಂಬುದು ಈತನ ಬಿರುದು.

  15. ಮಹಿಳಾ ಸಬಲೀಕರಣ ಪ್ರಬಂಧ

    ಮಹಿಳಾ ಸಬಲೀಕರಣ ಪ್ರಬಂಧ, Mahila Sabalikaran Prabandha in Kannada, mahila sabalikaran essay in kannada, women empowerment essay in kannada

  16. ಕರ್ನಾಟಕ ಏಕೀಕರಣ ಪ್ರಬಂಧ

    ನಮಸ್ತೆ ಗೆಳೆಯರೆ, ನಾವಿಂದು ಚರ್ಚಿಸುವ ವಿಷಯ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಬಗ್ಗೆ. ಈ ಕರ್ನಾಟಕ ಏಕೀಕರಣದ ಹಿಂದೆ ಅನೇಕ ಜನರ ಹೋರಟ ಪ್ರಾಣ ತ್ಯಾಗ ...

  17. ಪರಿಸರ ಸಂರಕ್ಷಣೆ

    •─ ━━━━━━━━━━━━━━• -THANKS YOU...Description:🦋 ️FOLLOW ME ️🦋What's App Channel:https://whatsapp.com/channel ...

  18. ನವರಸಗಳು ಕಲಾತ್ಮಕತೆಯ ಅಭಿವ್ಯಕ್ತಿಗಳನ್ನು ವಿಸ್ತರಿಸುತ್ತದೆ: ಟಿ.ಎಸ್.‌ ನಾಗಾಭರಣ

    Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

  19. ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ ಪ್ರಬಂಧ

    ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ ಪ್ರಬಂಧ, Notes Demonstration and black money Essay In Kannada, Notu Amanyikarana Mattu Kappu Hana Prabandha

  20. ಕರ್ನಾಟಕ

    ಮುಖ್ಯ ಪುಟ; ಸಮುದಾಯ ಪುಟ; ಪ್ರಚಲಿತ; ಇತ್ತೀಚೆಗಿನ ಬದಲಾವಣೆಗಳು; ಯಾವುದೋ ಒಂದು ಪುಟ

  21. ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

    ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ, Parisara Malinya Prabandha In Kannada, Parisara Malinya Essay in Kannaḑ̧̧a, Parisara Malinya in Kannada

  22. ನನ್ನ ರಾಷ್ಟ್ರದ ಬಗ್ಗೆ ಪ್ರಬಂಧ

    ನನ್ನ ರಾಷ್ಟ್ರದ ಬಗ್ಗೆ ಪ್ರಬಂಧ Essay On My Nation in Kannada nanna rashtrada bagge prabandha indian essay in kannada

  23. ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ

    ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ - Kannada Bhashe Ulisuvalli Kannadaigara Paatra Essay in Kannada. ಇತರ ಪ್ರಭಂದಗಳು. ಕನ್ನಡ ನಾಡು ನುಡಿ ಪ್ರಬಂಧ